ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮ ಚಪ್ಪಲಿಯಲ್ಲಿ ತಾವೇ ಹೊಡೆದುಕೊಂಡ ಕೃಷ್ಣಪ್ಪ

Last Updated 21 ಮೇ 2019, 13:33 IST
ಅಕ್ಷರ ಗಾತ್ರ

ಶಿವಮೊಗ್ಗ: ರಿಪ್ಪನ್‌ಪೇಟೆ ಸಾಮಾಜಿಕ ಹೋರಾಟಗಾರ ಟಿ.ಆರ್. ಕೃಷ್ಣಪ್ಪತಮ್ಮ ಚಪ್ಪಲಿಯಲ್ಲಿ ತಾವೇ ಹೊಡೆದುಕೊಂಡರು.

ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಗಾಂಧಿ ಹಂತಕ ಗೋಡ್ಸೆ ಒಬ್ಬ ಹಿಂದೂ ಭಯೋತ್ಪಧಕ ಎಂದು ಹೇಳಿಕೆ ನೀಡಿದ್ದ ನಟ ಕಮಲ್‌ ಹಾಸನ್‌ಗೆ ಚಪ್ಪಲಿ ತೂರಿದ್ದರಿಂದ ಅವರು ವಿಚಲಿತರಾಗಬೇಕಿಲ್ಲ. ಚಪ್ಪಲಿ ನಮ್ಮ ರಕ್ಷಣೆಗಾಗಿ ಇರುವುದು, ಅದು ಕನಿಷ್ಠವಲ್ಲ ಎಂದು ಪ್ರತಿಪಾಧಿಸುವಾಗ ಅವರು ತಮ್ಮ ಚಪ್ಪಲಿಯಲ್ಲಿ ಹೊಡೆದುಕೊಂಡರು.

ಕಾವಿವಸ್ತ್ರ ಧರಿಸಿ ಬಂದಿದ್ದ ಅವರು ಕಾವಿ ತೊಟ್ಟವರು ಸಮಾಜಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು, ಸಾದ್ವಿ ಪ್ರಜ್ಞಾಸಿಂಗ್‌ಗಾಂಧಿ ಹಂತಕ ಗೋಡ್ಸೆ ಒಬ್ಬ ದೇಶ ಭಕ್ತ ಎಂದು ಹೇಳಿಕೆ ನೀಡಿರುವುದು ತಪ್ಪು. ಆದರೆ, ಆ ಬಗ್ಗೆ ಕ್ಷಮೆ ಕೇಳಿರುವುದು ಸ್ವಾಗತಾರ್ಹ. ಕಾವಿ ತೊಟ್ಟವರು ತಪ್ಪು ಮಾಡಬಾರದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT