<p><strong>ಮೈಸೂರು: ‘</strong>ನಾವು ಎಲೆಕ್ಟ್ರಾನಿಕ್ ಸಾಧನಗಳಿಂದ ದೂರವಿದ್ದು, ಜೀವನಕ್ಕೆ ಅವಶ್ಯವಾಗುವ ಕೌಶಲಗಳನ್ನು ರೂಢಿಸಿಕೊಳ್ಳಬೇಕು’ ಎಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದ ಮುಖ್ಯಸ್ಥ ಹಾಗೂ ಎನ್.ಸಿ.ಟಿ.ಇ ಸದಸ್ಯ ಪ್ರೊ.ಜಿ.ಆರ್.ಅಂಗಡಿ ಸಲಹೆ ನೀಡಿದರು.</p>.<p>ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಗುರುವಾರ ಆರಂಭವಾದ ‘ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಮತ್ತು ಯುವಕರ ಜೀವನ ಕೌಶಲ ಮತ್ತು ಉತ್ತಮ ಜೀವನ’ ಕುರಿತ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.</p>.<p>‘ಜೀವನಕ್ಕೆ ಅಗತ್ಯವಾದ ಕೌಶಲವನ್ನು ಬಿಟ್ಟು ನಮ್ಮ ಜೀವನವನ್ನೇ ಮೊಬೈಲ್ ಫೋನ್ಗೆ ಸ್ಥಳಾಂತರಿಸಿಕೊಂಡಂತೆಯೇ ಬದುಕುತ್ತಿದ್ದೇವೆ’ ಎಂದು ವಿಷಾದಿಸಿದರು.</p>.<p>‘ಇತ್ತೀಚಿನ ದಿನಗಳಲ್ಲಿ ವಯಸ್ಕರು, ಮಕ್ಕಳು ಎನ್ನದೇ ಎಲ್ಲ ವಯೋಮಾನದವರೂ ಮೊಬೈಲ್ ಫೋನ್ಗೆ ದಾಸರಾಗಿದ್ದೇವೆ. ಆ ಸಾಧನವಿಲ್ಲದೇ ಮಕ್ಕಳು ಊಟ ಮಾಡುವುದಿಲ್ಲ ಎಂಬ ಮಟ್ಟಕ್ಕೆ ಪರಿಸ್ಥಿತಿ ಬಂದಿದೆ. ಇಂತಹ ಅತಿಯಾದ ಅವಲಂಬನೆ ಒಳ್ಳೆಯದಲ್ಲ’ ಎಂದು ತಿಳಿಸಿದರು.</p>.<p><strong>ಸಂಕಷ್ಟವೂ ಇದೆ:</strong> ‘ಈಗ ನಾವೆಲ್ಲರೂ ಡಿಜಿಟಿಲ್ ಯುಗದಲ್ಲಿ ಬದುಕುತ್ತಿದ್ದೇವೆ. ಈ ಯುಗ ನಮಗೆ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶ ಮಾಡಿಕೊಡುತ್ತಿದೆ. ಇದರಿಂದ ಎಷ್ಟು ಉಪಯೋಗ ಆಗುತ್ತಿದೆಯೋ ಅಷ್ಟೇ ಸಂಕಷ್ಟಗಳೂ ಎದುರಾಗುತ್ತಿದೆ. ಸಮಸ್ಯೆಗಳನ್ನೂ ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮಗೆ ಕೌಶಲಗಳ ಅಗತ್ಯವಿದೆ’ ಎಂದು ಹೇಳಿದರು.</p>.<p>‘ಜೀವನದ ಸುಗಮ ನಿರ್ವಹಣೆಗೆ ಕೌಶಲ ಮುಖ್ಯವೇ ಹೊರತು ಸಾಧನವಲ್ಲ. ಕೌಶಲ ಬರುವುದು ಶಿಕ್ಷಣದಿಂದ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು’ ಎಂದು ಸಲಹೆ ನೀಡಿದರು.</p>.<p>‘ಮೊಬೈಲ್ ಫೋನ್ ಬಳಸದೆ ಇದ್ದರೆ ಖರೀದಿಸುವ ಆಹಾರದ ಮೇಲೆ ಇಂತಿಷ್ಟು ರಿಯಾಯಿತಿ ದೊರೆಯುತ್ತದೆ ಎಂದು ಅನೇಕ ಹೋಟೆಲ್ಗಳಲ್ಲಿ ಪ್ರಕಟಣೆ ಇರುವುದನ್ನು ಗಮನಿಸಿದ್ದೇನೆ. ಇದು ಒಳ್ಳೆಯ ಬೆಳವಣಿಗೆ. ಊಟ ಮಾಡುವಾಗಲೂ ಮೊಬೈಲ್ ಫೋನ್ನಲ್ಲೇ ಮುಳುಗಿದರೆ ಅಕ್ಕಪಕ್ಕದವರ ಪರಿಚಯ ಆಗುವುದಿಲ್ಲ, ವಿಶ್ವಾಸ ಬೆಳೆಯುವುದಿಲ್ಲ’ ಎಂದರು.</p>.<p>ಕೆಎಸ್ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವರಾದ ಪ್ರೊ.ಎಸ್.ಕೆ.ನವೀನ್ಕುಮಾರ್, ಪ್ರೊ.ಆನಂದಕುಮಾರ್, ಶೈಕ್ಷಣಿಕ ಡೀನ್ ಪ್ರೊ.ಎನ್.ಲಕ್ಷ್ಮಿ, ಪ್ರೊ.ರಾಮನಾಥ ನಾಯ್ಡು ಪಾಲ್ಗೊಂಡಿದ್ದರು.</p>.<div><blockquote>ಶಿಕ್ಷಣ ಎಂಬುದು ಜಾಗತಿಕವಾಗಿ ಎಲ್ಲರನ್ನೂ ಒಂದು ಮಾಡುತ್ತದೆ. ಮಾಹಿತಿ ಕಲೆ ಹಾಕುತ್ತದೆ. ಇದಕ್ಕೆ ಪೂರಕವಾಗಿ ಸಾಧನಗಳು ಕೆಲಸ ಮಾಡಬೇಕು. </blockquote><span class="attribution">-ಪ್ರೊ.ಜಿ.ಆರ್.ಅಂಗಡಿ ಕೇಂದ್ರೀಯ ವಿಶ್ವವಿದ್ಯಾಲಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: ‘</strong>ನಾವು ಎಲೆಕ್ಟ್ರಾನಿಕ್ ಸಾಧನಗಳಿಂದ ದೂರವಿದ್ದು, ಜೀವನಕ್ಕೆ ಅವಶ್ಯವಾಗುವ ಕೌಶಲಗಳನ್ನು ರೂಢಿಸಿಕೊಳ್ಳಬೇಕು’ ಎಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದ ಮುಖ್ಯಸ್ಥ ಹಾಗೂ ಎನ್.ಸಿ.ಟಿ.ಇ ಸದಸ್ಯ ಪ್ರೊ.ಜಿ.ಆರ್.ಅಂಗಡಿ ಸಲಹೆ ನೀಡಿದರು.</p>.<p>ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಗುರುವಾರ ಆರಂಭವಾದ ‘ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಮತ್ತು ಯುವಕರ ಜೀವನ ಕೌಶಲ ಮತ್ತು ಉತ್ತಮ ಜೀವನ’ ಕುರಿತ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.</p>.<p>‘ಜೀವನಕ್ಕೆ ಅಗತ್ಯವಾದ ಕೌಶಲವನ್ನು ಬಿಟ್ಟು ನಮ್ಮ ಜೀವನವನ್ನೇ ಮೊಬೈಲ್ ಫೋನ್ಗೆ ಸ್ಥಳಾಂತರಿಸಿಕೊಂಡಂತೆಯೇ ಬದುಕುತ್ತಿದ್ದೇವೆ’ ಎಂದು ವಿಷಾದಿಸಿದರು.</p>.<p>‘ಇತ್ತೀಚಿನ ದಿನಗಳಲ್ಲಿ ವಯಸ್ಕರು, ಮಕ್ಕಳು ಎನ್ನದೇ ಎಲ್ಲ ವಯೋಮಾನದವರೂ ಮೊಬೈಲ್ ಫೋನ್ಗೆ ದಾಸರಾಗಿದ್ದೇವೆ. ಆ ಸಾಧನವಿಲ್ಲದೇ ಮಕ್ಕಳು ಊಟ ಮಾಡುವುದಿಲ್ಲ ಎಂಬ ಮಟ್ಟಕ್ಕೆ ಪರಿಸ್ಥಿತಿ ಬಂದಿದೆ. ಇಂತಹ ಅತಿಯಾದ ಅವಲಂಬನೆ ಒಳ್ಳೆಯದಲ್ಲ’ ಎಂದು ತಿಳಿಸಿದರು.</p>.<p><strong>ಸಂಕಷ್ಟವೂ ಇದೆ:</strong> ‘ಈಗ ನಾವೆಲ್ಲರೂ ಡಿಜಿಟಿಲ್ ಯುಗದಲ್ಲಿ ಬದುಕುತ್ತಿದ್ದೇವೆ. ಈ ಯುಗ ನಮಗೆ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶ ಮಾಡಿಕೊಡುತ್ತಿದೆ. ಇದರಿಂದ ಎಷ್ಟು ಉಪಯೋಗ ಆಗುತ್ತಿದೆಯೋ ಅಷ್ಟೇ ಸಂಕಷ್ಟಗಳೂ ಎದುರಾಗುತ್ತಿದೆ. ಸಮಸ್ಯೆಗಳನ್ನೂ ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮಗೆ ಕೌಶಲಗಳ ಅಗತ್ಯವಿದೆ’ ಎಂದು ಹೇಳಿದರು.</p>.<p>‘ಜೀವನದ ಸುಗಮ ನಿರ್ವಹಣೆಗೆ ಕೌಶಲ ಮುಖ್ಯವೇ ಹೊರತು ಸಾಧನವಲ್ಲ. ಕೌಶಲ ಬರುವುದು ಶಿಕ್ಷಣದಿಂದ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು’ ಎಂದು ಸಲಹೆ ನೀಡಿದರು.</p>.<p>‘ಮೊಬೈಲ್ ಫೋನ್ ಬಳಸದೆ ಇದ್ದರೆ ಖರೀದಿಸುವ ಆಹಾರದ ಮೇಲೆ ಇಂತಿಷ್ಟು ರಿಯಾಯಿತಿ ದೊರೆಯುತ್ತದೆ ಎಂದು ಅನೇಕ ಹೋಟೆಲ್ಗಳಲ್ಲಿ ಪ್ರಕಟಣೆ ಇರುವುದನ್ನು ಗಮನಿಸಿದ್ದೇನೆ. ಇದು ಒಳ್ಳೆಯ ಬೆಳವಣಿಗೆ. ಊಟ ಮಾಡುವಾಗಲೂ ಮೊಬೈಲ್ ಫೋನ್ನಲ್ಲೇ ಮುಳುಗಿದರೆ ಅಕ್ಕಪಕ್ಕದವರ ಪರಿಚಯ ಆಗುವುದಿಲ್ಲ, ವಿಶ್ವಾಸ ಬೆಳೆಯುವುದಿಲ್ಲ’ ಎಂದರು.</p>.<p>ಕೆಎಸ್ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವರಾದ ಪ್ರೊ.ಎಸ್.ಕೆ.ನವೀನ್ಕುಮಾರ್, ಪ್ರೊ.ಆನಂದಕುಮಾರ್, ಶೈಕ್ಷಣಿಕ ಡೀನ್ ಪ್ರೊ.ಎನ್.ಲಕ್ಷ್ಮಿ, ಪ್ರೊ.ರಾಮನಾಥ ನಾಯ್ಡು ಪಾಲ್ಗೊಂಡಿದ್ದರು.</p>.<div><blockquote>ಶಿಕ್ಷಣ ಎಂಬುದು ಜಾಗತಿಕವಾಗಿ ಎಲ್ಲರನ್ನೂ ಒಂದು ಮಾಡುತ್ತದೆ. ಮಾಹಿತಿ ಕಲೆ ಹಾಕುತ್ತದೆ. ಇದಕ್ಕೆ ಪೂರಕವಾಗಿ ಸಾಧನಗಳು ಕೆಲಸ ಮಾಡಬೇಕು. </blockquote><span class="attribution">-ಪ್ರೊ.ಜಿ.ಆರ್.ಅಂಗಡಿ ಕೇಂದ್ರೀಯ ವಿಶ್ವವಿದ್ಯಾಲಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>