<p><strong>ಮೈಸೂರು:</strong> ‘ತಂತ್ರಜ್ಞಾನವು ಬಹಳ ಮುನ್ನಡೆ ಸಾಧಿಸಿರುವ ಈ ಕಾಲಘಟ್ಟದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳ ಅರಿವನ್ನು ಹೊಂದುವುದು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದರ್ ಹೇಳಿದರು.</p>.<p>ಇಲ್ಲಿನ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಪ್ರೊ.ಪಿ.ಎಂ.ಚಿಕ್ಕಬೋರಯ್ಯ ಸ್ಮರಣಾರ್ಥ ಶನಿವಾರ ಆಯೋಜಿಸಿದ್ದ ‘ಬೌದ್ಧಿಕ ಆಸ್ತಿ ಹಕ್ಕುಗಳಲ್ಲಿ ವಿಕಸನಗೊಳ್ಳುತ್ತಿರುವ ಪ್ರವೃತ್ತಿಗಳು ಮತ್ತು ಸಮಕಾಲೀನ ಸವಾಲುಗಳು’ ವಿಷಯದ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಮನುಷ್ಯನು ಬೌದ್ಧಿಕ ಸೃಷ್ಟಿಯನ್ನು ರಕ್ಷಿಸುವ ಕುರಿತಾಗಿ ಬಹಳ ಕಾಳಜಿ ವಹಿಸಿರುವುದು ಹಿಂದಿನಿಂದಲೂ ಕಂಡುಬರುತ್ತದೆ. ಏಕೆಂದರೆ ಒಂದು ವ್ಯವಹಾರವು ಸಮರ್ಥವಾಗಿ ಮುಂದುವರಿಯಲು ಹಕ್ಕುಸ್ವಾಮ್ಯ ಮತ್ತು ಗ್ರಂಥಸ್ವಾಮ್ಯಗಳ ರಕ್ಷಣೆಯು ಮೂಲಭೂತ ಅಗತ್ಯವಾಗಿದೆ’ ಎಂದರು.</p>.<p>ರಾಷ್ಟ್ರಗಳ ನವ ಸಂಪತ್ತು: ‘14 ಮತ್ತು 15ನೇ ಶತಮಾನಗಳಲ್ಲಿ ಚಿಹ್ನೆಗಳ ಜೊತೆ ಲೋಗೊಗಳನ್ನು ಬಳಸುವ ವ್ಯವಸ್ಥೆ ಹುಟ್ಟಿಕೊಂಡಿತು. ಈ ಎಲ್ಲದರ ಪರಿಣಾಮ ಈಗ ನಾವು ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲೂ ಹಕ್ಕುಸ್ವಾಮ್ಯದ ಕಾನೂನಿನ ಅವಶ್ಯಕತೆ ಮತ್ತು ಬೆಳವಣಿಗೆಯನ್ನು ಕಾಣುತ್ತಿದ್ದೇವೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ನ್ಯಾಯಶಾಸ್ತ್ರಜ್ಞರು ಬೌದ್ಧಿಕ ಸ್ವತ್ತಿನ ಕಾನೂನುಗಳನ್ನು ‘ರಾಷ್ಟ್ರಗಳ ನವ ಸಂಪತ್ತು’ ಎಂದು ಕರೆದಿದ್ದಾರೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಈಗ ಕೃತಕ ಬುದ್ಧಿಮತ್ತೆ ಮತ್ತು ಪೇಟೆಂಟ್ಗಳ ಕ್ಷೇತ್ರದಲ್ಲಿ ಕೆಲವು ಮಿತಿಗಳೂ ಕಂಡುಬರುತ್ತಿವೆ. ಉದಾಹರಿಸುವುದಾದರೆ, ನಾವೆಲ್ಲ ಮೊಬೈಲ್ ಫೋನ್ಗಳನ್ನು ಬಳಸಿ ಸಂದೇಶಗಳನ್ನು ಕಳುಹಿಸುವಾಗ ಅದರಲ್ಲಿನ ಭಾಷೆಯನ್ನು ಬಳಸುತ್ತಿದ್ದೇವಷ್ಟೆ. ಇದು ನಮಗೆ ಸಂವಹನದ ಸುಲಭ ಸೌಲಭ್ಯವನ್ನು ಕಲ್ಪಿಸಿರಬಹುದು. ಆದರೆ, ಇಂದಿನ ಮಕ್ಕಳು ಇಂಗ್ಲಿಷ್ ಭಾಷೆಯ ಪದಗಳ ನಿಜವಾದ ಸ್ಪೆಲ್ಲಿಂಗ್ಗಳನ್ನೇ ಮರೆಯುತ್ತಿದ್ದಾರೆ ಎನ್ನುವುದೂ ಅಷ್ಟೇ ಸತ್ಯ. ಇದೊಂದು ಚಿಂತಾಜನಕ ಬೆಳವಣಿಗೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>ಗಂಭೀರವಾಗಿ ಚಿಂತಿಸಬೇಕು: ‘ಅಂತೆಯೇ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗುತ್ತಿದೆ. ಬೆಂಗಳೂರು ಒಂದರಲ್ಲಿಯೇ ಶೇ 60ರಷ್ಟು ಪ್ರಕರಣಗಳು ಸೈಬರ್ ಅಪರಾಧಗಳ ಕುರಿತವೇ ಆಗಿವೆ ಎನ್ನುವುದನ್ನು ಪೊಲೀಸ್ ಅಧಿಕಾರಿಯೊಬ್ಬರು ಈಚೆಗೆ ತಿಳಿಸಿದ್ದರು. ಹೀಗಿರುವಾಗ ಕೃತಕ ಬುದ್ಧಿಮತ್ತೆಯ ಬಳಕೆ ಯಾವ ಮಟ್ಟದಲ್ಲಿ, ಎಷ್ಟು ಪ್ರಮಾಣದಲ್ಲಿ ಇರಬೇಕು ಎನ್ನುವುದರ ಬಗ್ಗೆಯೂ ನಾವೆಲ್ಲ ಗಂಭೀರವಾಗಿ ಚರ್ಚಿಸಬೇಕಾದ ಅಗತ್ಯತೆ ಇದೆ’ ಎಂದರು.</p>.<p>‘ಕಾನೂನು ವೃತ್ತಿ ನಿಜಕ್ಕೂ ಒಂದು ಘನವಾದ, ಘನತೆಯಿಂದ ಕೂಡಿದ್ದಾಗಿದೆ. ಹಾಗಾಗಿ ಇದನ್ನು ಯಾರದೋ ಒತ್ತಾಯಕ್ಕೆ ಮಣಿದೋ ಅಥವಾ ಅನಿವಾರ್ಯಕ್ಕೋ ಅಲ್ಲದೆ ಇಷ್ಟಪಟ್ಟು ಆಯ್ದುಕೊಳ್ಳಬೇಕು. ಇಂದು ಈ ಕ್ಷೇತ್ರದಲ್ಲಿ ಸ್ಪರ್ಧೆ ಗಣನೀಯವಾಗಿ ಬೆಳೆದಿದೆ. ಕೇವಲ ಬೆಂಗಳೂರಿನಲ್ಲಿಯೇ 25 ಸಾವಿರ ವಕೀಲರಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.</p>.<p>ಪಶ್ಚಿಮ ಬಂಗಾಳದ ಎನ್ಯುಜೆಎಸ್ ಪ್ರಾಧ್ಯಾಪಕ ಎನ್.ಎಸ್.ಶ್ರೀನಿವಾಸುಲು, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ, ಸಿಎಂಸಿ ಮುಖ್ಯಸ್ಥ ಎಸ್.ಶಿವಲಿಂಗಯ್ಯ, ವಿದ್ಯಾವರ್ಧಕ ಕಾನೂನು ಕಾಲೇಜಿನ ಪ್ರಾಂಶುಪಾಲ ದೀಪು ಪಿ., ಕಾರ್ಯಕ್ರಮ ಸಂಯೋಜಕ ಎನ್.ಜೆ.ಕುಮಾರ್, ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಎಂ.ಜೆ. ಇಂದುಮತಿ ಪಾಲ್ಗೊಂಡಿದ್ದರು.</p>.<div><blockquote>ಕಾನೂನು ವಿದ್ಯಾರ್ಥಿಗಳು ದಿನಕ್ಕೊಂದರಂತೆ ತೀರ್ಪುಗಳನ್ನು ಓದಬೇಕು. ವೃತ್ತಿಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಉತ್ತಮ ಕೌಶಲ ಮಾತಿನ ಕಲೆ ಬೆಳೆಸಿಕೊಳ್ಳಬೇಕು. </blockquote><span class="attribution">ರಾಮಚಂದ್ರ ಡಿ. ಹುದ್ದರ್ ಹೈಕೋರ್ಟ್ ನ್ಯಾಯಮೂರ್ತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ತಂತ್ರಜ್ಞಾನವು ಬಹಳ ಮುನ್ನಡೆ ಸಾಧಿಸಿರುವ ಈ ಕಾಲಘಟ್ಟದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳ ಅರಿವನ್ನು ಹೊಂದುವುದು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದರ್ ಹೇಳಿದರು.</p>.<p>ಇಲ್ಲಿನ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಪ್ರೊ.ಪಿ.ಎಂ.ಚಿಕ್ಕಬೋರಯ್ಯ ಸ್ಮರಣಾರ್ಥ ಶನಿವಾರ ಆಯೋಜಿಸಿದ್ದ ‘ಬೌದ್ಧಿಕ ಆಸ್ತಿ ಹಕ್ಕುಗಳಲ್ಲಿ ವಿಕಸನಗೊಳ್ಳುತ್ತಿರುವ ಪ್ರವೃತ್ತಿಗಳು ಮತ್ತು ಸಮಕಾಲೀನ ಸವಾಲುಗಳು’ ವಿಷಯದ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಮನುಷ್ಯನು ಬೌದ್ಧಿಕ ಸೃಷ್ಟಿಯನ್ನು ರಕ್ಷಿಸುವ ಕುರಿತಾಗಿ ಬಹಳ ಕಾಳಜಿ ವಹಿಸಿರುವುದು ಹಿಂದಿನಿಂದಲೂ ಕಂಡುಬರುತ್ತದೆ. ಏಕೆಂದರೆ ಒಂದು ವ್ಯವಹಾರವು ಸಮರ್ಥವಾಗಿ ಮುಂದುವರಿಯಲು ಹಕ್ಕುಸ್ವಾಮ್ಯ ಮತ್ತು ಗ್ರಂಥಸ್ವಾಮ್ಯಗಳ ರಕ್ಷಣೆಯು ಮೂಲಭೂತ ಅಗತ್ಯವಾಗಿದೆ’ ಎಂದರು.</p>.<p>ರಾಷ್ಟ್ರಗಳ ನವ ಸಂಪತ್ತು: ‘14 ಮತ್ತು 15ನೇ ಶತಮಾನಗಳಲ್ಲಿ ಚಿಹ್ನೆಗಳ ಜೊತೆ ಲೋಗೊಗಳನ್ನು ಬಳಸುವ ವ್ಯವಸ್ಥೆ ಹುಟ್ಟಿಕೊಂಡಿತು. ಈ ಎಲ್ಲದರ ಪರಿಣಾಮ ಈಗ ನಾವು ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲೂ ಹಕ್ಕುಸ್ವಾಮ್ಯದ ಕಾನೂನಿನ ಅವಶ್ಯಕತೆ ಮತ್ತು ಬೆಳವಣಿಗೆಯನ್ನು ಕಾಣುತ್ತಿದ್ದೇವೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ನ್ಯಾಯಶಾಸ್ತ್ರಜ್ಞರು ಬೌದ್ಧಿಕ ಸ್ವತ್ತಿನ ಕಾನೂನುಗಳನ್ನು ‘ರಾಷ್ಟ್ರಗಳ ನವ ಸಂಪತ್ತು’ ಎಂದು ಕರೆದಿದ್ದಾರೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಈಗ ಕೃತಕ ಬುದ್ಧಿಮತ್ತೆ ಮತ್ತು ಪೇಟೆಂಟ್ಗಳ ಕ್ಷೇತ್ರದಲ್ಲಿ ಕೆಲವು ಮಿತಿಗಳೂ ಕಂಡುಬರುತ್ತಿವೆ. ಉದಾಹರಿಸುವುದಾದರೆ, ನಾವೆಲ್ಲ ಮೊಬೈಲ್ ಫೋನ್ಗಳನ್ನು ಬಳಸಿ ಸಂದೇಶಗಳನ್ನು ಕಳುಹಿಸುವಾಗ ಅದರಲ್ಲಿನ ಭಾಷೆಯನ್ನು ಬಳಸುತ್ತಿದ್ದೇವಷ್ಟೆ. ಇದು ನಮಗೆ ಸಂವಹನದ ಸುಲಭ ಸೌಲಭ್ಯವನ್ನು ಕಲ್ಪಿಸಿರಬಹುದು. ಆದರೆ, ಇಂದಿನ ಮಕ್ಕಳು ಇಂಗ್ಲಿಷ್ ಭಾಷೆಯ ಪದಗಳ ನಿಜವಾದ ಸ್ಪೆಲ್ಲಿಂಗ್ಗಳನ್ನೇ ಮರೆಯುತ್ತಿದ್ದಾರೆ ಎನ್ನುವುದೂ ಅಷ್ಟೇ ಸತ್ಯ. ಇದೊಂದು ಚಿಂತಾಜನಕ ಬೆಳವಣಿಗೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>ಗಂಭೀರವಾಗಿ ಚಿಂತಿಸಬೇಕು: ‘ಅಂತೆಯೇ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗುತ್ತಿದೆ. ಬೆಂಗಳೂರು ಒಂದರಲ್ಲಿಯೇ ಶೇ 60ರಷ್ಟು ಪ್ರಕರಣಗಳು ಸೈಬರ್ ಅಪರಾಧಗಳ ಕುರಿತವೇ ಆಗಿವೆ ಎನ್ನುವುದನ್ನು ಪೊಲೀಸ್ ಅಧಿಕಾರಿಯೊಬ್ಬರು ಈಚೆಗೆ ತಿಳಿಸಿದ್ದರು. ಹೀಗಿರುವಾಗ ಕೃತಕ ಬುದ್ಧಿಮತ್ತೆಯ ಬಳಕೆ ಯಾವ ಮಟ್ಟದಲ್ಲಿ, ಎಷ್ಟು ಪ್ರಮಾಣದಲ್ಲಿ ಇರಬೇಕು ಎನ್ನುವುದರ ಬಗ್ಗೆಯೂ ನಾವೆಲ್ಲ ಗಂಭೀರವಾಗಿ ಚರ್ಚಿಸಬೇಕಾದ ಅಗತ್ಯತೆ ಇದೆ’ ಎಂದರು.</p>.<p>‘ಕಾನೂನು ವೃತ್ತಿ ನಿಜಕ್ಕೂ ಒಂದು ಘನವಾದ, ಘನತೆಯಿಂದ ಕೂಡಿದ್ದಾಗಿದೆ. ಹಾಗಾಗಿ ಇದನ್ನು ಯಾರದೋ ಒತ್ತಾಯಕ್ಕೆ ಮಣಿದೋ ಅಥವಾ ಅನಿವಾರ್ಯಕ್ಕೋ ಅಲ್ಲದೆ ಇಷ್ಟಪಟ್ಟು ಆಯ್ದುಕೊಳ್ಳಬೇಕು. ಇಂದು ಈ ಕ್ಷೇತ್ರದಲ್ಲಿ ಸ್ಪರ್ಧೆ ಗಣನೀಯವಾಗಿ ಬೆಳೆದಿದೆ. ಕೇವಲ ಬೆಂಗಳೂರಿನಲ್ಲಿಯೇ 25 ಸಾವಿರ ವಕೀಲರಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.</p>.<p>ಪಶ್ಚಿಮ ಬಂಗಾಳದ ಎನ್ಯುಜೆಎಸ್ ಪ್ರಾಧ್ಯಾಪಕ ಎನ್.ಎಸ್.ಶ್ರೀನಿವಾಸುಲು, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ, ಸಿಎಂಸಿ ಮುಖ್ಯಸ್ಥ ಎಸ್.ಶಿವಲಿಂಗಯ್ಯ, ವಿದ್ಯಾವರ್ಧಕ ಕಾನೂನು ಕಾಲೇಜಿನ ಪ್ರಾಂಶುಪಾಲ ದೀಪು ಪಿ., ಕಾರ್ಯಕ್ರಮ ಸಂಯೋಜಕ ಎನ್.ಜೆ.ಕುಮಾರ್, ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಎಂ.ಜೆ. ಇಂದುಮತಿ ಪಾಲ್ಗೊಂಡಿದ್ದರು.</p>.<div><blockquote>ಕಾನೂನು ವಿದ್ಯಾರ್ಥಿಗಳು ದಿನಕ್ಕೊಂದರಂತೆ ತೀರ್ಪುಗಳನ್ನು ಓದಬೇಕು. ವೃತ್ತಿಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಉತ್ತಮ ಕೌಶಲ ಮಾತಿನ ಕಲೆ ಬೆಳೆಸಿಕೊಳ್ಳಬೇಕು. </blockquote><span class="attribution">ರಾಮಚಂದ್ರ ಡಿ. ಹುದ್ದರ್ ಹೈಕೋರ್ಟ್ ನ್ಯಾಯಮೂರ್ತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>