ಮೈಸೂರು: ನಗರದ ಸಿಗ್ಮಾ ಆಸ್ಪತ್ರೆಯಲ್ಲಿ ಗಣರಾಜ್ಯೋತ್ಸವವನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಜ್ಞಾನಶಂಕರ್ ಮಾತನಾಡಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮಹತ್ವವನ್ನು ತಿಳಿಸಿಕೊಟ್ಟರು.
ಡಾ.ರಾಜೇಶ್ವರಿ ಮಾದಪ್ಪ, ಡಾ.ಸೋಮಣ್ಣ, ಡಾ.ಅಜಯ್, ಡಾ.ಅನಿಕೇತ್ ಪ್ರಭಾಕರ್, ಡಾ.ಗೌರಿ ಎಸ್.ಹುಕ್ಕೇರಿ ಹಾಗೂ ಸಿಗ್ಮಾ ಆಸ್ಪತ್ರೆಯ ಕಾಲೇಜು ಪ್ರಾಂಶುಪಾಲರಾದ ಮಂಜುನಾಥ್ ಮತ್ತು ಶುಶ್ರುತ ದಮಯಂತಿ ಇದ್ದರು.