‘ಚಾಮರಾಜನಗರದಲ್ಲಿ 34 ಮಂದಿ ಆಮ್ಲಜನಕವಿಲ್ಲದೆ ಸತ್ತರೂ ಬಾರದ ಪ್ರಧಾನಿ, ಹುಲಿ ನೋಡಲು ಬಂದಿರುವುದು ಅವರ ಅಧಿಕಾರ ದುರುಪಯೋಗಕ್ಕೆ ಹಿಡಿದ ಕೈಗನ್ನಡಿ. ಬಂಡೀಪುರ ಅರಣ್ಯದಲ್ಲಿ ಅನೇಕ ಕಾನೂನು ಕ್ರಮಗಳಿವೆ. ಪ್ರಾಣಿಗಳ ಹಿತಕ್ಕಾಗಿ ಅರಣ್ಯ ವಾಸಿಗಳನ್ನೇ ಒಕ್ಕಲೆಬ್ಬಿಸುವ ಕಾನೂನುಳಿರುವಾಗ ಮೋದಿ ಭೇಟಿಗಾಗಿ 3 ಹೆಲಿಪ್ಯಾಡ್ ನಿರ್ಮಾಣ, ಕ್ಯಾಮೆರಾಮ್ಯಾನ್, ಎಸ್.ಪಿ.ಜಿ. ಸಿಬ್ಬಂದಿಯ 9 ಜೀಪುಗಳು, 1 ಆಂಬುಲೆನ್ಸ್ ನಿಲ್ಲಿಸಿ ಏಕವ್ಯಕ್ತಿ ಮೆರವಣಿಗೆಗೆ ಅವಕಾಶ ಮಾಡಿಕೊಟ್ಟದ್ದು ಹೇಗೆ ಎಂಬುದಕ್ಕೆ ಪ್ರತಾಪ ಸಿಂಹ ಉತ್ತರಿಸಲಿ’ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.