<p><strong>ಮೈಸೂರು:</strong> ಇಲ್ಲಿನ ನಟನ ರಂಗಶಾಲೆಯಿಂದ ನೀಡಲಾಗುವ 2026ನೇ ಸಾಲಿನ ‘ನಟನ ಪುರಸ್ಕಾರ’ಕ್ಕೆ ಕಲಾವಿದೆ ರಾಮೇಶ್ವರಿ ವರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ.</p><p>ರಂಗಭೂಮಿಗೆ ಅರ್ಪಿಸಿಕೊಂಡು ಬದುಕನ್ನು ಸವೆಸಿದ ಸಾಧಕರನ್ನು ಗುರುತಿಸಿ, ಮುಂದಿನ ತಲೆಮಾರಿಗೆ ಪರಿಚಯಿಸಿ ಗೌರವಿಸುವ ನಿಟ್ಟಿನಲ್ಲಿ, ನಟನದ ಅಧ್ಯಕ್ಷರಾಗಿದ್ದ ಎನ್.ಸುಬ್ರಹ್ಮಣ್ಯಂ ಅವರ ಗೌರವಾರ್ಥ ನೀಡುವ ಪುರಸ್ಕಾರ ಇದಾಗಿದೆ.</p><p>‘ರಂಗಭೂಮಿಯಲ್ಲಿ ಬಹುಕಾಲ ಜೀವನ ಸವೆಸಿ ಸಿನಿಮಾ, ಕಿರುತೆರೆ ಕ್ಷೇತ್ರದಲ್ಲಿ ಬಹು ದೀರ್ಘವಾಗಿ ತೊಡಗಿಕೊಂಡಿರುವ ಕನ್ನಡ ರಂಗಭೂಮಿಯ ಕಲಾವಿದೆ ರಾಮೇಶ್ವರಿ ವರ್ಮಾ ಅವರಿಗೆ ಸಮರ್ಪಿಸಲಾಗುವುದು. ಪ್ರಶಸ್ತಿಯು ಸ್ಮರಣಿಕೆ, ಅಭಿನಂದನಾಪತ್ರ ಮತ್ತು ನಗದು ಒಳಗೊಂಡಿದೆ’ ಎಂದು ನಟನದ ಮಂಡ್ಯ ರಮೇಶ್ ತಿಳಿಸಿದ್ದಾರೆ.</p><p>‘ಏ.14ರಂದು ಕೃಷಮೂರ್ತಿಪುರಂನ ಬಿ.ಎಸ್.ಎಸ್. ವಿದ್ಯೋದಯ (ಭಗಿನಿ ಸೇವಾ ಸಮಾಜ) ಶಾಲೆಯ ಆವರಣದಲ್ಲಿ ನಡೆಯುವ ನಟನದ 24ನೇ ವರ್ಷದ ‘ರಜಾ-ಮಜಾ’ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.</p><p>ಲಕ್ಷ್ಮೀಬಾಯಿ ಏಣಗಿ ಬಾಳಪ್ಪ, ರಂಗಭೂಮಿ ಕಲಾವಿದೆ ಎಂ.ಎನ್.ಲಕ್ಷ್ಮೀದೇವಿ, ಸುಭದ್ರಮ್ಮ ಮನ್ಸೂರ್, ಆರ್.ಟಿ.ರಮಾ, ಗುಬ್ಬಿ ಕಂಪನಿಯ ಕಲಾವಿದೆ ಶಾಂತಮ್ಮ, ಇಂದಿರಮ್ಮ, ಜಯಲಕ್ಷ್ಮೀ ಪಾಟೀಲ, ರಾಧಾ – ರುಕ್ಮಿಣಿ ಈ ಹಿಂದೆ ಈ ಪ್ರಶಸ್ತಿಗೆ ಭಾಜನವಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಇಲ್ಲಿನ ನಟನ ರಂಗಶಾಲೆಯಿಂದ ನೀಡಲಾಗುವ 2026ನೇ ಸಾಲಿನ ‘ನಟನ ಪುರಸ್ಕಾರ’ಕ್ಕೆ ಕಲಾವಿದೆ ರಾಮೇಶ್ವರಿ ವರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ.</p><p>ರಂಗಭೂಮಿಗೆ ಅರ್ಪಿಸಿಕೊಂಡು ಬದುಕನ್ನು ಸವೆಸಿದ ಸಾಧಕರನ್ನು ಗುರುತಿಸಿ, ಮುಂದಿನ ತಲೆಮಾರಿಗೆ ಪರಿಚಯಿಸಿ ಗೌರವಿಸುವ ನಿಟ್ಟಿನಲ್ಲಿ, ನಟನದ ಅಧ್ಯಕ್ಷರಾಗಿದ್ದ ಎನ್.ಸುಬ್ರಹ್ಮಣ್ಯಂ ಅವರ ಗೌರವಾರ್ಥ ನೀಡುವ ಪುರಸ್ಕಾರ ಇದಾಗಿದೆ.</p><p>‘ರಂಗಭೂಮಿಯಲ್ಲಿ ಬಹುಕಾಲ ಜೀವನ ಸವೆಸಿ ಸಿನಿಮಾ, ಕಿರುತೆರೆ ಕ್ಷೇತ್ರದಲ್ಲಿ ಬಹು ದೀರ್ಘವಾಗಿ ತೊಡಗಿಕೊಂಡಿರುವ ಕನ್ನಡ ರಂಗಭೂಮಿಯ ಕಲಾವಿದೆ ರಾಮೇಶ್ವರಿ ವರ್ಮಾ ಅವರಿಗೆ ಸಮರ್ಪಿಸಲಾಗುವುದು. ಪ್ರಶಸ್ತಿಯು ಸ್ಮರಣಿಕೆ, ಅಭಿನಂದನಾಪತ್ರ ಮತ್ತು ನಗದು ಒಳಗೊಂಡಿದೆ’ ಎಂದು ನಟನದ ಮಂಡ್ಯ ರಮೇಶ್ ತಿಳಿಸಿದ್ದಾರೆ.</p><p>‘ಏ.14ರಂದು ಕೃಷಮೂರ್ತಿಪುರಂನ ಬಿ.ಎಸ್.ಎಸ್. ವಿದ್ಯೋದಯ (ಭಗಿನಿ ಸೇವಾ ಸಮಾಜ) ಶಾಲೆಯ ಆವರಣದಲ್ಲಿ ನಡೆಯುವ ನಟನದ 24ನೇ ವರ್ಷದ ‘ರಜಾ-ಮಜಾ’ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.</p><p>ಲಕ್ಷ್ಮೀಬಾಯಿ ಏಣಗಿ ಬಾಳಪ್ಪ, ರಂಗಭೂಮಿ ಕಲಾವಿದೆ ಎಂ.ಎನ್.ಲಕ್ಷ್ಮೀದೇವಿ, ಸುಭದ್ರಮ್ಮ ಮನ್ಸೂರ್, ಆರ್.ಟಿ.ರಮಾ, ಗುಬ್ಬಿ ಕಂಪನಿಯ ಕಲಾವಿದೆ ಶಾಂತಮ್ಮ, ಇಂದಿರಮ್ಮ, ಜಯಲಕ್ಷ್ಮೀ ಪಾಟೀಲ, ರಾಧಾ – ರುಕ್ಮಿಣಿ ಈ ಹಿಂದೆ ಈ ಪ್ರಶಸ್ತಿಗೆ ಭಾಜನವಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>