<p><strong>ಮೈಸೂರು:</strong> ‘ವಿದ್ಯಾರ್ಥಿಗಳು ಅಧಿಕಾರ ಮತು ಶೈಕ್ಷಣಿಕ ಸುಖದ ಹಿಂದೆಯಷ್ಟೇ ಹೋಗದೆ ಪರಿಪೂರ್ಣ ಜೀವನವನ್ನು ರೂಪಿಸಿಕೊಳ್ಳುವತ್ತ ಗಮನಹರಿಸಬೇಕು’ ಎಂದು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಸಲಹೆ ನೀಡಿದರು.</p><p>ಇಲ್ಲಿನ ಜಯಲಕ್ಷ್ಮೀಪುರಂನ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ 13ನೇ ಪದವಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p><p>‘ಜೀವನದಲ್ಲಿ ಸಾಧಿಸಬೇಕಾದ ನಿರ್ದಿಷ್ಟ ಗುರಿಗಳತ್ತ ಹೆಚ್ಚಿನ ಗಮನ ಕೊಡುವುದು ವಿದ್ಯಾರ್ಥಿಗಳ ಆದ್ಯತೆ ಆಗಬೇಕು. ಕಾಲೇಜುಗಳು ದೇವಾಲಯವಿದ್ದಂತೆ. ಇಲ್ಲಿನ ಹಳೆಯ ವಿದ್ಯಾರ್ಥಿಗಳು ಭೇಟಿ ನೀಡುತ್ತಿರಬೇಕು’ ಎಂದು ಹೇಳಿದರು.</p><p>ಮೈಸೂರು ವಿಶ್ವವಿದ್ಯಾಲಯದ ಬಿಮ್ಸ್ ನಿವೃತ್ತ ಪ್ರಾಧ್ಯಾಪಕ ಡಿ.ಆನಂದ್, ‘ಪದವಿ ನಂತರ ಯುವಜನತೆ ಸಾಮಾಜಿಕ - ನಾಗರಿಕ ಜವಾಬ್ಧಾರಿಗಳನ್ನು ಸ್ವೀಕರಿಸಲು ಸಿದ್ಧರಿರಬೇಕು. ದೇಶದ ಭವಿಷ್ಯವು ಯುವಕರ ಮೇಲೆ ಅವಲಂಬಿತವಾಗಿದ್ದು, ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು’ ಎಂದು ಸಲಹೆ ನೀಡಿದರು.</p><p>ಮೈಸೂರು ಧರ್ಮಕ್ಷೇತ್ರ ಶಿಕ್ಷಣ ಸೊಸೈಟಿಯ ಕಾರ್ಯದರ್ಶಿ ಎಡ್ವರ್ಡ್ ವಿಲಿಯಂ ಸಲ್ಡಾನ್ಹಾ ಸ್ವಾಗತಿಸಿದರು. ಖಜಾಂಚಿ ನವೀನ್ಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಚಂದ್ರಕಲಾ ಎನ್. ವಂದಿಸಿದರು.</p><p><strong>ಪ್ರಶಸ್ತಿ ಪ್ರದಾನ:</strong> </p><p>ಶೈಕ್ಷಣಿಕ ಉತ್ಕೃಷ್ಟತೆಗಾಗಿ ಪ್ರೊ.ಮಣಿ ಸಿ. ಮ್ಯಾಥ್ಯೂ ದತ್ತಿ ಪ್ರಶಸ್ತಿಯನ್ನು ಪಲ್ಲವಿ ಎಂ. (ಬಿಕಾಂ), ಮೋಕ್ಷಾ ವೈ.ಎಸ್. (ಬಿಬಿಎ), ಇಂಚರಾ ಕೆ.ವಿ. (ಬಿಸಿಎ), ತ್ರಿಶಾ ಜಿ. (ಬಿ.ಎಸ್ಸಿ) ಪಡೆದರು.</p><p>ಅತ್ಯುತ್ತಮ ನಿರ್ಗಮಿತ ವಿದ್ಯಾರ್ಥಿ ಪ್ರಶಸ್ತಿಯನ್ನು ಸುಮನ್, ಅನ್ಬು ಪೌಲಿನ್ ಟಿ., ಸಂಜನಾ ದಮಯಂತಿ ಹಾಗೂ ದರ್ಶನ್ ಗಳಿಸಿದರು.</p><p>ಫ್ರೈಡ್ ಆಫ್ ಜೋಸೆಫ್ಸ್ ಪ್ರಶಸ್ತಿಗೆ ಸಿಂಚನಾ ಆರ್. ರೋಷನ್ ಡೆನೆಲ್ಡಿ ಆಲ್ಮೇಡಾ, ಪೃಥ್ವಿ ಪಿ. ಶೆಟ್ಟಿ, ದುರ್ಗಾಭವಾನಿ ಎನ್.ಎಲ್. ಮತ್ತು ಹಿಶಿತಾ ಸೋಮಯ್ಯ ಭಾಜನವಾದರು. </p><p>ಎನ್ಸಿಸಿ ಪ್ರಶಸ್ತಿಯನ್ನು ಪಲ್ಲವಿ ಟಿ.ಪಿ., ವಿನಂತಿ ಟಿ.ಎಸ್., ರಕ್ಷಾ ತಂಗಮ್ಮ ಮತ್ತು ಮೋಕ್ಷ್ ಪಿ.ಎನ್. ಗಳಿಸಿದರು.</p><p>ಎನ್ಎಸ್ಎಸ್ ಪ್ರಶಸ್ತಿಗೆ ವಿನಯ್ ಎಂ. ಗೌಡ, ಡಿಂಪಲ್ ಬಿ.ಬಿ. ಪಾತ್ರವಾದರು.</p><p>ಸ್ಪಿರಿಟೆಡ್ ಜೋಸೆಫೈಟ್ ಪ್ರಶಸ್ತಿಯು ಸುನೈನಾ ನರಸಿಂಹನ್, ಸಾಧ್ವಿ ಎಲ್., ಇಂದು ಆರ್., ವಿಶ್ವಾಸ್ ಎನ್., ವರಲಕ್ಷ್ಮಿ ಎಸ್. ಮತ್ತು ಲೆನಿನ್ ಶಾಲೋಮ್, ಕುಶಾಲ್ ಎಂ. ಮತ್ತು ಇಮ್ಯಾನ್ಯುವಲ್ ಸಿ. ಕುಮಾರ್ ಅವರಿಗೆ ದೊರೆಯಿತು. </p><p>ಪ್ರಾಂಶುಪಾಲರ ಪ್ರಶಸ್ತಿಯನ್ನು ಜೋನಾಥನ್ ಎ. ಪ್ರತಾಪ್ ಅವರಿಗೆ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ವಿದ್ಯಾರ್ಥಿಗಳು ಅಧಿಕಾರ ಮತು ಶೈಕ್ಷಣಿಕ ಸುಖದ ಹಿಂದೆಯಷ್ಟೇ ಹೋಗದೆ ಪರಿಪೂರ್ಣ ಜೀವನವನ್ನು ರೂಪಿಸಿಕೊಳ್ಳುವತ್ತ ಗಮನಹರಿಸಬೇಕು’ ಎಂದು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಸಲಹೆ ನೀಡಿದರು.</p><p>ಇಲ್ಲಿನ ಜಯಲಕ್ಷ್ಮೀಪುರಂನ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ 13ನೇ ಪದವಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p><p>‘ಜೀವನದಲ್ಲಿ ಸಾಧಿಸಬೇಕಾದ ನಿರ್ದಿಷ್ಟ ಗುರಿಗಳತ್ತ ಹೆಚ್ಚಿನ ಗಮನ ಕೊಡುವುದು ವಿದ್ಯಾರ್ಥಿಗಳ ಆದ್ಯತೆ ಆಗಬೇಕು. ಕಾಲೇಜುಗಳು ದೇವಾಲಯವಿದ್ದಂತೆ. ಇಲ್ಲಿನ ಹಳೆಯ ವಿದ್ಯಾರ್ಥಿಗಳು ಭೇಟಿ ನೀಡುತ್ತಿರಬೇಕು’ ಎಂದು ಹೇಳಿದರು.</p><p>ಮೈಸೂರು ವಿಶ್ವವಿದ್ಯಾಲಯದ ಬಿಮ್ಸ್ ನಿವೃತ್ತ ಪ್ರಾಧ್ಯಾಪಕ ಡಿ.ಆನಂದ್, ‘ಪದವಿ ನಂತರ ಯುವಜನತೆ ಸಾಮಾಜಿಕ - ನಾಗರಿಕ ಜವಾಬ್ಧಾರಿಗಳನ್ನು ಸ್ವೀಕರಿಸಲು ಸಿದ್ಧರಿರಬೇಕು. ದೇಶದ ಭವಿಷ್ಯವು ಯುವಕರ ಮೇಲೆ ಅವಲಂಬಿತವಾಗಿದ್ದು, ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು’ ಎಂದು ಸಲಹೆ ನೀಡಿದರು.</p><p>ಮೈಸೂರು ಧರ್ಮಕ್ಷೇತ್ರ ಶಿಕ್ಷಣ ಸೊಸೈಟಿಯ ಕಾರ್ಯದರ್ಶಿ ಎಡ್ವರ್ಡ್ ವಿಲಿಯಂ ಸಲ್ಡಾನ್ಹಾ ಸ್ವಾಗತಿಸಿದರು. ಖಜಾಂಚಿ ನವೀನ್ಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಚಂದ್ರಕಲಾ ಎನ್. ವಂದಿಸಿದರು.</p><p><strong>ಪ್ರಶಸ್ತಿ ಪ್ರದಾನ:</strong> </p><p>ಶೈಕ್ಷಣಿಕ ಉತ್ಕೃಷ್ಟತೆಗಾಗಿ ಪ್ರೊ.ಮಣಿ ಸಿ. ಮ್ಯಾಥ್ಯೂ ದತ್ತಿ ಪ್ರಶಸ್ತಿಯನ್ನು ಪಲ್ಲವಿ ಎಂ. (ಬಿಕಾಂ), ಮೋಕ್ಷಾ ವೈ.ಎಸ್. (ಬಿಬಿಎ), ಇಂಚರಾ ಕೆ.ವಿ. (ಬಿಸಿಎ), ತ್ರಿಶಾ ಜಿ. (ಬಿ.ಎಸ್ಸಿ) ಪಡೆದರು.</p><p>ಅತ್ಯುತ್ತಮ ನಿರ್ಗಮಿತ ವಿದ್ಯಾರ್ಥಿ ಪ್ರಶಸ್ತಿಯನ್ನು ಸುಮನ್, ಅನ್ಬು ಪೌಲಿನ್ ಟಿ., ಸಂಜನಾ ದಮಯಂತಿ ಹಾಗೂ ದರ್ಶನ್ ಗಳಿಸಿದರು.</p><p>ಫ್ರೈಡ್ ಆಫ್ ಜೋಸೆಫ್ಸ್ ಪ್ರಶಸ್ತಿಗೆ ಸಿಂಚನಾ ಆರ್. ರೋಷನ್ ಡೆನೆಲ್ಡಿ ಆಲ್ಮೇಡಾ, ಪೃಥ್ವಿ ಪಿ. ಶೆಟ್ಟಿ, ದುರ್ಗಾಭವಾನಿ ಎನ್.ಎಲ್. ಮತ್ತು ಹಿಶಿತಾ ಸೋಮಯ್ಯ ಭಾಜನವಾದರು. </p><p>ಎನ್ಸಿಸಿ ಪ್ರಶಸ್ತಿಯನ್ನು ಪಲ್ಲವಿ ಟಿ.ಪಿ., ವಿನಂತಿ ಟಿ.ಎಸ್., ರಕ್ಷಾ ತಂಗಮ್ಮ ಮತ್ತು ಮೋಕ್ಷ್ ಪಿ.ಎನ್. ಗಳಿಸಿದರು.</p><p>ಎನ್ಎಸ್ಎಸ್ ಪ್ರಶಸ್ತಿಗೆ ವಿನಯ್ ಎಂ. ಗೌಡ, ಡಿಂಪಲ್ ಬಿ.ಬಿ. ಪಾತ್ರವಾದರು.</p><p>ಸ್ಪಿರಿಟೆಡ್ ಜೋಸೆಫೈಟ್ ಪ್ರಶಸ್ತಿಯು ಸುನೈನಾ ನರಸಿಂಹನ್, ಸಾಧ್ವಿ ಎಲ್., ಇಂದು ಆರ್., ವಿಶ್ವಾಸ್ ಎನ್., ವರಲಕ್ಷ್ಮಿ ಎಸ್. ಮತ್ತು ಲೆನಿನ್ ಶಾಲೋಮ್, ಕುಶಾಲ್ ಎಂ. ಮತ್ತು ಇಮ್ಯಾನ್ಯುವಲ್ ಸಿ. ಕುಮಾರ್ ಅವರಿಗೆ ದೊರೆಯಿತು. </p><p>ಪ್ರಾಂಶುಪಾಲರ ಪ್ರಶಸ್ತಿಯನ್ನು ಜೋನಾಥನ್ ಎ. ಪ್ರತಾಪ್ ಅವರಿಗೆ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>