ವಿಜಯಪುರ:ಮುದ್ದೇಬಿಹಾಳದ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ,ಗೃಹ ಸಚಿವಎಂ.ಬಿ.ಪಾಟೀಲ ಬೆಂಬಲಿಗರು ನುಗ್ಗಿ ದಾಂಧಲೆ ನಡೆಸಿ, ಗೂಂಡಾ ವರ್ತನೆ ತೋರಿದ್ದಾರೆ.
ನಡಹಳ್ಳಿ ವಿರುದ್ಧ ಧಿಕ್ಕಾರ ಹಾಗೂ ಪಾಟೀಲ ಪರ ಜೈಕಾರ ಘೋಷಣೆ ಕೂಗಿದ ಪ್ರತಿಭಟನಾಕಾರರು ಶಾಸಕರನ್ನು ‘ಹುಚ್ಚ.. ಹುಚ್ಚ’ ಎಂದು ಮೂದಲಿಸಿದ್ದಾರೆ.
ಈ ವೇಳೆ ಡಿವೈಎಸ್ಪಿ ನೇತೃತ್ವದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಹೊರಹಾಕಿದರು. ಪಾಟೀಲ ಬೆಂಬಲಿಗರು ಪ್ರತಿಭಟನೆ ನಡೆಸಿದರೂ ನಡಹಳ್ಳಿ ಶಾಂತಚಿತ್ತರಾಗಿಯೇ ಕುಳಿತಿದ್ದರು.