ಈ ವೇಳೆ ಮಾತನಾಡಿದ ಚಿಂತಕ ಪ.ಮಲ್ಲೇಶ್, ‘ಬೇಲಿಯೇ ಎದ್ದು ಹೊಲ ಮೇಯ್ತು ಎಂಬಂತೆ ಈ ಘಟನೆ ನಡೆದಿದೆ. ಸಮಾಜದಲ್ಲಿ ಮೌಲ್ಯಗಳನ್ನು ಪ್ರತಿಷ್ಠಾಪಿಸಿ, ದಾರಿದೀಪವಾಗಿ ಸೈದ್ಧಾಂತಿಕವಾಗಿ ಬದುಕನ್ನು ಕಟ್ಟಿಕೊಡಬೇಕಾದ ವ್ಯಕ್ತಿಗಳೇ ಊಹಿಸಲು ಅಸಾಧ್ಯವಾದ ಅನ್ಯಾಯವನ್ನು ಮಾಡಿದ್ದಾರೆ. ಮುರುಘಾಮಠವು ಜಂಗಮಮಠ. ಅದು ಸ್ಥಾಯಿಯಾಗಿರದೇ, ಸದಾ ಚಲನಶೀಲವಾಗಿತ್ತು. ಇದೀಗ ಪೀಠಾಧಿಪತಿಯಿಂದಲೇ ದೌರ್ಜನ್ಯ ನಡೆದಿದ್ದರೂ, ಸರ್ಕಾರ ಕಣ್ಮುಚ್ಚಿ ಕೂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.