ಮೈಸೂರು: ದಸರಾ ಕವಿಗೋಷ್ಠಿ ಉಪ ಸಮಿತಿಯವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಮಂಗಳವಾರ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರು.
‘ಪ್ರಜಾವಾಣಿ’ಯಲ್ಲಿ ಮಂಗಳವಾರ ಪ್ರಕಟವಾಗಿದ್ದ ವರದಿಯನ್ನು ಪ್ರಸ್ತಾಪಿಸಿದ ಸಚಿವರು, ‘ಇಂತಹ ಅವಾಂತರಗಳು ಮರುಕಳಿಸದಂತೆ ನೋಡಿಕೊಳ್ಳಬೇಕು’ ಎಂದು ಉಪ ಸಮಿತಿಗಳಿಗೆ ಸೂಚಿಸಿದರು.
‘ಕರಡು ಪ್ರತಿ ಶೇರ್ ಆಗಿದೆ’ ಎಂಬ ಉಪ ಸಮಿತಿಯವರ ಸಮಜಾಯಿಷಿಗೆ ಸಚಿವರು ಒಪ್ಪಲಿಲ್ಲ. ‘ತಪ್ಪಾಗಿರುವುದನ್ನು ತಿದ್ದಿಕೊಳ್ಳಬೇಕು. ಪರಿಷ್ಕೃತ ಆಹ್ವಾನಪತ್ರಿಕೆಗಳನ್ನು ಹಂಚಬೇಕು’ ಎಂದು ಸಚಿವರು ತಾಕೀತು ಮಾಡಿದ್ದಾರೆ. ಸಂಜೆ ವೇಳೆಗೆ ಪರಿಷ್ಕೃತ ಆಹ್ವಾನಪತ್ರಿಕೆಗಳನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಾಯಿತು.