‘ಕುಸಿದಿದ್ದ ಮನೆಯಲ್ಲೇ ತೆಂಗಿನಗರಿ ಕಟ್ಟಿಕೊಂಡು ವಾಸ ಮಾಡುತ್ತಿದ್ದರು. ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಕುಟುಂಬವು ಬೀದಿಗೆ ಬಿದ್ದಿದೆ. ಮೂರ್ಛೆ ಹೋಗಿದ್ದ ಚಿಕ್ಕತಾಯಮ್ಮ ಅವರ ಪತಿಯನ್ನು ಉಪಚರಿಸಲಾಯಿತು. ಸರಗೂರು ತಾಲ್ಲೂಕಿನಲ್ಲಿ 421 ಫಲಾನುಭವಿಗಳು ಪರಿಹಾರ ಸಿಗದೇ ಅತಂತ್ರರಾಗಿದ್ದಾರೆ. ಜಿಲ್ಲಾಡಳಿತ ಮಧ್ಯ ಪ್ರವೇಶಿಸಬೇಕು’ ಎಂದು ಹೇಳಿದರು.