<p><strong>ಮೈಸೂರು:</strong> ‘ವರುಣ ವಿಧಾನಸಭಾ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಪಡಿಸುವ ಮೂಲಕ ಮಾದರಿಯಾಗಿಸಲು ಶ್ರಮಿಸುತ್ತಿದ್ದೇವೆ’ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.</p>.<p>ವರುಣ ಕ್ಷೇತ್ರದ ಕುಂಬ್ರಳ್ಳಿಮಠ ಗ್ರಾಮದ ಶಾಲೆಯಲ್ಲಿ ಐಟಿಸಿ ಕಂಪನಿಯಿಂದ ಗುರುವಾರ ನಡೆದ ಸಮುದಾಯ ಅಭಿವೃದ್ಧಿ ಸಮಾರಂಭದಲ್ಲಿ ಕಲಿಕಾ ಸಾಮಗ್ರಿ ವಿತರಣೆ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ, ನವೀಕರಣಗೊಂಡ ಆರೋಗ್ಯ ಕೇಂದ್ರಗಳು ಹಾಗೂ ಅಂಗನವಾಡಿ ಕೇಂದ್ರಗಳ ಕೀ ಹಸ್ತಾಂತರ ನೆರವೇರಿಸಿ ಅವರು ಮಾತನಾಡಿದರು.</p>.<p>‘ಐಟಿಸಿ ಕಂಪನಿಯವರು 59 ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಒದಗಿಸಿದ್ದಾರೆ. 38 ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಿದ್ದಾರೆ. 6 ಆರೋಗ್ಯ ಕೇಂದ್ರಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿದ್ದಾರೆ. 1,050 ನಿರಾಶ್ರಿತ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಸಹಾಯ ಮಾಡಿದ್ದಾರೆ’ ಎಂದು ಹೇಳಿದರು.</p>.<p><strong>ಸಿಎಸ್ಆರ್ ನಿಧಿಯಿಂದ:</strong> </p>.<p>‘ವರುಣ ಕ್ಷೇತ್ರ ಮುಖ್ಯಮಂತ್ರಿಯವರ ಕ್ಷೇತ್ರವಾದ್ದರಿಂದ, ಇಲ್ಲಿನ ಯಾವುದೇ ಶಾಲೆಯಲ್ಲಿ ಕೊಠಡಿಗಳ ಕೊರತೆ ಇರಬಾರದೆಂದು ಸಿಎಸ್ಆರ್ ನಿಧಿಯಿಂದ ನಿರ್ಮಿಸಿಕೊಡುತ್ತಿದ್ದೇವೆ. ಕುಂಬ್ರಳ್ಳಿಮಠದ ಶಾಲೆಗೂ ಸರ್ಕಾರದಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದೇವೆ’ ಎಂದು ತಿಳಿಸಿದರು.</p>.<p>ಐಟಿಸಿ ಕಂಪನಿಯ ಮುಖ್ಯ ವ್ಯವಸ್ಥಾಪಕ ರಾಕೇಶ್ ಕೆ., ಹಿರಿಯ ವ್ಯವಸ್ಥಾಪಕ ಹರೀಶ್ಬಾಬು, ಮನೋಜ್ ಎಂ., ಡಿಎಚ್ಒ ಡಾ.ಪಿ.ಸಿ. ಕುಮಾರಸ್ವಾಮಿ, ಬಿಇಒ ಪ್ರಕಾಶ್, ಮುಖ್ಯಶಿಕ್ಷಕಿ ಅನಿತಾ ಎಂ.ಎಸ್., ಮುಖ್ಯಮಂತ್ರಿಯವರ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಶಿವಸ್ವಾಮಿ, ಪ್ರದೀಪ್ಕುಮಾರ್, ನಾಗರಾಜು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾದೇವ್, ರಾಯನಹುಂಡಿ ರವಿ, ಡಾ.ಅರುಣ್ಕುಮಾರ್, ಡಾ.ಸುಜಾತಾ, ಸಿಡಿಪಿಒ ತಿಬ್ಬಯ್ಯ, ಮಾಕನಹುಂಡಿ ಶಿವು, ಹದಿನಾರು ಅಭಿ, ಶಿವರಾಂ, ಪುಟ್ಟರಾಜು, ಪುಟ್ಟಮಾದಯ್ಯ, ಶಿವು, ಸುರೇಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ವರುಣ ವಿಧಾನಸಭಾ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಪಡಿಸುವ ಮೂಲಕ ಮಾದರಿಯಾಗಿಸಲು ಶ್ರಮಿಸುತ್ತಿದ್ದೇವೆ’ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.</p>.<p>ವರುಣ ಕ್ಷೇತ್ರದ ಕುಂಬ್ರಳ್ಳಿಮಠ ಗ್ರಾಮದ ಶಾಲೆಯಲ್ಲಿ ಐಟಿಸಿ ಕಂಪನಿಯಿಂದ ಗುರುವಾರ ನಡೆದ ಸಮುದಾಯ ಅಭಿವೃದ್ಧಿ ಸಮಾರಂಭದಲ್ಲಿ ಕಲಿಕಾ ಸಾಮಗ್ರಿ ವಿತರಣೆ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ, ನವೀಕರಣಗೊಂಡ ಆರೋಗ್ಯ ಕೇಂದ್ರಗಳು ಹಾಗೂ ಅಂಗನವಾಡಿ ಕೇಂದ್ರಗಳ ಕೀ ಹಸ್ತಾಂತರ ನೆರವೇರಿಸಿ ಅವರು ಮಾತನಾಡಿದರು.</p>.<p>‘ಐಟಿಸಿ ಕಂಪನಿಯವರು 59 ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಒದಗಿಸಿದ್ದಾರೆ. 38 ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಿದ್ದಾರೆ. 6 ಆರೋಗ್ಯ ಕೇಂದ್ರಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿದ್ದಾರೆ. 1,050 ನಿರಾಶ್ರಿತ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಸಹಾಯ ಮಾಡಿದ್ದಾರೆ’ ಎಂದು ಹೇಳಿದರು.</p>.<p><strong>ಸಿಎಸ್ಆರ್ ನಿಧಿಯಿಂದ:</strong> </p>.<p>‘ವರುಣ ಕ್ಷೇತ್ರ ಮುಖ್ಯಮಂತ್ರಿಯವರ ಕ್ಷೇತ್ರವಾದ್ದರಿಂದ, ಇಲ್ಲಿನ ಯಾವುದೇ ಶಾಲೆಯಲ್ಲಿ ಕೊಠಡಿಗಳ ಕೊರತೆ ಇರಬಾರದೆಂದು ಸಿಎಸ್ಆರ್ ನಿಧಿಯಿಂದ ನಿರ್ಮಿಸಿಕೊಡುತ್ತಿದ್ದೇವೆ. ಕುಂಬ್ರಳ್ಳಿಮಠದ ಶಾಲೆಗೂ ಸರ್ಕಾರದಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದೇವೆ’ ಎಂದು ತಿಳಿಸಿದರು.</p>.<p>ಐಟಿಸಿ ಕಂಪನಿಯ ಮುಖ್ಯ ವ್ಯವಸ್ಥಾಪಕ ರಾಕೇಶ್ ಕೆ., ಹಿರಿಯ ವ್ಯವಸ್ಥಾಪಕ ಹರೀಶ್ಬಾಬು, ಮನೋಜ್ ಎಂ., ಡಿಎಚ್ಒ ಡಾ.ಪಿ.ಸಿ. ಕುಮಾರಸ್ವಾಮಿ, ಬಿಇಒ ಪ್ರಕಾಶ್, ಮುಖ್ಯಶಿಕ್ಷಕಿ ಅನಿತಾ ಎಂ.ಎಸ್., ಮುಖ್ಯಮಂತ್ರಿಯವರ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಶಿವಸ್ವಾಮಿ, ಪ್ರದೀಪ್ಕುಮಾರ್, ನಾಗರಾಜು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾದೇವ್, ರಾಯನಹುಂಡಿ ರವಿ, ಡಾ.ಅರುಣ್ಕುಮಾರ್, ಡಾ.ಸುಜಾತಾ, ಸಿಡಿಪಿಒ ತಿಬ್ಬಯ್ಯ, ಮಾಕನಹುಂಡಿ ಶಿವು, ಹದಿನಾರು ಅಭಿ, ಶಿವರಾಂ, ಪುಟ್ಟರಾಜು, ಪುಟ್ಟಮಾದಯ್ಯ, ಶಿವು, ಸುರೇಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>