ಮೈಸೂರು: ನಗರದ ಶ್ರೀಹರ್ಷ ರಸ್ತೆಯಲ್ಲಿರುವ ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಹೋಟೆಲ್ ಉದ್ಯಮಿ ಎಂ.ಎನ್. ಸ್ವರೂಪ್ ಹಾಗೂ ಉಪಾಧ್ಯಕ್ಷರಾಗಿ ಕುರುಬರಹಳ್ಳಿ ಪ್ರಕಾಶ್ ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಸಂಚಾಲಕರಾಗಿ ರಾಜೇಂದ್ರ
ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಮಡಿಕೇರಿ, ಉಡುಪಿ ಹಾಗೂ ಶಿವಮೊಗ್ಗ ಭಾಗದಲ್ಲಿ ನಡೆಯುವ ಬಿಜೆಪಿ ಸಂಕಲ್ಪ ಯಾತ್ರೆಯ ಸಂಚಾಲಕರಾಗಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ ನಿಯೋಜನೆಗೊಂಡಿದ್ದಾರೆ.
ಈ ಏಳು ಜಿಲ್ಲೆಗಳಲ್ಲಿ ನಡೆಯುವ ಬಿಜೆಪಿಯ ಜನ ಸಂಕಲ್ಪ ಯಾತ್ರೆಯ ಸಂಪೂರ್ಣ ಉಸ್ತುವಾರಿ ಇವರದೇ ಆಗಿದ್ದು, ಅವರೊಂದಿಗೆ ಇಬ್ಬರು ಸಹ ಸಂಚಾಲಕರನ್ನೂ ಪಕ್ಷದಿಂದ ನಿಯೋಜಿಸಲಾಗಿದೆ.