<p><strong>ಮೈಸೂರು:</strong> ಲೇಖಕ ಶ್ರೀಕೃಷ್ಣ ಆಲನಹಳ್ಳಿ ಅವರ ‘ಸಮಗ್ರ ಕಥೆಗಳು’ ಕೃತಿಯನ್ನು ಸಾಹಿತಿ ದೇವನೂರ ಮಹಾದೇವ ಸೋಮವಾರ ಬಿಡುಗಡೆ ಮಾಡಿದರು. </p>.<p>ನಂತರ ಮಾತನಾಡಿ, ‘ನವ್ಯ ಸಾಹಿತಿಗಳೊಂದಿಗೆ ಆಪ್ತ ಒಡನಾಟ ಹೊಂದಿದ್ದ ಕೃಷ್ಣ, ಸಾಹಿತ್ಯ ರಚನೆ ಮಾಡಲು ನನಗೂ ಹುರಿದುಂಬಿಸಿದರು. ವಿದ್ಯಾರ್ಥಿ ಜೀವನದಲ್ಲೇ ಶ್ರೀಕೃಷ್ಣ ಆಲನಹಳ್ಳಿ ‘ಸಮೀಕ್ಷಕ’ ಎಂಬ ಸಾಹಿತ್ಯ ಪತ್ರಿಕೆ ಆರಂಭಿಸಿದ್ದರು. ಆ ಕಾಲದಲ್ಲಿ ಯುವ ಸಾಹಿತಿಗಳ ಚಿಂತನೆಗಳಿಗೆ ಪತ್ರಿಕೆಯು ವೇದಿಕೆಯಾಗಿತ್ತು’ ಎಂದರು. </p>.<p>‘ಗ್ರಾಮೀಣ ಬದುಕಿನ ಸೊಗಡು, ಮಾನವ ಸಂಬಂಧಗಳ ಸೂಕ್ಷ್ಮತೆ ಮತ್ತು ಪ್ರಕೃತಿಯ ಅಂತರಾಳವನ್ನು ಅಚ್ಚುಕಟ್ಟಾಗಿ ಹಿಡಿದಿಟ್ಟ ಸೂಕ್ಷ್ಮ ಸಂವೇದನೆಯ ಲೇಖಕ ಅವರಾಗಿದ್ದರು’ ಎಂದು ಸ್ಮರಿಸಿದರು. </p>.<p>‘ಅಮೂಲ್ಯ ಪುಸ್ತಕ’ ಪ್ರಕಾಶಕ ಕೃಷ್ಣ ಚೆಂಗಡಿ ಮಾತನಾಡಿ, ‘ಶ್ರೀಕೃಷ್ಣ ಅವರ ತಪ್ತ, ಫೀನಿಕ್ಸ್ ಮತ್ತು ಅಪೂರ್ಣ ಕಥೆಗಳು ಎಂಬ ಮೂರು ಕಥಾ ಸಂಕಲನಗಳು ಒಟ್ಟಾಗಿ ‘ಸಮಗ್ರ ಕಥೆಗಳು’ ಪುಸ್ತಕವಾಗಿದ್ದು, 232 ಪುಟವಿದೆ’ ಎಂದರು. </p>.<p>ಶ್ರೀಕೃಷ್ಣ ಪತ್ನಿ ವಿನುತಾ ಆಲನಹಳ್ಳಿ, ಪುತ್ರ ಪ್ರದ್ಯುಮ್ನ ಆಲನಹಳ್ಳಿ, ಪುತ್ರಿ ಕೃತಿಕಾ ಆಲನಹಳ್ಳಿ, ಅಳಿಯ ಕಣ್ಣನ್, ಲೇಖಕ ಶಿವಾಗ್ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಲೇಖಕ ಶ್ರೀಕೃಷ್ಣ ಆಲನಹಳ್ಳಿ ಅವರ ‘ಸಮಗ್ರ ಕಥೆಗಳು’ ಕೃತಿಯನ್ನು ಸಾಹಿತಿ ದೇವನೂರ ಮಹಾದೇವ ಸೋಮವಾರ ಬಿಡುಗಡೆ ಮಾಡಿದರು. </p>.<p>ನಂತರ ಮಾತನಾಡಿ, ‘ನವ್ಯ ಸಾಹಿತಿಗಳೊಂದಿಗೆ ಆಪ್ತ ಒಡನಾಟ ಹೊಂದಿದ್ದ ಕೃಷ್ಣ, ಸಾಹಿತ್ಯ ರಚನೆ ಮಾಡಲು ನನಗೂ ಹುರಿದುಂಬಿಸಿದರು. ವಿದ್ಯಾರ್ಥಿ ಜೀವನದಲ್ಲೇ ಶ್ರೀಕೃಷ್ಣ ಆಲನಹಳ್ಳಿ ‘ಸಮೀಕ್ಷಕ’ ಎಂಬ ಸಾಹಿತ್ಯ ಪತ್ರಿಕೆ ಆರಂಭಿಸಿದ್ದರು. ಆ ಕಾಲದಲ್ಲಿ ಯುವ ಸಾಹಿತಿಗಳ ಚಿಂತನೆಗಳಿಗೆ ಪತ್ರಿಕೆಯು ವೇದಿಕೆಯಾಗಿತ್ತು’ ಎಂದರು. </p>.<p>‘ಗ್ರಾಮೀಣ ಬದುಕಿನ ಸೊಗಡು, ಮಾನವ ಸಂಬಂಧಗಳ ಸೂಕ್ಷ್ಮತೆ ಮತ್ತು ಪ್ರಕೃತಿಯ ಅಂತರಾಳವನ್ನು ಅಚ್ಚುಕಟ್ಟಾಗಿ ಹಿಡಿದಿಟ್ಟ ಸೂಕ್ಷ್ಮ ಸಂವೇದನೆಯ ಲೇಖಕ ಅವರಾಗಿದ್ದರು’ ಎಂದು ಸ್ಮರಿಸಿದರು. </p>.<p>‘ಅಮೂಲ್ಯ ಪುಸ್ತಕ’ ಪ್ರಕಾಶಕ ಕೃಷ್ಣ ಚೆಂಗಡಿ ಮಾತನಾಡಿ, ‘ಶ್ರೀಕೃಷ್ಣ ಅವರ ತಪ್ತ, ಫೀನಿಕ್ಸ್ ಮತ್ತು ಅಪೂರ್ಣ ಕಥೆಗಳು ಎಂಬ ಮೂರು ಕಥಾ ಸಂಕಲನಗಳು ಒಟ್ಟಾಗಿ ‘ಸಮಗ್ರ ಕಥೆಗಳು’ ಪುಸ್ತಕವಾಗಿದ್ದು, 232 ಪುಟವಿದೆ’ ಎಂದರು. </p>.<p>ಶ್ರೀಕೃಷ್ಣ ಪತ್ನಿ ವಿನುತಾ ಆಲನಹಳ್ಳಿ, ಪುತ್ರ ಪ್ರದ್ಯುಮ್ನ ಆಲನಹಳ್ಳಿ, ಪುತ್ರಿ ಕೃತಿಕಾ ಆಲನಹಳ್ಳಿ, ಅಳಿಯ ಕಣ್ಣನ್, ಲೇಖಕ ಶಿವಾಗ್ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>