ಗುರುಮಠಕಲ್ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಚಪೆಟ್ಲಾ ಗ್ರಾಮದ ಹೊರವಲಯದ ಕೃಷಿ ಜಮೀನಿನಲ್ಲಿದ್ದ ಭೀಮಪ್ಪ ಮಾಣಿಕ್ಯಪ್ಪ ಅವರಿಗೆ ಸೇರಿದ ಎತ್ತು ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದೆ.
ಶುಕ್ರವಾರ ಸಂಜೆ ವೇಳೆ ಮೋಡಕವಿದ ವಾತಾವರಣವಿತ್ತು. ಗುಡುಗು ಸಮೇತ ಐದು ನಿಮಿಷಗಳ ಕಾಲ ಗಾಳಿ, ಮಳೆ ಸುರಿಯಿತು. ಆಗ ಜಮೀನಿನಲ್ಲಿದ್ದ ಎತ್ತಿಗೆ ಸಿಡಿಲು ಬಡಿದಿದ್ದು, ಸಿಡಿಲಿನ ಆಘಾತಕ್ಕೆ ಎತ್ತು ಸ್ಥಳದಲ್ಲೇ ಪ್ರಾಣ ಬಿಟ್ಟಿದೆ ಎಂದು ಸ್ಥಳೀಯ ನಿವಾಸಿ ಮಹಾದೇವಪ್ಪ ಭಂಗಿ ತಿಳಿಸಿದರು.