ಶ್ರೀಕೃಷ್ಣ ಸಂಧಾನ ಹಾಸ್ಯ ನಾಟಕ. ಈಗಾಗಲೇ ಹಲವು ಪ್ರದರ್ಶನ ಕಂಡಿದೆ. ಮತ್ತೆ ಮತ್ತೆ ಪ್ರೇಕ್ಷರನ್ನು ಗಮನಸೆಳೆಯುತ್ತಿದೆ. ಈ ಬಾರಿಯ ಪ್ರದರ್ಶನವೂ ಯಶಸ್ವಿಯಾಗಲಿದೆ. ಈ ನಾಟಕದಲ್ಲಿ ನಮ್ಮ ತಂಡದಿಂದಲೇ ಕಿರುತೆರೆಗೆ ಹೋಗಿ ಹೆಸರು ಮಾಡಿದ ಕಲಾವಿದರು ಅಭಿನಯಿಸುತ್ತಿದ್ದಾರೆ. ಮಗಳು ಜಾನಕಿ ಧಾರವಾಹಿಯ ಸಂಜನಾ ಪಾತ್ರಧಾರಿ ಸುಪ್ರಿಯಾ ರಾವ್, ಚಂದ್ರಶೇಖರ ಶಾಸ್ತ್ರಿ, ಶಿವಮೊಗ್ಗ ಹರೀಶ್ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಮಿಡಿ ಕಿಲಾಡಿಗಳು ತಂಡದ ಚಂದ್ರಶೇಖರ ಹಿರೇಗೋಣಿಗೆರೆ ಈ ನಾಟಕ ನಿರ್ದೇಶಿಸಿದ್ದಾರೆ ಎಂದರು.