<p><strong>ಕೆ.ಆರ್. ನಗರ (ಮೈಸೂರು ಜಿಲ್ಲೆ):</strong> ಹೊರವಲಯದ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಭಾನುವಾರ ಈಜಾಡುತ್ತಿದ್ದ ವೇಳೆ, ಇಬ್ಬರು ಮಕ್ಕಳು ಸೇರಿ ಆರು ಮಂದಿ ಮುಳುಗಿ ಸಾವಿಗೀಡಾದರು. </p>.<p>ಮೈಸೂರಿನ ಉದಯಗಿರಿಯವ ರಾದ, ಸದ್ಯ ಊಟಿಯ ನಿವಾಸಿ ಫಾತಿಮಾ ಸೈಯದ್ (35), ಬೆಂಗಳೂರಿನ ಎಸ್ಬಿಆರ್ ಲೇಔಟ್ನ ಆಟೊ ಚಾಲಕ ಮಹಮ್ಮದ್ ಯಾಸೀನ್ (23), ನೇಹಾ ಕೌಸರ್ (20), ಮೈಸೂರಿನ ಉದಯಗಿರಿಯ ಉಮೆರ್ (7), ಬೆಂಗಳೂರಿನ ಕಾಡಗೌಡನಹಳ್ಳಿಯ ಹೈಮಾ (13) ಹಾಗೂ ಕೆ.ಆರ್.ನಗರ ಮುಸ್ಲಿಂ ಬ್ಲಾಕ್ನ ಆಫಿಯಾ (20) ಮೃತಪಟ್ಟವರು.</p>.<p>ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡಿರುವ ಕೆ.ಅರ್.ನಗರ ಮುಸ್ಲಿಂ ಬ್ಲಾಕ್ನ ಸಲ್ಮಾ ಬಾನು, ಮೈಸೂರಿನ ಉದಯಗಿರಿಯ ಆಸೀಯಾ ಹಾಗೂ ತಿ.ನರಸೀಪುರ ತಾಲ್ಲೂಕು ಬನ್ನೂರಿನ ಜುಬೇದಾ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಸ್ಥಳೀಯರು ನೀರಿನಿಂದ ಮೇಲೆತ್ತಿದ್ದಾರೆ. </p>.<p>ಮೃತರೆಲ್ಲರೂ ಹತ್ತಿರದ ಸಂಬಂಧಿಕರು. ಹಳೆಯಡತೊರೆಯ ಹಜರತ್ ಖಾದರ್ ಲಿಂಗಾವಲಿ ದರ್ಗಾದಲ್ಲಿನ ಉರುಸ್ಗೆ ಬಂದಿದ್ದರು, ಪೂಜೆಗೆ ಮುನ್ನ ಹತ್ತಿರದ ನದಿಗೆ ಈಜಲು ತೆರಳಿದ್ದರು. ಈಜಾಡುವಾಗ, ಮುಳುಗಿದವರನ್ನು ರಕ್ಷಿಸಲು ಮುಂದಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.</p>.<p>ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಹಳೆಯಡತೊರೆಯ ಪಂಪ್ಹೌಸ್ ಬಳಿ ನದಿಗೆ ಮರಳಿನ ಮೂಟೆಗಳನ್ನು ಹಾಕಿದ್ದು, ನೀರು ಸಂಗ್ರಹವಾಗಿದೆ. ಇದರಲ್ಲಿ ಈಜಲು ಹೋಗಿದ್ದಾಗ ದುರ್ಘಟನೆ ನಡೆದಿದೆ.</p>.<p>ಸ್ಥಳಕ್ಕೆ ಶಾಸಕ ಡಿ.ರವಿಶಂಕರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದರು.</p>.<div><blockquote>ಈ ಸ್ಥಳದಲ್ಲಿ ಮುಂದಿನ ದಿನದಲ್ಲಿ ಇಂತಹ ದುರ್ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು</blockquote><span class="attribution">ಮಲ್ಲಿಕಾರ್ಜುನ ಬಾಲದಂಡಿ ಎಸ್ಪಿ ಮೈಸೂರು</span></div>.<p> <strong>₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ</strong></p><p> ‘ಆರು ಮಂದಿ ನೀರುಪಾಲಾದ ವಿಚಾರ ತಿಳಿದು ದುಃಖವಾಯಿತು. ಮೃತರ ಕುಟುಂಬದವರಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಎಕ್ಸ್’ ಮೂಲಕ ತಿಳಿಸಿದ್ದಾರೆ. ‘ಕುಟುಂಬಕ್ಕೆ ಆರ್ಥಿಕ ಸವಾಲುಗಳು ಬಾಧಿಸದಿರಲೆಂಬ ಮಾನವೀಯ ಕಾಳಜಿಯೊಂದಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದು’ ಎಂದು ಘೋಷಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್. ನಗರ (ಮೈಸೂರು ಜಿಲ್ಲೆ):</strong> ಹೊರವಲಯದ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಭಾನುವಾರ ಈಜಾಡುತ್ತಿದ್ದ ವೇಳೆ, ಇಬ್ಬರು ಮಕ್ಕಳು ಸೇರಿ ಆರು ಮಂದಿ ಮುಳುಗಿ ಸಾವಿಗೀಡಾದರು. </p>.<p>ಮೈಸೂರಿನ ಉದಯಗಿರಿಯವ ರಾದ, ಸದ್ಯ ಊಟಿಯ ನಿವಾಸಿ ಫಾತಿಮಾ ಸೈಯದ್ (35), ಬೆಂಗಳೂರಿನ ಎಸ್ಬಿಆರ್ ಲೇಔಟ್ನ ಆಟೊ ಚಾಲಕ ಮಹಮ್ಮದ್ ಯಾಸೀನ್ (23), ನೇಹಾ ಕೌಸರ್ (20), ಮೈಸೂರಿನ ಉದಯಗಿರಿಯ ಉಮೆರ್ (7), ಬೆಂಗಳೂರಿನ ಕಾಡಗೌಡನಹಳ್ಳಿಯ ಹೈಮಾ (13) ಹಾಗೂ ಕೆ.ಆರ್.ನಗರ ಮುಸ್ಲಿಂ ಬ್ಲಾಕ್ನ ಆಫಿಯಾ (20) ಮೃತಪಟ್ಟವರು.</p>.<p>ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡಿರುವ ಕೆ.ಅರ್.ನಗರ ಮುಸ್ಲಿಂ ಬ್ಲಾಕ್ನ ಸಲ್ಮಾ ಬಾನು, ಮೈಸೂರಿನ ಉದಯಗಿರಿಯ ಆಸೀಯಾ ಹಾಗೂ ತಿ.ನರಸೀಪುರ ತಾಲ್ಲೂಕು ಬನ್ನೂರಿನ ಜುಬೇದಾ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಸ್ಥಳೀಯರು ನೀರಿನಿಂದ ಮೇಲೆತ್ತಿದ್ದಾರೆ. </p>.<p>ಮೃತರೆಲ್ಲರೂ ಹತ್ತಿರದ ಸಂಬಂಧಿಕರು. ಹಳೆಯಡತೊರೆಯ ಹಜರತ್ ಖಾದರ್ ಲಿಂಗಾವಲಿ ದರ್ಗಾದಲ್ಲಿನ ಉರುಸ್ಗೆ ಬಂದಿದ್ದರು, ಪೂಜೆಗೆ ಮುನ್ನ ಹತ್ತಿರದ ನದಿಗೆ ಈಜಲು ತೆರಳಿದ್ದರು. ಈಜಾಡುವಾಗ, ಮುಳುಗಿದವರನ್ನು ರಕ್ಷಿಸಲು ಮುಂದಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.</p>.<p>ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಹಳೆಯಡತೊರೆಯ ಪಂಪ್ಹೌಸ್ ಬಳಿ ನದಿಗೆ ಮರಳಿನ ಮೂಟೆಗಳನ್ನು ಹಾಕಿದ್ದು, ನೀರು ಸಂಗ್ರಹವಾಗಿದೆ. ಇದರಲ್ಲಿ ಈಜಲು ಹೋಗಿದ್ದಾಗ ದುರ್ಘಟನೆ ನಡೆದಿದೆ.</p>.<p>ಸ್ಥಳಕ್ಕೆ ಶಾಸಕ ಡಿ.ರವಿಶಂಕರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದರು.</p>.<div><blockquote>ಈ ಸ್ಥಳದಲ್ಲಿ ಮುಂದಿನ ದಿನದಲ್ಲಿ ಇಂತಹ ದುರ್ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು</blockquote><span class="attribution">ಮಲ್ಲಿಕಾರ್ಜುನ ಬಾಲದಂಡಿ ಎಸ್ಪಿ ಮೈಸೂರು</span></div>.<p> <strong>₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ</strong></p><p> ‘ಆರು ಮಂದಿ ನೀರುಪಾಲಾದ ವಿಚಾರ ತಿಳಿದು ದುಃಖವಾಯಿತು. ಮೃತರ ಕುಟುಂಬದವರಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಎಕ್ಸ್’ ಮೂಲಕ ತಿಳಿಸಿದ್ದಾರೆ. ‘ಕುಟುಂಬಕ್ಕೆ ಆರ್ಥಿಕ ಸವಾಲುಗಳು ಬಾಧಿಸದಿರಲೆಂಬ ಮಾನವೀಯ ಕಾಳಜಿಯೊಂದಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದು’ ಎಂದು ಘೋಷಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>