ಶಿವಮೊಗ್ಗ: ಕುವೆಂಪು ರಂಗಮಂದಿರದಲ್ಲಿ ಏ.28ರಂದು ಸಂಜೆ 6ಕ್ಕೆ ‘ಸ್ವರ ಸಂದ್ಯಾ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಪ್ತಸ್ವರ ಸಂಗೀತ ಸಭಾ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಉಳಿಸಲು ಮತ್ತು ಬೆಳೆಸಲು ಈ ಕಾರ್ಯಕ್ರಮ ಆಯೋಜಿಸಿದೆ ಎಂದು ಸಭಾದ ಕಾರ್ಯದರ್ಶಿ ಕೆ.ಜಿ.ಕುಮಾರಶಾಸ್ತ್ರಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೆಂಗಳೂರಿನ ಗೀತಾ ಹೆಗಡೆ ಅವರ ಶಿಷ್ಯೆ ವಿದುಲಾ ವೇಣುಗೋಪಾಲ ಮತ್ತು ಮೈಸೂರಿನ ಶಾರದಾ ಭಟ್ಕಟ್ಟಿಗೆ ಗಾಯನ ನಡೆಸಿಕೊಡುವರು. ರೇಖಾ ಅರುಣ ಹಂಪಿಹೊಳಿ ಹಾರ್ಮೋನಿಯಂ, ಭೀಮಾಶಂಕರ ಬೀದನೂರು ತಬಲವಾದನ ಇರುತ್ತದೆ ಎಂದು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಭಾದ ಜಂಟಿ ಕಾರ್ಯದರ್ಶಿ ಎನ್.ಎಚ್.ದೇವಕುಮಾರ್, ನಿರ್ದೇಶಕರಾದ ವಿವೇಕಾನಂದ ನಾಯಕ್, ಎನ್.ಬಿ.ರವೀಶ್, ಶಂಕರ ಅಜ್ಜಂಪುರ ಉಪಸ್ಥಿತರಿದ್ದರು.