<p><strong>ಜಯಪುರ</strong>: ‘ದೇವಾಲಯಗಳು ಧಾರ್ಮಿಕ ಶ್ರದ್ಧಾಭಕ್ತಿಯ ಕೇಂದ್ರಗಳು. ಭಾರತೀಯ ಪರಂಪರೆಯಲ್ಲಿ ಆಧ್ಯಾತ್ಮಿಕತೆಗೆ ವಿಶೇಷ ಸ್ಥಾನವಿದೆ. ಪರಾರ್ಥ ಪೂಜೆಗೆ ಕೊಡುವ ಪ್ರಾಶಸ್ತ್ಯವನ್ನು ಆತ್ಮಾರ್ಥ ಪೂಜೆಗೂ ನೀಡಬೇಕು’ ಎಂದು ತುಮಕೂರು ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ ಹೇಳಿದರು.</p>.<p>ಹೋಬಳಿಯ ಮಂಡನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಜೋಡಿಲಿಂಗ ಮಹದೇಶ್ವರ ಸ್ವಾಮಿ ದೇವಾಲಯ ಉದ್ಘಾಟನೆಯ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.</p>.<p>‘ದೇವಾಲಯ ನಿರ್ಮಿಸುವುದೇ ನಾವೆಲ್ಲರೂ ಒಂದೇ ಎಂಬ ಜಾತ್ಯತೀತ ಭಾವನೆ ಹೊಂದುವುದಾಗಿದೆ. ದೇವಾಲಯಗಳ ಪಾವಿತ್ರ್ಯ ಉಳಿಸಬೇಕು. ಜಾತ್ರೆಗಳಲ್ಲಿ ಕೊಂಡ ಹಾಯುವಾಗ ನಮ್ಮಲ್ಲಿರುವ ದುರ್ಗುಣಗಳನ್ನು ಅಗ್ನಿಯಲ್ಲಿ ನಾಶಪಡಿಸಬೇಕು. ಉತ್ತಮ ನಾಗರಿಕ ಸಮಾಜ ನಿರ್ಮಿಸುವಲ್ಲಿ ಎಲ್ಲರ ಪಾತ್ರ ಬಹು ದೊಡ್ಡದು’ ಎಂದು ತಿಳಿಸಿದರು.</p>.<p>‘ದೇಶದಾದ್ಯಂತ ದೇವಾಲಯ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಸಂಸ್ಕಾರವಂತಿಕೆ ಕಡಿಮೆಯಾಗುತ್ತಿದೆ. ಯುವಕರಲ್ಲಿ ಸಂಸ್ಕಾರ ಮರೆಯಾಗುತ್ತಿದೆ. ಪರಮಾತ್ಮನಿಗೆ ಭಕ್ತಿಯ ರೂಪದಲ್ಲಿ ನೈವಿದ್ಯೆ ಸಲ್ಲಿಸಬೇಕು. ಬಸವಣ್ಣನವರು ಹಾಕಿಕೊಟ್ಟ ಕಾಯಕವೇ ಕೈಲಾಸ ಮಾರ್ಗದಲ್ಲಿ ನಡೆಯಬೇಕು. ಹಣೆಯ ಬೆವರಿಗೆ ಹೆಚ್ಚಿನ ನಂಬಿಕೆ ಇರಿಸಬೇಕು’ ಎಂದರು.</p>.<p>ಭಾನುವಾರ ಹೋಮ ಹವನಗಳು ನಡೆದವು. ಸೋಮವಾರ ಮುಂಜಾನೆ ಹುಲಿವಾಹನೋತ್ಸವ ಮೆರವಣಿಗೆ ಜರುಗಿತು. ಭಕ್ತರು ಈಡುಗಾಯಿ ಒಡೆದು ಭಕ್ತಿ ಭಾವ ಮೆರೆದರು. ದೇವಾಲಯ ಗೋಪುರಕ್ಕೆ ಕಳಸ ಪ್ರತಿಷ್ಠಾಪನೆ ಮಾಡಲಾಯಿತು. ಮಹಾ ಮಂಗಳಾರತಿ ನೆರವೇರಿಸಲಾಯಿತು. ಭಕ್ತರು ನಂದಿಧ್ವಜ ಕಂಬ ಹೊತ್ತು ಕುಣಿದರು.</p>.<p>ದೇವಾಲಯವನ್ನು ತಳಿರು–ತೋರಣ ಕಟ್ಟಿ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಭಕ್ತರಿಗೆ ಮಹಾಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ಮಾಡಲಾಯಿತು. ಮಹಾದೇವ ತಾತ ಅವರ ಗದ್ದುಗೆ ಗುಡಿ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು.</p>.<p>ಮಾವಿನಹಳ್ಳಿ ಎಸ್.ಸಿದ್ದೇಗೌಡ, ಪತ್ನಿ ಕಮಲಮ್ಮ, ಪುತ್ರ ಸಂದೀಪ್ ಗೌಡ ಅವರನ್ನು ಸನ್ಮಾನಿಸಲಾಯಿತು.</p>.<p>ಉದ್ಘಾಟನೆಯ ನೇತೃತ್ವವನ್ನು ಪುರ ಮಠದ ಚಂದ್ರಶೇಖರ ಮೂರ್ತಿ ಸ್ವಾಮೀಜಿ ವಹಿಸಿದ್ದರು. ಷಟ್ಪಲ ಬ್ರಹ್ಮಶ್ರೀ ಸ್ವಾಮೀಜಿ ಮಾತನಾಡಿದರು. ಬರಡನಪುರ ಮಹಾಂತೇಶ್ವರ ಮಠದ ಪರಶಿವಮೂರ್ತಿ ಸ್ವಾಮಿಜಿ, ಕುಂದೂರು ಮಠದ ಶರತ್ ಚಂದ್ರ ಸ್ವಾಮೀಜಿ ಧಾರ್ಮಿಕ ಪ್ರವಚನ ನೀಡಿದರು.</p>.<p>ಚನ್ನಬಸವ ಸ್ವಾಮೀಜಿ, ಮಹಾಂತ ಸ್ವಾಮಿಜಿ, ಗುರುಶಾಂತ ಸ್ವಾಮೀಜಿ, ಮಹದೇವ ಸ್ವಾಮೀಜಿ, ಸಾಂಬಶಿವ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಮಹೇಶ್ವರ ಸ್ವಾಮೀಜಿ, ತೋಂಟದಾರ್ಯ ಸ್ವಾಮೀಜಿ, ಗಣೇಶ ಮೂರ್ತಿ ಸ್ವಾಮೀಜಿ, ನಾಗೇಂದ್ರ ಆರಾಧ್ಯ, ಎಚ್.ಡಿ.ಕೋಟೆ ಎಚ್.ಆರ್.ವೆಂಕಟೇಶ್ ಪ್ರಸಾದ್ ಭಾಗವಹಿಸಿದ್ದರು.</p>.<p><strong>‘ಧಾರ್ಮಿಕ ಭಾವನೆ ಜೊತೆ ರಾಜಕೀಯ ಬೇಡ’ </strong></p><p>ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಎಸ್.ಸಿದ್ದೇಗೌಡ ‘ಧಾರ್ಮಿಕ ಭಾವನೆಗಳ ಜೊತೆ ರಾಜಕೀಯ ಮಾಡಬಾರದು. ರಾಜಕಾರಣದಲ್ಲಿರುವವರು ಯಾವುದೇ ಸಮುದಾಯವನ್ನು ದ್ವೇಷಿಸಬಾರದು. ಮಠಾಧೀಶರು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದು ಸಂತರ ಭಾವನೆಗಳಿಗೆ ಹೆಚ್ಚಿನ ಬೆಲೆ ಕೊಡಬೇಕು’ ಎಂದರು. ಜಮೀನು ಮಾರಾಟ ಮಾಡಿ ನಿರ್ಮಾಣ: ದೇವಾಲಯ ನಿರ್ಮಾಣಕ್ಕೆ ಕೊಟ್ಟ ಮಾತು ತಪ್ಪಬಾರದೆಂದು ಸ್ವಂತ ಮೂರೂವರೆ ಎಕರೆ ಜಮೀನು ಮಾರಾಟ ಮಾಡಿ ₹2.25 ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಿಸಿದೆ. ಮಂಡನಹಳ್ಳಿ ಗ್ರಾಮ ಕಂಡರೆ ನನಗೆ ವಿಶೇಷ ಪ್ರೀತಿ. ಇಲ್ಲಿನ ಜನರ ಒಗ್ಗಟ್ಟಿನಿಂದ ದೇವಸ್ಥಾನ ಕಟ್ಟಿಕೊಡಲು ಸಾಧ್ಯವಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಯಪುರ</strong>: ‘ದೇವಾಲಯಗಳು ಧಾರ್ಮಿಕ ಶ್ರದ್ಧಾಭಕ್ತಿಯ ಕೇಂದ್ರಗಳು. ಭಾರತೀಯ ಪರಂಪರೆಯಲ್ಲಿ ಆಧ್ಯಾತ್ಮಿಕತೆಗೆ ವಿಶೇಷ ಸ್ಥಾನವಿದೆ. ಪರಾರ್ಥ ಪೂಜೆಗೆ ಕೊಡುವ ಪ್ರಾಶಸ್ತ್ಯವನ್ನು ಆತ್ಮಾರ್ಥ ಪೂಜೆಗೂ ನೀಡಬೇಕು’ ಎಂದು ತುಮಕೂರು ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ ಹೇಳಿದರು.</p>.<p>ಹೋಬಳಿಯ ಮಂಡನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಜೋಡಿಲಿಂಗ ಮಹದೇಶ್ವರ ಸ್ವಾಮಿ ದೇವಾಲಯ ಉದ್ಘಾಟನೆಯ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.</p>.<p>‘ದೇವಾಲಯ ನಿರ್ಮಿಸುವುದೇ ನಾವೆಲ್ಲರೂ ಒಂದೇ ಎಂಬ ಜಾತ್ಯತೀತ ಭಾವನೆ ಹೊಂದುವುದಾಗಿದೆ. ದೇವಾಲಯಗಳ ಪಾವಿತ್ರ್ಯ ಉಳಿಸಬೇಕು. ಜಾತ್ರೆಗಳಲ್ಲಿ ಕೊಂಡ ಹಾಯುವಾಗ ನಮ್ಮಲ್ಲಿರುವ ದುರ್ಗುಣಗಳನ್ನು ಅಗ್ನಿಯಲ್ಲಿ ನಾಶಪಡಿಸಬೇಕು. ಉತ್ತಮ ನಾಗರಿಕ ಸಮಾಜ ನಿರ್ಮಿಸುವಲ್ಲಿ ಎಲ್ಲರ ಪಾತ್ರ ಬಹು ದೊಡ್ಡದು’ ಎಂದು ತಿಳಿಸಿದರು.</p>.<p>‘ದೇಶದಾದ್ಯಂತ ದೇವಾಲಯ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಸಂಸ್ಕಾರವಂತಿಕೆ ಕಡಿಮೆಯಾಗುತ್ತಿದೆ. ಯುವಕರಲ್ಲಿ ಸಂಸ್ಕಾರ ಮರೆಯಾಗುತ್ತಿದೆ. ಪರಮಾತ್ಮನಿಗೆ ಭಕ್ತಿಯ ರೂಪದಲ್ಲಿ ನೈವಿದ್ಯೆ ಸಲ್ಲಿಸಬೇಕು. ಬಸವಣ್ಣನವರು ಹಾಕಿಕೊಟ್ಟ ಕಾಯಕವೇ ಕೈಲಾಸ ಮಾರ್ಗದಲ್ಲಿ ನಡೆಯಬೇಕು. ಹಣೆಯ ಬೆವರಿಗೆ ಹೆಚ್ಚಿನ ನಂಬಿಕೆ ಇರಿಸಬೇಕು’ ಎಂದರು.</p>.<p>ಭಾನುವಾರ ಹೋಮ ಹವನಗಳು ನಡೆದವು. ಸೋಮವಾರ ಮುಂಜಾನೆ ಹುಲಿವಾಹನೋತ್ಸವ ಮೆರವಣಿಗೆ ಜರುಗಿತು. ಭಕ್ತರು ಈಡುಗಾಯಿ ಒಡೆದು ಭಕ್ತಿ ಭಾವ ಮೆರೆದರು. ದೇವಾಲಯ ಗೋಪುರಕ್ಕೆ ಕಳಸ ಪ್ರತಿಷ್ಠಾಪನೆ ಮಾಡಲಾಯಿತು. ಮಹಾ ಮಂಗಳಾರತಿ ನೆರವೇರಿಸಲಾಯಿತು. ಭಕ್ತರು ನಂದಿಧ್ವಜ ಕಂಬ ಹೊತ್ತು ಕುಣಿದರು.</p>.<p>ದೇವಾಲಯವನ್ನು ತಳಿರು–ತೋರಣ ಕಟ್ಟಿ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಭಕ್ತರಿಗೆ ಮಹಾಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ಮಾಡಲಾಯಿತು. ಮಹಾದೇವ ತಾತ ಅವರ ಗದ್ದುಗೆ ಗುಡಿ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು.</p>.<p>ಮಾವಿನಹಳ್ಳಿ ಎಸ್.ಸಿದ್ದೇಗೌಡ, ಪತ್ನಿ ಕಮಲಮ್ಮ, ಪುತ್ರ ಸಂದೀಪ್ ಗೌಡ ಅವರನ್ನು ಸನ್ಮಾನಿಸಲಾಯಿತು.</p>.<p>ಉದ್ಘಾಟನೆಯ ನೇತೃತ್ವವನ್ನು ಪುರ ಮಠದ ಚಂದ್ರಶೇಖರ ಮೂರ್ತಿ ಸ್ವಾಮೀಜಿ ವಹಿಸಿದ್ದರು. ಷಟ್ಪಲ ಬ್ರಹ್ಮಶ್ರೀ ಸ್ವಾಮೀಜಿ ಮಾತನಾಡಿದರು. ಬರಡನಪುರ ಮಹಾಂತೇಶ್ವರ ಮಠದ ಪರಶಿವಮೂರ್ತಿ ಸ್ವಾಮಿಜಿ, ಕುಂದೂರು ಮಠದ ಶರತ್ ಚಂದ್ರ ಸ್ವಾಮೀಜಿ ಧಾರ್ಮಿಕ ಪ್ರವಚನ ನೀಡಿದರು.</p>.<p>ಚನ್ನಬಸವ ಸ್ವಾಮೀಜಿ, ಮಹಾಂತ ಸ್ವಾಮಿಜಿ, ಗುರುಶಾಂತ ಸ್ವಾಮೀಜಿ, ಮಹದೇವ ಸ್ವಾಮೀಜಿ, ಸಾಂಬಶಿವ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಮಹೇಶ್ವರ ಸ್ವಾಮೀಜಿ, ತೋಂಟದಾರ್ಯ ಸ್ವಾಮೀಜಿ, ಗಣೇಶ ಮೂರ್ತಿ ಸ್ವಾಮೀಜಿ, ನಾಗೇಂದ್ರ ಆರಾಧ್ಯ, ಎಚ್.ಡಿ.ಕೋಟೆ ಎಚ್.ಆರ್.ವೆಂಕಟೇಶ್ ಪ್ರಸಾದ್ ಭಾಗವಹಿಸಿದ್ದರು.</p>.<p><strong>‘ಧಾರ್ಮಿಕ ಭಾವನೆ ಜೊತೆ ರಾಜಕೀಯ ಬೇಡ’ </strong></p><p>ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಎಸ್.ಸಿದ್ದೇಗೌಡ ‘ಧಾರ್ಮಿಕ ಭಾವನೆಗಳ ಜೊತೆ ರಾಜಕೀಯ ಮಾಡಬಾರದು. ರಾಜಕಾರಣದಲ್ಲಿರುವವರು ಯಾವುದೇ ಸಮುದಾಯವನ್ನು ದ್ವೇಷಿಸಬಾರದು. ಮಠಾಧೀಶರು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದು ಸಂತರ ಭಾವನೆಗಳಿಗೆ ಹೆಚ್ಚಿನ ಬೆಲೆ ಕೊಡಬೇಕು’ ಎಂದರು. ಜಮೀನು ಮಾರಾಟ ಮಾಡಿ ನಿರ್ಮಾಣ: ದೇವಾಲಯ ನಿರ್ಮಾಣಕ್ಕೆ ಕೊಟ್ಟ ಮಾತು ತಪ್ಪಬಾರದೆಂದು ಸ್ವಂತ ಮೂರೂವರೆ ಎಕರೆ ಜಮೀನು ಮಾರಾಟ ಮಾಡಿ ₹2.25 ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಿಸಿದೆ. ಮಂಡನಹಳ್ಳಿ ಗ್ರಾಮ ಕಂಡರೆ ನನಗೆ ವಿಶೇಷ ಪ್ರೀತಿ. ಇಲ್ಲಿನ ಜನರ ಒಗ್ಗಟ್ಟಿನಿಂದ ದೇವಸ್ಥಾನ ಕಟ್ಟಿಕೊಡಲು ಸಾಧ್ಯವಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>