<p><strong>ಮೈಸೂರು:</strong> ‘ಅತಿಯಾದರೆ ಅಮೃತವೂ ವಿಷವಾಗುತ್ತದೆ. ಹಾಗೆಯೇ ಮಕ್ಕಳು ಮೊಬೈಲ್ ಫೋನ್ ಅತಿಯಾಗಿ ಬಳಸಿದರೆ, ಅದು ಗೀಳಾಗಿ ಬದುಕು ಹಾಳಾಗುತ್ತದೆ. ಹೀಗಾಗಿ, ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು’ ಎಂದು ಲೇಖಕಿ ಯಶೋಧಾ ರಾಮಕೃಷ್ಣ ಸಲಹೆ ನೀಡಿದರು.</p><p>ಇಲ್ಲಿನ ವಿಜಯನಗರ 3ನೇ ಹಂತದಲ್ಲಿರುವ ವಿ.ಕೆ. ಪಬ್ಲಿಕ್ ಸ್ಕೂಲ್ನಲ್ಲಿ ಅದಮ್ಯ ರಂಗಶಾಲೆಯಿಂದ ಶನಿವಾರ ನಡೆದ ‘ವಿಶ್ವ ಪುಸ್ತಕ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಾಹಿತ್ಯ ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.</p><p>‘ಮೊಬೈಲ್ ಫೋನ್ನಿಂದ ಮಕ್ಕಳು ದೂರವಿದ್ದಷ್ಟೂ ಒಳ್ಳೆಯದು. ಇದರಿಂದ ಅಪಾರ ಸಮಯ ಉಳಿತಾಯ ಆಗುತ್ತದೆ. ಆ ಸಮಯವನ್ನು ಪುಸ್ತಕ ಓದಲು, ಆಡಲು, ಸ್ನೇಹಿತರೊಂದಿಗೆ ಬೆರೆಯಲು ಬಳಸಬಹುದು’ ಎಂದು ತಿಳಿಸಿದರು.</p><p>‘ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೂ ಕನ್ನಡ ಮರೆಯಬಾರದು. ಗ್ರಾಮೀಣ ಕ್ರೀಡೆಗಳ ಸೊಗಡು ಸವಿಯಬೇಕು. ವಿದ್ಯೆಯ ಜೊತೆ ವಿನಯ ಮತ್ತು ವಿವೇಕ ಪಡೆದು ಸಮಾಜಕ್ಕೆ ಮಾದರಿ ಆಗಬೇಕು’ ಎಂದರು.</p><p>ಅಧ್ಯಕ್ಷತೆ ವಹಿಸಿದ್ದ ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ. ಸತೀಶ್ ಜವರೇಗೌಡ, ‘ಕನ್ನಡದಲ್ಲಿ ಮಕ್ಕಳಿಗಾಗಿ ಕವಿಗಳು ಕತೆ, ಕಾವ್ಯ, ನಾಟಕ, ಜೀವನಚರಿತ್ರೆಗಳು ಸಾಕಷ್ಟು ರಚನೆಯಾಗಿವೆ. ಅಂಥ ಪುಸ್ತಕಗಳನ್ನು ಓದಿದರೆ ಜ್ಞಾನ, ಅನುಭವ, ರಂಜನೆ ಲಭಿಸುತ್ತದೆ’ ಎಂದು ಹೇಳಿದರು.</p><p>ವಿ.ಕೆ. ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಮೆಹರಿನ್ ತಾಜ್, ನಿವೃತ್ತ ಎಂಜಿನಿಯರ್ ರಾಮಕೃಷ್ಣ, ಕವಿ ಜಿ. ರವೀಂದ್ರ ಕುಮಾರ್, ರಂಗಕರ್ಮಿಗಳಾದ ವಿನೋದ್ ಮೈಸೂರು ಮತ್ತು ಲೋಕನಾಥ್ ಸೋಗುಂ ಉಪಸ್ಥಿತರಿದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಅತಿಯಾದರೆ ಅಮೃತವೂ ವಿಷವಾಗುತ್ತದೆ. ಹಾಗೆಯೇ ಮಕ್ಕಳು ಮೊಬೈಲ್ ಫೋನ್ ಅತಿಯಾಗಿ ಬಳಸಿದರೆ, ಅದು ಗೀಳಾಗಿ ಬದುಕು ಹಾಳಾಗುತ್ತದೆ. ಹೀಗಾಗಿ, ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು’ ಎಂದು ಲೇಖಕಿ ಯಶೋಧಾ ರಾಮಕೃಷ್ಣ ಸಲಹೆ ನೀಡಿದರು.</p><p>ಇಲ್ಲಿನ ವಿಜಯನಗರ 3ನೇ ಹಂತದಲ್ಲಿರುವ ವಿ.ಕೆ. ಪಬ್ಲಿಕ್ ಸ್ಕೂಲ್ನಲ್ಲಿ ಅದಮ್ಯ ರಂಗಶಾಲೆಯಿಂದ ಶನಿವಾರ ನಡೆದ ‘ವಿಶ್ವ ಪುಸ್ತಕ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಾಹಿತ್ಯ ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.</p><p>‘ಮೊಬೈಲ್ ಫೋನ್ನಿಂದ ಮಕ್ಕಳು ದೂರವಿದ್ದಷ್ಟೂ ಒಳ್ಳೆಯದು. ಇದರಿಂದ ಅಪಾರ ಸಮಯ ಉಳಿತಾಯ ಆಗುತ್ತದೆ. ಆ ಸಮಯವನ್ನು ಪುಸ್ತಕ ಓದಲು, ಆಡಲು, ಸ್ನೇಹಿತರೊಂದಿಗೆ ಬೆರೆಯಲು ಬಳಸಬಹುದು’ ಎಂದು ತಿಳಿಸಿದರು.</p><p>‘ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೂ ಕನ್ನಡ ಮರೆಯಬಾರದು. ಗ್ರಾಮೀಣ ಕ್ರೀಡೆಗಳ ಸೊಗಡು ಸವಿಯಬೇಕು. ವಿದ್ಯೆಯ ಜೊತೆ ವಿನಯ ಮತ್ತು ವಿವೇಕ ಪಡೆದು ಸಮಾಜಕ್ಕೆ ಮಾದರಿ ಆಗಬೇಕು’ ಎಂದರು.</p><p>ಅಧ್ಯಕ್ಷತೆ ವಹಿಸಿದ್ದ ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ. ಸತೀಶ್ ಜವರೇಗೌಡ, ‘ಕನ್ನಡದಲ್ಲಿ ಮಕ್ಕಳಿಗಾಗಿ ಕವಿಗಳು ಕತೆ, ಕಾವ್ಯ, ನಾಟಕ, ಜೀವನಚರಿತ್ರೆಗಳು ಸಾಕಷ್ಟು ರಚನೆಯಾಗಿವೆ. ಅಂಥ ಪುಸ್ತಕಗಳನ್ನು ಓದಿದರೆ ಜ್ಞಾನ, ಅನುಭವ, ರಂಜನೆ ಲಭಿಸುತ್ತದೆ’ ಎಂದು ಹೇಳಿದರು.</p><p>ವಿ.ಕೆ. ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಮೆಹರಿನ್ ತಾಜ್, ನಿವೃತ್ತ ಎಂಜಿನಿಯರ್ ರಾಮಕೃಷ್ಣ, ಕವಿ ಜಿ. ರವೀಂದ್ರ ಕುಮಾರ್, ರಂಗಕರ್ಮಿಗಳಾದ ವಿನೋದ್ ಮೈಸೂರು ಮತ್ತು ಲೋಕನಾಥ್ ಸೋಗುಂ ಉಪಸ್ಥಿತರಿದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>