ಅವರು ಖರೀದಿಸಿರುವ 20 ಕೆ.ಜಿ ಪ್ಯಾಕೆಟ್ನಲ್ಲಿ ಒಂದೂವರೆ ಕೆ.ಜಿ ಸಣ್ಣದಾಗಿರುವ, ಕಡ್ಡಿ ಇರುವ, ಒಡೆದಿರುವ ಬೇಳೆ ಇರುವ ಕಡಲೆ ಬೀಜಗಳು ಇವೆ. ಇದನ್ನು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ತೋರಿಸಿದ್ದಾರೆ. ಆದರೆ, ಮೊದಲು ರೈತ ಬಸವರಾಜ ಸಂಗಣ್ಣ ಕಟ್ಟಿಮನಿ ಅವರ ಆರೋಪಗಳನ್ನು ನಿರಾಕರಿಸಿದ ಅಧಿಕಾರಿಗಳು, ‘ಇವು ನಮ್ಮ ಬಿತ್ತನೆ ಬೀಜಗಳಲ್ಲ, ನೀವು ಮನೆಯ ಬೀಜ ಕೂಡಿಸಿರಬೇಕು’ ಎಂದಿದ್ದಾರೆ. ಮನೆಯಿಂದ ತಂದಿದ್ದ ರಶೀದಿ ತೋರಿಸಿದ ನಂತರ ಕಳಪೆ ಬೀಜಗಳನ್ನು ವಶಕ್ಕೆ ಪಡೆದ ಸಿಬ್ಬಂದಿ, ಅದಕ್ಕೆ ಯಾವುದೇ ಸ್ವೀಕೃತಿ ನೀಡದೇ, ಅವುಗಳನ್ನು ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಪಡೆದಿದ್ದಾರೆ.