ಶಿವಮೊಗ್ಗ: ಚಿತ್ರನಟಿ ಸನ್ನಿಲಿಯೋನ್ ಹಾಗೂ ನಿರ್ಮಾಪಕ ವಾಡಿ ಉದಯನ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಕಾರ್ಯಕರ್ತರು ಸೋಮವಾರ ಗೋಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸನ್ನಿಲಿಯೋನ್ ವೀರ ಮಹಾದೇವಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ರಾಷ್ಟ್ರಕೂಟ ದೊರೆ ಅಮೋಘ ವರ್ಷ ನೃಪತುಂಗನ ತಂದೆ 3ನೇ ಗೋವಿಂದಹಾಗೂರಾಜೇಂದ್ರ ಚೋಳನ್ ಅವರ ಕುರಿತ ಚಿತ್ರ. ವೀರ ಮಹಾದೇವಿಯಾಗಿ ನಟಿಸುತ್ತಿರುವ ಸನ್ನಿಲಿಯೋನ್ ಅವರನ್ನು ಚಿತ್ರದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಮುಖಂಡರಾದ ಎಚ್.ಎಸ್, ಕಿರಣ್ ಕುಮಾರ್, ಎಸ್.ಬಿ. ಶಿವಕುಮಾರ್, ತಿಮ್ಮರಾಜು, ಕೆ.ಬಿ. ವಿಜಯಲಕ್ಷ್ಮಿ, ಎಸ್.ಎಲ್. ಧನಂಜಯ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.