ಮೊದಲ ಮೂರು ಬಹುಮಾನ ಪಡೆದವರಿಗೆ ಕ್ರಮವಾಗಿ ₹5ಸಾವಿರ, ₹3ಸಾವಿರ, ₹2ಸಾವಿರ ನೀಡಲಾಗುವುದು. ತೀರ್ಪುಗಾರರು ಮೆಚ್ಚಿದ ಹತ್ತು ಕಥೆಗಳಿಗೆ ತಲಾ ₹1ಸಾವಿರ ಪ್ರೋತ್ಸಾಹಕರ ಬಹುಮಾನ ಕೊಡಲಾಗುವುದು. ವಿಜೇತರು ಮತ್ತು ಪ್ರೋತ್ಸಾಹಕರ ಬಹುಮಾನ ಪಡೆದವರಿಗೆ ಮೇ ಕೊನೆಯ ವಾರದಲ್ಲಿ ಕಾವ್ಯ ಮತ್ತು ಕಥಾ ಕಮ್ಮಟ ನಡೆಸಲಾಗುವುದು. ಹೆಚ್ಚಿನ ಮಾಹಿತಿಯನ್ನು samathaadhyayanakendra2023@gmail.com ಮೂಲಕ ಪಡೆಯಬಹುದು ಎಂದು ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಸಬಿಹಾ ಭೂಮಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.