<p>ತಿ.ನರಸೀಪುರ: ‘25 ವರ್ಷಗಳಿಂದ ಉಚಿತ ಆರೋಗ್ಯ ಶಿಬಿರ ನಡೆಸುತ್ತಾ ಬಂದಿದ್ದು, ಹಲವು ಚಿಕಿತ್ಸಾ ಪದ್ಧತಿ ಮೂಲಕ ಜನರಿಗೆ ಅಗತ್ಯ ಸಹಕಾರ ನೀಡುತ್ತಿದ್ದೇವೆ’ ಎಂದು ಹಸ್ತಿಕೇರಿ ಮಠದ ಸಿದ್ಧಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ತಲಕಾಡು ಹಸ್ತಿಕೇರಿ ಮಠದಲ್ಲಿ ಮಠದ ವಿಕಾಸ ವೇದಿಕೆ ಟ್ರಸ್ಟ್, ಬೆಂಗಳೂರಿನ ಪತಂಜಲಿ ಇಂಟರ್ನ್ಯಾಷನಲ್ ಯೋಗಾಶ್ರಮ, ಸಮೃದ್ಧಿ ಪಾಲಿಕ್ಲಿನಿಕ್ ಡಯಾಗ್ನೋಸ್ಟಿಕ್ ಮೈಸೂರು ಮತ್ತು ತಲಕಾಡು ಶಾಖೆಗಳ ಸಹಯೋಗದಲ್ಲಿ ಶುಕ್ರವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.</p>.<p>ಯೋಗ, ಪ್ರಾಕೃತಿಕ, ವಿಷ ಚಿಕಿತ್ಸೆ, ಸಮನ್ವಯ, ಸ್ವಮೂತ್ರ ಚಿಕಿತ್ಸೆ ವಿಧಾನಗಳ ಮೂಲಕ ಹಿಂದಿನ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬಡ ರೋಗಿಗಳಿಗೂ ಸಹಕಾರಿಯಾಗಿದೆ ಎಂದು ತಿಳಿಸಿದರು.</p>.<p>ಪತಂಜಲಿ ಯೋಗಾಶ್ರಮದ ಪ್ರಕಾಶ್ ಯೋಗಿ ಮಾತನಾಡಿ, ‘ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಯೋಗ ಶಿಬಿರಗಳನ್ನು ಅಯೋಜಿಸಿ ಲಕ್ಷಾಂತರ ಜನರಿಗೆ ಯೋಗದ ಮಹತ್ವ ಸಾರಿದ್ದೇವೆ’ ಎಂದರು.</p>.<p>ಡಾ. ನವೀನ್, ಡಾ. ಸೈವಾಲಿನ್, ನಿಂಗರಾಜು, ಯೋಗೇಶ್, ಕಪಿಲ್ ರಾವ್, ಪಿ.ಜಿ. ಪಾಂಡುರಂಗ ಶೆಟ್ರು, ಮಲ್ಲಣ್ಣ, ಮಹೇಶ್, ಯಜಮಾನ ಚೆನ್ನಬಸವಣ್ಣ, ಪಾಪಣ್ಣ, ಮಹದೇವಪ್ಪ, ಪಂಚಾಯಿತಿ ಮಾಜಿ ಸದಸ್ಯ ನಾಗರಾಜು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260517-38-335734948</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಿ.ನರಸೀಪುರ: ‘25 ವರ್ಷಗಳಿಂದ ಉಚಿತ ಆರೋಗ್ಯ ಶಿಬಿರ ನಡೆಸುತ್ತಾ ಬಂದಿದ್ದು, ಹಲವು ಚಿಕಿತ್ಸಾ ಪದ್ಧತಿ ಮೂಲಕ ಜನರಿಗೆ ಅಗತ್ಯ ಸಹಕಾರ ನೀಡುತ್ತಿದ್ದೇವೆ’ ಎಂದು ಹಸ್ತಿಕೇರಿ ಮಠದ ಸಿದ್ಧಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ತಲಕಾಡು ಹಸ್ತಿಕೇರಿ ಮಠದಲ್ಲಿ ಮಠದ ವಿಕಾಸ ವೇದಿಕೆ ಟ್ರಸ್ಟ್, ಬೆಂಗಳೂರಿನ ಪತಂಜಲಿ ಇಂಟರ್ನ್ಯಾಷನಲ್ ಯೋಗಾಶ್ರಮ, ಸಮೃದ್ಧಿ ಪಾಲಿಕ್ಲಿನಿಕ್ ಡಯಾಗ್ನೋಸ್ಟಿಕ್ ಮೈಸೂರು ಮತ್ತು ತಲಕಾಡು ಶಾಖೆಗಳ ಸಹಯೋಗದಲ್ಲಿ ಶುಕ್ರವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.</p>.<p>ಯೋಗ, ಪ್ರಾಕೃತಿಕ, ವಿಷ ಚಿಕಿತ್ಸೆ, ಸಮನ್ವಯ, ಸ್ವಮೂತ್ರ ಚಿಕಿತ್ಸೆ ವಿಧಾನಗಳ ಮೂಲಕ ಹಿಂದಿನ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬಡ ರೋಗಿಗಳಿಗೂ ಸಹಕಾರಿಯಾಗಿದೆ ಎಂದು ತಿಳಿಸಿದರು.</p>.<p>ಪತಂಜಲಿ ಯೋಗಾಶ್ರಮದ ಪ್ರಕಾಶ್ ಯೋಗಿ ಮಾತನಾಡಿ, ‘ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಯೋಗ ಶಿಬಿರಗಳನ್ನು ಅಯೋಜಿಸಿ ಲಕ್ಷಾಂತರ ಜನರಿಗೆ ಯೋಗದ ಮಹತ್ವ ಸಾರಿದ್ದೇವೆ’ ಎಂದರು.</p>.<p>ಡಾ. ನವೀನ್, ಡಾ. ಸೈವಾಲಿನ್, ನಿಂಗರಾಜು, ಯೋಗೇಶ್, ಕಪಿಲ್ ರಾವ್, ಪಿ.ಜಿ. ಪಾಂಡುರಂಗ ಶೆಟ್ರು, ಮಲ್ಲಣ್ಣ, ಮಹೇಶ್, ಯಜಮಾನ ಚೆನ್ನಬಸವಣ್ಣ, ಪಾಪಣ್ಣ, ಮಹದೇವಪ್ಪ, ಪಂಚಾಯಿತಿ ಮಾಜಿ ಸದಸ್ಯ ನಾಗರಾಜು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260517-38-335734948</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>