<p><strong>ಅಣ್ಣೂರು ಹಾಡಿ (ಎಚ್.ಡಿ. ಕೋಟೆ ತಾಲ್ಲೂಕು):</strong> ‘ನಾವು ಹಿಂದೆ ಬಿಸಿಲಿನಲ್ಲಿ ಜಮೀನುಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದೆವು. ಆಗ, ದಿನಕ್ಕೆ ₹ 150 ಕೂಲಿ ಸಿಗುತ್ತಿತ್ತು. ಈಗ, ನೆರಳಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ನಿತ್ಯ ₹ 250 ಸಿಗುತ್ತದೆ. ನಮ್ಮದೇ ಸಂಘವನ್ನು ಕಟ್ಟಿಕೊಂಡಿದ್ದು, ಅದರಿಂದ ನಮಗೆ ನಾವೇ ಸಂಬಳ ಪಡೆದುಕೊಳ್ಳುತ್ತಿದ್ದೇವೆ. ಸ್ವಾವಲಂಬಿ ಬದುಕಿಗೆ ಇದು ಸಹಕಾರಿಯಾಗಿದೆ...’</p>.<p>- ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲ್ಲೂಕಿನ ಅಣ್ಣೂರುಹಾಡಿಯ ಯುವತಿ ಪಲ್ಲವಿ ಸಂತಸದಿಂದ ಹೀಗೆ ಹೇಳಿದರು.</p>.<p>‘ಪ್ರಕೃತಿ ಆದಿವಾಸಿ ಉತ್ಪಾದಕ ಗುಂಪು’ ಭಾಗವಾಗಿರುವ ಅವರು ಚಿಪ್ಸ್ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ನಮಗೆ ಮನೆಯ ಬಳಿಯೇ ಕೆಲಸ ಸಿಕ್ಕಿರುವುದರಿಂದ ಬೇರೆಯವರ ಜಮೀನಿಗೆ ಕೆಲಸಕ್ಕೆ ಹೋಗುವುದು ಅಥವಾ ಕೊಡಗಿನಂತಹ ಕಡೆಗೆ ವಲಸೆ ಹೋಗುವುದು ತಪ್ಪಿದೆ’ ಎಂಬುದು ಅವರ ನುಡಿ.</p>.<p>ಈ ದೂರದ ಹಳ್ಳಿಯಲ್ಲಿ ನಡೆಯುತ್ತಿರುವ ಮಹಿಳಾ ಉದ್ಯಮಕ್ಕೆ ಪ್ರಖ್ಯಾತ ವಾಚ್ ತಯಾರಿಕಾ ಕಂಪನಿ ಟೈಟನ್ ಸಿಎಸ್ಆರ್ ನಿಧಿಯಲ್ಲಿ ಆರ್ಥಿಕವಾಗಿ ನೆರವಾಗಿದೆ. ಸೇತುವೆಯಾಗಿ ಕೆಲಸ ಮಾಡಿರುವ ಎಸ್ವಿವೈಎಂ (ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್) ಸಹಕಾರ ನೀಡಿದೆ. ತರಬೇತಿ ಹಾಗೂ ಮಾರ್ಗದರ್ಶನ ನೀಡಿದೆ. ಮಾರುಕಟ್ಟೆ ಕಂಡುಕೊಳ್ಳುವ ದಾರಿಯನ್ನೂ ತೋರಿಸಿಕೊಟ್ಟಿದೆ.</p>.<p>ಕೈಹಿಡಿದ ಟೈಟನ್: ಘಟಕದಲ್ಲಿ ಚಿಪ್ಸ್ ತಯಾರಿಕೆಗೆ ಬೇಕಾದ ಯಂತ್ರೋಪಕರಣಗಳನ್ನು ಖರೀದಿಸುವುದಕ್ಕಾಗಿ ಟೈಟನ್ ಕಂಪನಿಯು ₹ 15 ಲಕ್ಷ ಒದಗಿಸಿದೆ. ಎಸ್ವಿವೈಎಂ ಸಂಸ್ಥೆಯು ಅನುವುಗಾರರರಾಗಿ ಕೆಲಸ ಮಾಡಿದೆ.</p>.<p>ಪಲ್ಲವಿ, ರತ್ನಮ್ಮ, ಹಲಗಮ್ಮ, ಮಹದೇವಿ, ಪುಷ್ಪಾ, ಮಂಜುಳಾ, ಮದ್ದೂರಮ್ಮ, ಮಹದೇವಿ, ಶಿಲ್ಪಾ ಅವರನ್ನು ಒಳಗೊಂಡಿರುವ ಪ್ರಕೃತಿ ಆದಿವಾಸಿ ಉತ್ಪಾದಕರ ಗುಂಪು ಬ್ಯಾಂಕ್ನ ಎಲ್ಲ ವ್ಯವಹಾರವನ್ನೂ ತಾನೇ ನೋಡಿಕೊಳ್ಳುತ್ತಿದೆ. ಇವರೆಲ್ಲರೂ ಜೇನುಕುರುಬ ಸಮಾಜದವರು. ಇವರಿಗೆ ಎಸ್ವಿವೈಎಂ ದಾರಿದೀಪವಾಗಿದೆ.</p>.<p>‘ಬಾಳೆಕಾಯಿ, ಮರಗೆಣಸು ಹಾಗೂ ಲಭ್ಯತೆ ಆಧರಿಸಿ ಹಲಸಿನ ಚಿಪ್ಸ್ಗಳನ್ನು ಇಲ್ಲಿ ಸಿದ್ಧಪಡಿಸುತ್ತೇವೆ. ಇದರಿಂದ ದೊರೆಯುತ್ತಿರುವ ವರಮಾನದಿಂದ ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ. ಚಿಪ್ಸ್ ಮಾಡುವುದಕ್ಕೆ ಅಗತ್ಯವಾಗುವಂತಹ ಉತ್ತಮ ಗುಣಮಟ್ಟದ ಬಾಳೆ (ನೇಂದ್ರ) ಕಾಯಿ ಹಾಗೂ ಮರಗೆಣಸನ್ನು ರೈತರಿಂದ ನಾವೇ ಖರೀದಿಸಿ ತರುತ್ತೇವೆ. ಮೂರು ದಿನಗಳಲ್ಲಿ ಬಾಳೆಕಾಯಿಯನ್ನು ಬಳಸಬೇಕು. ಇಲ್ಲದಿದ್ದರೆ ಹಣ್ಣಾಗಿ ಬಿಡುತ್ತದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬೇಡಿಕೆ ಆಧರಿಸಿ ಚಿಪ್ಸ್ ಮಾಡುತ್ತೇವೆ’ ಎಂದು ಪಲ್ಲವಿ ಹಾಗೂ ಸದಸ್ಯರು ತಿಳಿಸಿದರು.</p>.<p>‘ಹ್ಯಾಂಡ್ಪೋಸ್ಟ್ ಕ್ಯಾಂಟೀನ್ಗೆ ನಮ್ಮದೇ ಚಿಪ್ಸ್ ಮಾರುತ್ತೇವೆ. ವಸ್ತುಪ್ರದರ್ಶನಗಳ ಸಂದರ್ಭದಲ್ಲಿ ಮಳಿಗೆಗಳನ್ನು ಹಾಕುತ್ತೇವೆ’ ಎಂದು ಅವರು ಖುಷಿಯಿಂದ ಹೇಳಿದರು.</p>.<p><strong>ತರಬೇತಿ ನಂತರ...</strong> </p><p>‘ನಾವು ಎಸ್ವಿವೈಎಂ ಸಹಯೋಗದಲ್ಲಿ ಸಿಎಫ್ಟಿಆರ್ಐನಲ್ಲೂ ತರಬೇತಿ ಪಡೆದಿದ್ದೆವು. ಬ್ಯಾಂಕ್ ವ್ಯವಹಾರ ಸೇರಿದಂತೆ ಎಲ್ಲವನ್ನೂ ನಾವೇ ಮಾಡುತ್ತೇವೆ. ಜಾರ್ಖಂಡ್ ಮೊದಲಾದ ಕಡೆಗಳಿಗೂ ಇಲ್ಲಿಂದ ಚಿಪ್ಸ್ ಕಳುಹಿಸಲಾಗಿದೆ. ಪ್ರದರ್ಶನಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ’ ಎಂದು ಗುಂಪಿನ ಸದಸ್ಯರು ಮಾಹಿತಿ ನೀಡಿದರು. ಆ ಆದಿವಾಸಿ ಮಹಿಳೆಯರಿಗೆ ನೆರವಾಗಿರುವ ಟೈಟನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿ.ಕೆ. ವೆಂಕಟರಾಮನ್ ಶುಕ್ರವಾರ ಘಟಕಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಆ ಗುಂಪಿನವರು ಮಾರುಕಟ್ಟೆ ಕಂಡುಕೊಂಡಿರುವುದನ್ನು ಕಂಡು ಖುಷಿ ವ್ಯಕ್ತಪಡಿಸಿದರು. ಚಿಪ್ಸ್ನ ರುಚಿ ನೋಡಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ‘ಸಾಮಾಜಿಕ ಪರಿಣಾಮ ಬೀರುವ ಕಾರ್ಯಕ್ರಮಗಳಿಗೆ ನಾವು ಸಿಎಸ್ಆರ್ ಅಡಿ ನೆರವಾಗುತ್ತಿದ್ದೇವೆ. ಗ್ರಾಮೀಣ ಜನ ಸಮೂಹಕ್ಕೆ ಬಲ ತುಂಬವ ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದರು. ಅವರೊಂದಿಗೆ ಟೈಟನ್ ಕಂಪನಿ ಲಿಮಿಟೆಡ್ನ ಚೀಫ್ ಸಸ್ಟೇನೇಬಿಲಿಟಿ ಆಫೀಸರ್ ಎನ್.ಇ. ಶ್ರೀಧರ್ ಹಾಗೂ ಎಸ್ವಿವೈಎಂ ಸಂಸ್ಥೆಯ ಸಿಇಒ ಸವಿತಾ ಎಸ್. ಪಾಲ್ಗೊಂಡಿದ್ದರು. ಗುಂಪಿನ ಮಹಿಳೆಯರು ಚಿಪ್ಸ್ ತಯಾರಿಕೆಯ ವಿಧಾನ ಪ್ಯಾಕಿಂಗ್ ಮೊದಲಾದವುಗಳನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಣ್ಣೂರು ಹಾಡಿ (ಎಚ್.ಡಿ. ಕೋಟೆ ತಾಲ್ಲೂಕು):</strong> ‘ನಾವು ಹಿಂದೆ ಬಿಸಿಲಿನಲ್ಲಿ ಜಮೀನುಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದೆವು. ಆಗ, ದಿನಕ್ಕೆ ₹ 150 ಕೂಲಿ ಸಿಗುತ್ತಿತ್ತು. ಈಗ, ನೆರಳಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ನಿತ್ಯ ₹ 250 ಸಿಗುತ್ತದೆ. ನಮ್ಮದೇ ಸಂಘವನ್ನು ಕಟ್ಟಿಕೊಂಡಿದ್ದು, ಅದರಿಂದ ನಮಗೆ ನಾವೇ ಸಂಬಳ ಪಡೆದುಕೊಳ್ಳುತ್ತಿದ್ದೇವೆ. ಸ್ವಾವಲಂಬಿ ಬದುಕಿಗೆ ಇದು ಸಹಕಾರಿಯಾಗಿದೆ...’</p>.<p>- ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲ್ಲೂಕಿನ ಅಣ್ಣೂರುಹಾಡಿಯ ಯುವತಿ ಪಲ್ಲವಿ ಸಂತಸದಿಂದ ಹೀಗೆ ಹೇಳಿದರು.</p>.<p>‘ಪ್ರಕೃತಿ ಆದಿವಾಸಿ ಉತ್ಪಾದಕ ಗುಂಪು’ ಭಾಗವಾಗಿರುವ ಅವರು ಚಿಪ್ಸ್ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ನಮಗೆ ಮನೆಯ ಬಳಿಯೇ ಕೆಲಸ ಸಿಕ್ಕಿರುವುದರಿಂದ ಬೇರೆಯವರ ಜಮೀನಿಗೆ ಕೆಲಸಕ್ಕೆ ಹೋಗುವುದು ಅಥವಾ ಕೊಡಗಿನಂತಹ ಕಡೆಗೆ ವಲಸೆ ಹೋಗುವುದು ತಪ್ಪಿದೆ’ ಎಂಬುದು ಅವರ ನುಡಿ.</p>.<p>ಈ ದೂರದ ಹಳ್ಳಿಯಲ್ಲಿ ನಡೆಯುತ್ತಿರುವ ಮಹಿಳಾ ಉದ್ಯಮಕ್ಕೆ ಪ್ರಖ್ಯಾತ ವಾಚ್ ತಯಾರಿಕಾ ಕಂಪನಿ ಟೈಟನ್ ಸಿಎಸ್ಆರ್ ನಿಧಿಯಲ್ಲಿ ಆರ್ಥಿಕವಾಗಿ ನೆರವಾಗಿದೆ. ಸೇತುವೆಯಾಗಿ ಕೆಲಸ ಮಾಡಿರುವ ಎಸ್ವಿವೈಎಂ (ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್) ಸಹಕಾರ ನೀಡಿದೆ. ತರಬೇತಿ ಹಾಗೂ ಮಾರ್ಗದರ್ಶನ ನೀಡಿದೆ. ಮಾರುಕಟ್ಟೆ ಕಂಡುಕೊಳ್ಳುವ ದಾರಿಯನ್ನೂ ತೋರಿಸಿಕೊಟ್ಟಿದೆ.</p>.<p>ಕೈಹಿಡಿದ ಟೈಟನ್: ಘಟಕದಲ್ಲಿ ಚಿಪ್ಸ್ ತಯಾರಿಕೆಗೆ ಬೇಕಾದ ಯಂತ್ರೋಪಕರಣಗಳನ್ನು ಖರೀದಿಸುವುದಕ್ಕಾಗಿ ಟೈಟನ್ ಕಂಪನಿಯು ₹ 15 ಲಕ್ಷ ಒದಗಿಸಿದೆ. ಎಸ್ವಿವೈಎಂ ಸಂಸ್ಥೆಯು ಅನುವುಗಾರರರಾಗಿ ಕೆಲಸ ಮಾಡಿದೆ.</p>.<p>ಪಲ್ಲವಿ, ರತ್ನಮ್ಮ, ಹಲಗಮ್ಮ, ಮಹದೇವಿ, ಪುಷ್ಪಾ, ಮಂಜುಳಾ, ಮದ್ದೂರಮ್ಮ, ಮಹದೇವಿ, ಶಿಲ್ಪಾ ಅವರನ್ನು ಒಳಗೊಂಡಿರುವ ಪ್ರಕೃತಿ ಆದಿವಾಸಿ ಉತ್ಪಾದಕರ ಗುಂಪು ಬ್ಯಾಂಕ್ನ ಎಲ್ಲ ವ್ಯವಹಾರವನ್ನೂ ತಾನೇ ನೋಡಿಕೊಳ್ಳುತ್ತಿದೆ. ಇವರೆಲ್ಲರೂ ಜೇನುಕುರುಬ ಸಮಾಜದವರು. ಇವರಿಗೆ ಎಸ್ವಿವೈಎಂ ದಾರಿದೀಪವಾಗಿದೆ.</p>.<p>‘ಬಾಳೆಕಾಯಿ, ಮರಗೆಣಸು ಹಾಗೂ ಲಭ್ಯತೆ ಆಧರಿಸಿ ಹಲಸಿನ ಚಿಪ್ಸ್ಗಳನ್ನು ಇಲ್ಲಿ ಸಿದ್ಧಪಡಿಸುತ್ತೇವೆ. ಇದರಿಂದ ದೊರೆಯುತ್ತಿರುವ ವರಮಾನದಿಂದ ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ. ಚಿಪ್ಸ್ ಮಾಡುವುದಕ್ಕೆ ಅಗತ್ಯವಾಗುವಂತಹ ಉತ್ತಮ ಗುಣಮಟ್ಟದ ಬಾಳೆ (ನೇಂದ್ರ) ಕಾಯಿ ಹಾಗೂ ಮರಗೆಣಸನ್ನು ರೈತರಿಂದ ನಾವೇ ಖರೀದಿಸಿ ತರುತ್ತೇವೆ. ಮೂರು ದಿನಗಳಲ್ಲಿ ಬಾಳೆಕಾಯಿಯನ್ನು ಬಳಸಬೇಕು. ಇಲ್ಲದಿದ್ದರೆ ಹಣ್ಣಾಗಿ ಬಿಡುತ್ತದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬೇಡಿಕೆ ಆಧರಿಸಿ ಚಿಪ್ಸ್ ಮಾಡುತ್ತೇವೆ’ ಎಂದು ಪಲ್ಲವಿ ಹಾಗೂ ಸದಸ್ಯರು ತಿಳಿಸಿದರು.</p>.<p>‘ಹ್ಯಾಂಡ್ಪೋಸ್ಟ್ ಕ್ಯಾಂಟೀನ್ಗೆ ನಮ್ಮದೇ ಚಿಪ್ಸ್ ಮಾರುತ್ತೇವೆ. ವಸ್ತುಪ್ರದರ್ಶನಗಳ ಸಂದರ್ಭದಲ್ಲಿ ಮಳಿಗೆಗಳನ್ನು ಹಾಕುತ್ತೇವೆ’ ಎಂದು ಅವರು ಖುಷಿಯಿಂದ ಹೇಳಿದರು.</p>.<p><strong>ತರಬೇತಿ ನಂತರ...</strong> </p><p>‘ನಾವು ಎಸ್ವಿವೈಎಂ ಸಹಯೋಗದಲ್ಲಿ ಸಿಎಫ್ಟಿಆರ್ಐನಲ್ಲೂ ತರಬೇತಿ ಪಡೆದಿದ್ದೆವು. ಬ್ಯಾಂಕ್ ವ್ಯವಹಾರ ಸೇರಿದಂತೆ ಎಲ್ಲವನ್ನೂ ನಾವೇ ಮಾಡುತ್ತೇವೆ. ಜಾರ್ಖಂಡ್ ಮೊದಲಾದ ಕಡೆಗಳಿಗೂ ಇಲ್ಲಿಂದ ಚಿಪ್ಸ್ ಕಳುಹಿಸಲಾಗಿದೆ. ಪ್ರದರ್ಶನಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ’ ಎಂದು ಗುಂಪಿನ ಸದಸ್ಯರು ಮಾಹಿತಿ ನೀಡಿದರು. ಆ ಆದಿವಾಸಿ ಮಹಿಳೆಯರಿಗೆ ನೆರವಾಗಿರುವ ಟೈಟನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿ.ಕೆ. ವೆಂಕಟರಾಮನ್ ಶುಕ್ರವಾರ ಘಟಕಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಆ ಗುಂಪಿನವರು ಮಾರುಕಟ್ಟೆ ಕಂಡುಕೊಂಡಿರುವುದನ್ನು ಕಂಡು ಖುಷಿ ವ್ಯಕ್ತಪಡಿಸಿದರು. ಚಿಪ್ಸ್ನ ರುಚಿ ನೋಡಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ‘ಸಾಮಾಜಿಕ ಪರಿಣಾಮ ಬೀರುವ ಕಾರ್ಯಕ್ರಮಗಳಿಗೆ ನಾವು ಸಿಎಸ್ಆರ್ ಅಡಿ ನೆರವಾಗುತ್ತಿದ್ದೇವೆ. ಗ್ರಾಮೀಣ ಜನ ಸಮೂಹಕ್ಕೆ ಬಲ ತುಂಬವ ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದರು. ಅವರೊಂದಿಗೆ ಟೈಟನ್ ಕಂಪನಿ ಲಿಮಿಟೆಡ್ನ ಚೀಫ್ ಸಸ್ಟೇನೇಬಿಲಿಟಿ ಆಫೀಸರ್ ಎನ್.ಇ. ಶ್ರೀಧರ್ ಹಾಗೂ ಎಸ್ವಿವೈಎಂ ಸಂಸ್ಥೆಯ ಸಿಇಒ ಸವಿತಾ ಎಸ್. ಪಾಲ್ಗೊಂಡಿದ್ದರು. ಗುಂಪಿನ ಮಹಿಳೆಯರು ಚಿಪ್ಸ್ ತಯಾರಿಕೆಯ ವಿಧಾನ ಪ್ಯಾಕಿಂಗ್ ಮೊದಲಾದವುಗಳನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>