ತಾಲ್ಲೂಕಿನ ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆಯೋ ಜಿಸಿದ 69ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋ ಹಣವನ್ನು ನೆರವೇರಿಸಿ ಮಾತನಾಡಿದ ಅವರು, ‘ಈ ಸ್ವತಂತ್ರ ದೇಶ ನಿರ್ಮಾಣಕ್ಕೆ ಹಲವರ ತ್ಯಾಗ ಬಲಿದಾನಗಳೇ ಕಾರಣ ಎಂಬುದನ್ನು ನಾವು ಎಂದಿಗೂ ಮರೆಯಬಾರದು. ಯುವ ಪೀಳಿಗೆ ದೇಶದ ಏಳಿಗೆಯನ್ನೇ ಬಯಸಬೇಕು. ಭಾರತದಲ್ಲಿರುವ ಯುವಸಂಪತ್ತು ಇನ್ಯಾವುದೇ ದೇಶದಲ್ಲೂ ಕಾಣಸಿಗದು’ ಎಂದರು.