<p><strong>ಮೈಸೂರು:</strong> ‘ಬ್ರಿಟಿಷರ ನಾಡಿಗೇ ನುಗ್ಗಿ ಅವರ ವಿರುದ್ಧ ಹೋರಾಡಿದ ವಿನಾಯಕ ದಾಮೋದರ ಸಾವರ್ಕರ್ ನಿಜವಾದ ವೀರ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಮರಿಸಿದರು.</p><p>‘ಸಾವರ್ಕರ್ ಪ್ರತಿಷ್ಠಾನ ಮೈಸೂರು’ ವತಿಯಿಂದ ನಗರದ ಫೀಲ್ಡ್ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾವರ್ಕರ್ ಅವರ 143ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.</p><p>‘ಸಾವರ್ಕರ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಜೀವಿತಾವಧಿಯ ಬಹುಪಾಲು ಜೈಲಿನಲ್ಲಿ ಸವೆಸಿ, ಸಮರ್ಪಿಸಿಕೊಂಡವರು. ಸ್ವಾತಂತ್ರ್ಯ ಬಂದ ನಂತರವೂ ಅವರು ಅನುಭವಿಸಿದ ಶಿಕ್ಷೆ ಹಾಗೂ ನೋವು ಹೇಳತೀರದು. ಬ್ರಿಟಿಷರ ನಾಡಿಗೆ ಹೋಗಿ ಅವರ ವಿರುದ್ಧ ಹೋರಾಟಕ್ಕಾಗಿ ಸಂಘಟನೆಯನ್ನು ಸಜ್ಜುಗೊಳಿಸಿದ ವೀರ. ಅಂಡಮಾನ್ ಜೈಲಿನ ಚಿಕ್ಕ ಕೋಣೆಯೊಂದರಲ್ಲಿ ಕಠಿಣ ಕರಿನೀರಿನ ಶಿಕ್ಷೆ ಅನುಭವಿಸಿದ್ದರು. ಅಂತಹ ಮಹಾನ್ ವ್ಯಕ್ತಿಯ ಜಯಂತಿಯಂದು ಅವರ ತ್ಯಾಗವನ್ನು ನೆನೆಯುವುದು ಹಾಗೂ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ಹೇಳಿದರು.</p><p>ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.</p><p>ಸಾವರ್ಕರ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ರಾಕೇಶ್ ಭಟ್, ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ, ಮುಖಂಡರಾದ ಜಗದೀಶ್, ವಿಕ್ರಂ ಅಯ್ಯಂಗಾರ್, ಸಂದೇಶ್, ಪ್ರಮೋದ್ ಗೌಡ, ಸಂಜಯ್, ಸಂತೋಷ್, ಟಿ.ಎಸ್. ಅರುಣ್, ದೀಪಕ್, ರವಿ, ಗೈಡ್ ಚಂದ್ರು, ಸಂಜಯ್ ಪ್ರಸನ್ನ, ಡಿ. ರಾಘವೇಂದ್ರ, ಚೇತನ್, ಭಾಗ್ಯರಾಜ್, ಮಧು ಸೋಮಶೇಖರ್, ಚಂದನ್ ಗೌಡ, ಮುರಳಿ, ನಾಗೇಂದ್ರ, ವಿಷ್ಣುವರ್ಧನ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಬ್ರಿಟಿಷರ ನಾಡಿಗೇ ನುಗ್ಗಿ ಅವರ ವಿರುದ್ಧ ಹೋರಾಡಿದ ವಿನಾಯಕ ದಾಮೋದರ ಸಾವರ್ಕರ್ ನಿಜವಾದ ವೀರ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಮರಿಸಿದರು.</p><p>‘ಸಾವರ್ಕರ್ ಪ್ರತಿಷ್ಠಾನ ಮೈಸೂರು’ ವತಿಯಿಂದ ನಗರದ ಫೀಲ್ಡ್ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾವರ್ಕರ್ ಅವರ 143ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.</p><p>‘ಸಾವರ್ಕರ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಜೀವಿತಾವಧಿಯ ಬಹುಪಾಲು ಜೈಲಿನಲ್ಲಿ ಸವೆಸಿ, ಸಮರ್ಪಿಸಿಕೊಂಡವರು. ಸ್ವಾತಂತ್ರ್ಯ ಬಂದ ನಂತರವೂ ಅವರು ಅನುಭವಿಸಿದ ಶಿಕ್ಷೆ ಹಾಗೂ ನೋವು ಹೇಳತೀರದು. ಬ್ರಿಟಿಷರ ನಾಡಿಗೆ ಹೋಗಿ ಅವರ ವಿರುದ್ಧ ಹೋರಾಟಕ್ಕಾಗಿ ಸಂಘಟನೆಯನ್ನು ಸಜ್ಜುಗೊಳಿಸಿದ ವೀರ. ಅಂಡಮಾನ್ ಜೈಲಿನ ಚಿಕ್ಕ ಕೋಣೆಯೊಂದರಲ್ಲಿ ಕಠಿಣ ಕರಿನೀರಿನ ಶಿಕ್ಷೆ ಅನುಭವಿಸಿದ್ದರು. ಅಂತಹ ಮಹಾನ್ ವ್ಯಕ್ತಿಯ ಜಯಂತಿಯಂದು ಅವರ ತ್ಯಾಗವನ್ನು ನೆನೆಯುವುದು ಹಾಗೂ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ಹೇಳಿದರು.</p><p>ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.</p><p>ಸಾವರ್ಕರ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ರಾಕೇಶ್ ಭಟ್, ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ, ಮುಖಂಡರಾದ ಜಗದೀಶ್, ವಿಕ್ರಂ ಅಯ್ಯಂಗಾರ್, ಸಂದೇಶ್, ಪ್ರಮೋದ್ ಗೌಡ, ಸಂಜಯ್, ಸಂತೋಷ್, ಟಿ.ಎಸ್. ಅರುಣ್, ದೀಪಕ್, ರವಿ, ಗೈಡ್ ಚಂದ್ರು, ಸಂಜಯ್ ಪ್ರಸನ್ನ, ಡಿ. ರಾಘವೇಂದ್ರ, ಚೇತನ್, ಭಾಗ್ಯರಾಜ್, ಮಧು ಸೋಮಶೇಖರ್, ಚಂದನ್ ಗೌಡ, ಮುರಳಿ, ನಾಗೇಂದ್ರ, ವಿಷ್ಣುವರ್ಧನ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>