ಶಿವಮೊಗ್ಗ: ನಗರ ಪಾಲಿಕೆಯ ಮೇಯರ್ ಸ್ಥಾನದಸಂಭವನೀಯ ಅಭ್ಯರ್ಥಿಬಿಜೆಪಿ ಸದಸ್ಯೆ ಅನಿತಾ ರವಿಶಂಕರ್ ಅವರಜಾತಿ ದೃಢೀಕರಣ ಪತ್ರ ಪರಿಶೀಲಿಸುವಂತೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಒತ್ತಾಯಿಸಿದೆ.
ಅನಿತಾ ರವಿಶಂಕರ್ ಅವರು ಶಿವಮೊಗ್ಗ ತಹಶೀಲ್ದಾರ್ ಕಛೇರಿಯಿಂದ ಜಾತಿ ದೃಢೀಕರಣ ಪತ್ರ ಪಡೆಯುವ ಸಲುವಾಗಿ ನೀಡಿದ ಅಫಿಡವಿಟ್ನಲ್ಲಿ ಅವರ ಕುಟುಂಬದ ಯಾವುದೇ ಸದಸ್ಯರಿಗೂ ಆಸ್ತಿ, ಜಮೀನು ಇಲ್ಲ ಎಂದು ಘೋಷಿಸಿದ್ದಾರೆ. ಆದರೆ ಚುನಾವಣಾ ಆಯೋಗಕ್ಕೆ ನೀಡಿದ ಪ್ರಮಾಣ ಪತ್ರದಲ್ಲಿ ಜಮೀನು, ಮೂರು ಕಾರು ಮತ್ತು ಇತರೆ ವಾಹನಗಳು, ಆಸ್ತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ, ಅವರು ಜಾತಿ ದೃಢೀಕರಣ ಪತ್ರಕ್ಕೆ ಅರ್ಹರೇ ಎಂಬ ಸಂಶಯ ಮೂಡಿದೆ ಎಂದು ಮೇಯರ್ ಸ್ಥಾನದ ಆಕಾಂಕ್ಷಿ,ಕಾಂಗ್ರೆಸ್ ಸದಸ್ಯೆ ಯಮನಾ ರಂಗೇಗೌಡಶನಿವಾರಪತ್ರಿಕಾಗೋಷ್ಠಿಯಲ್ಲಿಅನುಮಾನ ವ್ಯಕ್ತಪಡಿಸಿದರು.
ಶಿವಮೊಗ್ಗ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಅನಿತಾ ಅವರ ಜಾತಿ ದೃಢೀಕರಣ ಪತ್ರದ ಪರಿಶೀಲನೆ ನಡೆಸುವಂತೆ ಪ್ರಕರಣ ದಾಖಲಾಗಿದೆ. ಅವರು ಪ್ರಮಾಣ ಪತ್ರದಲ್ಲಿ ನೀಡಿರುವ ಹೇಳಿಕೆ, ಆದಾಯ ತೆರಿಗೆ ಪಾವತಿ ದಾಖಲೆ ಪರಿಶೀಲಿಸಬೇಕು. ಬಿಸಿಎಂ (ಬಿ) ಜಾತಿ ದೃಢೀಕರಣ ಸಿಂಧುತ್ವದ ಕುರಿತು ಸಮಗ್ರವಾಗಿ ಪರಿಶೀಲಿಸಬೇಕು ಎಂದುಒತ್ತಾಯಿಸಿದರು.
ಉಪ ವಿಭಾಗಾಧಿಕಾರಿ ನ್ಯಾಯಾಲಯ ನ್ಯಾಯ ದೊರಕಿಸಬೇಕು.ಇಲ್ಲದಿದ್ದರೆರಾಜ್ಯ ಚುನಾವಣಾ ಆಯೋಗ, ಪ್ರಾದೇಶಿಕ ಆಯುಕ್ತರು,ಹೈಕೋರ್ಟ್ನಲ್ಲಿ ಪ್ರಕರಣದಾಖಲಿಸಲಾಗುವುದು. ಪಾಲಿಕೆ ಸದಸ್ಯತ್ವ ರದ್ದುಪಡಿಸಲು ಒತ್ತಾಯಿಸಲಾಗುವುದು. ಅಲ್ಲಿಯವರೆಗೂ ಮೇಯರ್ ಚುನಾವಣೆಯನ್ನು ಮುಂದೂಡಬೇಕು ಎಂದುಆಗ್ರಹಿಸಿದರು.