<p><strong>ಧರ್ಮಾಪುರ</strong>: ಸಮೀಪದ ರತ್ನಪುರಿಯಲ್ಲಿ ನಡೆಯುತ್ತಿದ್ದ 62ನೇ ವರ್ಷದ ಜಾನುವಾರು ಜಾತ್ರೆಗೆ ಸೋಮವಾರ ತೆರೆ ಬಿದ್ದಿತ್ತು.</p>.<p>ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಜಾತ್ರೆಗೆ ಆಗಮಿಸಿ ತಮಗೆ ಅವಶ್ಯಕವಾದ ಹಳ್ಳಿಕಾರ್ ಜೋಡೆತ್ತು ಖರೀದಿಸಿ ವಾಹನಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಸೋಮವಾರ ಕಂಡುಬಂದಿತು.</p>.<p>ರೈತ ಸಮುದಾಯ ಬೇಸಾಯಕ್ಕೆ ಅಗತ್ಯವಿರುವ ಹಳ್ಳಿಕಾರ್ ರಾಸುಗಳ ಖರೀದಿಗೆ ಪ್ರತಿ ವರ್ಷ ರತ್ನಪುರಿ ಜಾತ್ರೆಯನ್ನು ಎದುರು ನೋಡುತ್ತಾರೆ. ಈ ವರ್ಷ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ತಮ್ಮ ರಾಸುಗಳನ್ನು ತಂದು ಜಾತ್ರೆಗೆ ಕಟ್ಟಿದರು. ಒಂದು ವಾರಗಳ ಕಾಲ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.</p>.<p>ರತ್ನಪುರಿಯ ಹಳೆಯ ಸಂತೆ ಹಾಗೂ ಧರ್ಮಾಪುರ ರಸ್ತೆಯ ಬದಿಗಳಲ್ಲಿ ರಾಸುಗಳನ್ನು ಕಟ್ಟಲಾಗಿತ್ತು. ರೈತರು ತಮ್ಮ ರಾಸುಗಳನ್ನು ಕರೆತರುವಾಗ ವಿವಿಧ ರೀತಿಯಲ್ಲಿ ರಾಸುಗಳಿಗೆ ಸಿಂಗಾರ ಮಾಡಿಕೊಂಡು, ಕೆಲವೊಂದು ರೈತರು ವಾದ್ಯ ಸಮೇತ ಕರೆತಂದರು.</p>.<p>ಸಾವಿರಾರು ಸಂಖ್ಯೆಯಲ್ಲಿ ಕಟ್ಟಿದ್ದ ಹಳ್ಳಿಕಾರ್ ಜೋಡೆತ್ತುಗಳನ್ನು ಕೊಂಡುಕೊಳ್ಳಲು ಈ ಬಾರಿ ಕೊಡಗು, ಮಂಡ್ಯ, ಚಾಮರಾಜನಗರ, ಹಾಸನ, ರಾಮನಗರ ಮುಂತಾದ ಜಿಲ್ಲೆಗಳಿಂದ ರೈತರು ಆಗಮಿಸಿದ್ದರು. ಜರ್ಸಿ ಜೋಡೆತ್ತುಗಳು, ಹಾಲು ಹಲ್ಲಿನ ಕರುಗಳು, ಹಳ್ಳಿಕಾರ್ ಕರುಗಳು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದವು. ಹೆಚ್ಚಿನ ಸಂಖ್ಯೆ ರೈತರು ಹಳ್ಳಿಕಾರ್ನತ್ತ ಒಲವು ತೋರಿದರು.</p>.<p>ದುಬಾರಿ ಬೆಲೆ: ಈ ಬಾರಿ ಜಾತ್ರೆಯಲ್ಲಿ ಹಳ್ಳಿಕಾರ್ ಜೋಡೆತ್ತುಗಳಿಗೆ, ಹಾಲು ಹಲ್ಲಿನ ಕರುಗಳಿಗೆ ದುಬಾರಿ ಬೆಲೆ ಏರಿಕೆಯಾಗಿತ್ತು. ಕನಿಷ್ಠ ₹50 ಸಾವಿರದಿಂದ ₹3 ಲಕ್ಷದವರೆಗೂ ಬೆಲೆ ಕೇಳಿಬಂದವು. </p>.<p>ಅತಿ ಸಣ್ಣ ರೈತರು ಜಾತ್ರೆಯಲ್ಲಿ ಜಾನುವಾರುಗಳ ಖರೀದಿಗೆ ಆಗಮಿಸಿ ಬೆಲೆ ಅಧಿಕವಾದರಿಂದ ಖರೀದಿ ಮಾಡಲು ಸಾಧ್ಯವಾಗದೆ ವಾಪಸ್ ಹೋಗುತ್ತಿದ್ದ ದೃಶ್ಯ ಕಂಡು ಬಂದಿತು.</p>.<p>‘ಹಳ್ಳಿಕಾರ್ ಜೋಡೆತ್ತುಗಳು ವ್ಯವಸಾಯಕ್ಕೆ ಹಾಗೂ ಎತ್ತಿನಗಾಡಿ ಉಪಯೋಗಕ್ಕೆ ಸೂಕ್ತವಾದವು. ಆದ್ದರಿಂದ ಹಳ್ಳಿಕಾರ್ ಜೋಡೆತ್ತುಗಳನ್ನು ಪ್ರತಿವರ್ಷ ಖರೀದಿಸುತ್ತೇವೆ’ ಎಂದು ಧರ್ಮಾಪುರದ ರೈತ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಜಾತ್ರೆ ಕಣ್ತುಂಬಿಕೊಳ್ಳಲು ಧರ್ಮಾಪುರ, ಗದ್ದಿಗೆ, ಕರಿಮುದ್ದನಹಳ್ಳಿ, ಹುಂಡಿ ಮಾಳ, ಸಿಬಿಟಿ ಕಾಲೊನಿ, ವಿನೋಬ ಕಾಲೋನಿ, ಹಳ್ಳದ ಕೊಪ್ಪಲು, ತರಿಕಲ್, ಮಲ್ಲೇಗೌಡನ ಕೊಪ್ಪಲು, ಊಯಿಗೊಂಡನಹಳ್ಳಿ, ಬಿಳಿಕೆರೆ ಗ್ರಾಮಗಳಿಂದ ಲಕ್ಷಾಂತರ ಮಂದಿ ಬಂದಿದ್ದರು. ಅತ್ಯುತ್ತಮ ರಾಸುಗಳಿಗೆ ಎಪಿಎಂಸಿಯಿಂದ ಬಹುಮಾನ ನೀಡಲಾಯಿತು.</p>.<p>ಭಾನುವಾರ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿ ನಡೆಯಿತು.</p>.<p>ಶಾಸಕ ಜಿ.ಡಿ.ಹರೀಶ್ ಗೌಡ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಆಗಮಿಸಿ ಆಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವ, ಜಮಾಲ್ ಬೀಬಿ ಅಮ್ಮನವರ ಗಂಧೋತ್ಸವದಲ್ಲಿ ಭಾಗಿಯಾಗಿ ಶುಭಾಶಯ ಕೋರಿದರು.</p>.<div><blockquote>₹30 ಸಾವಿರಕ್ಕೆ ಜಾನುವಾರು ಖರೀದಿ ಮಾಡಲು ಜಾತ್ರೆಗೆ ಆಗಮಿಸಿದೆ ಆದರೆ ಈ ಜಾತ್ರೆಯಲ್ಲಿ ಬೆಲೆ ದುಪ್ಪಟ್ಟಾಗಿದೆ ಆದ್ದರಿಂದ ಖರೀದಿ ಮಾಡಲು ಸಾಧ್ಯವಾಗಲಿಲ್ಲ </blockquote><span class="attribution">-ಗೋವಿಂದ ನಾಯಕ, ರೈತ</span></div>.<div><blockquote>ಹಳ್ಳಿಕಾರ್ ಜೋಡೆತ್ತು ಸಾಕಿ ಮಾರಾಟ ಮಾಡುವುದು ನಮ್ಮ ಕಸುಬಾಗಿದ್ದು ಜಾತ್ರೆಗಾಗಿ ಹಳ್ಳಿಕಾರ್ ಜೋಡಿಗಳನ್ನು ಸಾಕುತ್ತೇವೆ. ಸೂಕ್ತ ಲಾಭ ಬಂದರೆ ಮಾರಾಟ ಮಾಡುತ್ತೇವೆ </blockquote><span class="attribution">-ಚೇತನ್ ಕುಮಾರ್, ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧರ್ಮಾಪುರ</strong>: ಸಮೀಪದ ರತ್ನಪುರಿಯಲ್ಲಿ ನಡೆಯುತ್ತಿದ್ದ 62ನೇ ವರ್ಷದ ಜಾನುವಾರು ಜಾತ್ರೆಗೆ ಸೋಮವಾರ ತೆರೆ ಬಿದ್ದಿತ್ತು.</p>.<p>ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಜಾತ್ರೆಗೆ ಆಗಮಿಸಿ ತಮಗೆ ಅವಶ್ಯಕವಾದ ಹಳ್ಳಿಕಾರ್ ಜೋಡೆತ್ತು ಖರೀದಿಸಿ ವಾಹನಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಸೋಮವಾರ ಕಂಡುಬಂದಿತು.</p>.<p>ರೈತ ಸಮುದಾಯ ಬೇಸಾಯಕ್ಕೆ ಅಗತ್ಯವಿರುವ ಹಳ್ಳಿಕಾರ್ ರಾಸುಗಳ ಖರೀದಿಗೆ ಪ್ರತಿ ವರ್ಷ ರತ್ನಪುರಿ ಜಾತ್ರೆಯನ್ನು ಎದುರು ನೋಡುತ್ತಾರೆ. ಈ ವರ್ಷ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ತಮ್ಮ ರಾಸುಗಳನ್ನು ತಂದು ಜಾತ್ರೆಗೆ ಕಟ್ಟಿದರು. ಒಂದು ವಾರಗಳ ಕಾಲ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.</p>.<p>ರತ್ನಪುರಿಯ ಹಳೆಯ ಸಂತೆ ಹಾಗೂ ಧರ್ಮಾಪುರ ರಸ್ತೆಯ ಬದಿಗಳಲ್ಲಿ ರಾಸುಗಳನ್ನು ಕಟ್ಟಲಾಗಿತ್ತು. ರೈತರು ತಮ್ಮ ರಾಸುಗಳನ್ನು ಕರೆತರುವಾಗ ವಿವಿಧ ರೀತಿಯಲ್ಲಿ ರಾಸುಗಳಿಗೆ ಸಿಂಗಾರ ಮಾಡಿಕೊಂಡು, ಕೆಲವೊಂದು ರೈತರು ವಾದ್ಯ ಸಮೇತ ಕರೆತಂದರು.</p>.<p>ಸಾವಿರಾರು ಸಂಖ್ಯೆಯಲ್ಲಿ ಕಟ್ಟಿದ್ದ ಹಳ್ಳಿಕಾರ್ ಜೋಡೆತ್ತುಗಳನ್ನು ಕೊಂಡುಕೊಳ್ಳಲು ಈ ಬಾರಿ ಕೊಡಗು, ಮಂಡ್ಯ, ಚಾಮರಾಜನಗರ, ಹಾಸನ, ರಾಮನಗರ ಮುಂತಾದ ಜಿಲ್ಲೆಗಳಿಂದ ರೈತರು ಆಗಮಿಸಿದ್ದರು. ಜರ್ಸಿ ಜೋಡೆತ್ತುಗಳು, ಹಾಲು ಹಲ್ಲಿನ ಕರುಗಳು, ಹಳ್ಳಿಕಾರ್ ಕರುಗಳು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದವು. ಹೆಚ್ಚಿನ ಸಂಖ್ಯೆ ರೈತರು ಹಳ್ಳಿಕಾರ್ನತ್ತ ಒಲವು ತೋರಿದರು.</p>.<p>ದುಬಾರಿ ಬೆಲೆ: ಈ ಬಾರಿ ಜಾತ್ರೆಯಲ್ಲಿ ಹಳ್ಳಿಕಾರ್ ಜೋಡೆತ್ತುಗಳಿಗೆ, ಹಾಲು ಹಲ್ಲಿನ ಕರುಗಳಿಗೆ ದುಬಾರಿ ಬೆಲೆ ಏರಿಕೆಯಾಗಿತ್ತು. ಕನಿಷ್ಠ ₹50 ಸಾವಿರದಿಂದ ₹3 ಲಕ್ಷದವರೆಗೂ ಬೆಲೆ ಕೇಳಿಬಂದವು. </p>.<p>ಅತಿ ಸಣ್ಣ ರೈತರು ಜಾತ್ರೆಯಲ್ಲಿ ಜಾನುವಾರುಗಳ ಖರೀದಿಗೆ ಆಗಮಿಸಿ ಬೆಲೆ ಅಧಿಕವಾದರಿಂದ ಖರೀದಿ ಮಾಡಲು ಸಾಧ್ಯವಾಗದೆ ವಾಪಸ್ ಹೋಗುತ್ತಿದ್ದ ದೃಶ್ಯ ಕಂಡು ಬಂದಿತು.</p>.<p>‘ಹಳ್ಳಿಕಾರ್ ಜೋಡೆತ್ತುಗಳು ವ್ಯವಸಾಯಕ್ಕೆ ಹಾಗೂ ಎತ್ತಿನಗಾಡಿ ಉಪಯೋಗಕ್ಕೆ ಸೂಕ್ತವಾದವು. ಆದ್ದರಿಂದ ಹಳ್ಳಿಕಾರ್ ಜೋಡೆತ್ತುಗಳನ್ನು ಪ್ರತಿವರ್ಷ ಖರೀದಿಸುತ್ತೇವೆ’ ಎಂದು ಧರ್ಮಾಪುರದ ರೈತ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಜಾತ್ರೆ ಕಣ್ತುಂಬಿಕೊಳ್ಳಲು ಧರ್ಮಾಪುರ, ಗದ್ದಿಗೆ, ಕರಿಮುದ್ದನಹಳ್ಳಿ, ಹುಂಡಿ ಮಾಳ, ಸಿಬಿಟಿ ಕಾಲೊನಿ, ವಿನೋಬ ಕಾಲೋನಿ, ಹಳ್ಳದ ಕೊಪ್ಪಲು, ತರಿಕಲ್, ಮಲ್ಲೇಗೌಡನ ಕೊಪ್ಪಲು, ಊಯಿಗೊಂಡನಹಳ್ಳಿ, ಬಿಳಿಕೆರೆ ಗ್ರಾಮಗಳಿಂದ ಲಕ್ಷಾಂತರ ಮಂದಿ ಬಂದಿದ್ದರು. ಅತ್ಯುತ್ತಮ ರಾಸುಗಳಿಗೆ ಎಪಿಎಂಸಿಯಿಂದ ಬಹುಮಾನ ನೀಡಲಾಯಿತು.</p>.<p>ಭಾನುವಾರ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿ ನಡೆಯಿತು.</p>.<p>ಶಾಸಕ ಜಿ.ಡಿ.ಹರೀಶ್ ಗೌಡ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಆಗಮಿಸಿ ಆಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವ, ಜಮಾಲ್ ಬೀಬಿ ಅಮ್ಮನವರ ಗಂಧೋತ್ಸವದಲ್ಲಿ ಭಾಗಿಯಾಗಿ ಶುಭಾಶಯ ಕೋರಿದರು.</p>.<div><blockquote>₹30 ಸಾವಿರಕ್ಕೆ ಜಾನುವಾರು ಖರೀದಿ ಮಾಡಲು ಜಾತ್ರೆಗೆ ಆಗಮಿಸಿದೆ ಆದರೆ ಈ ಜಾತ್ರೆಯಲ್ಲಿ ಬೆಲೆ ದುಪ್ಪಟ್ಟಾಗಿದೆ ಆದ್ದರಿಂದ ಖರೀದಿ ಮಾಡಲು ಸಾಧ್ಯವಾಗಲಿಲ್ಲ </blockquote><span class="attribution">-ಗೋವಿಂದ ನಾಯಕ, ರೈತ</span></div>.<div><blockquote>ಹಳ್ಳಿಕಾರ್ ಜೋಡೆತ್ತು ಸಾಕಿ ಮಾರಾಟ ಮಾಡುವುದು ನಮ್ಮ ಕಸುಬಾಗಿದ್ದು ಜಾತ್ರೆಗಾಗಿ ಹಳ್ಳಿಕಾರ್ ಜೋಡಿಗಳನ್ನು ಸಾಕುತ್ತೇವೆ. ಸೂಕ್ತ ಲಾಭ ಬಂದರೆ ಮಾರಾಟ ಮಾಡುತ್ತೇವೆ </blockquote><span class="attribution">-ಚೇತನ್ ಕುಮಾರ್, ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>