ಶಿವಮೊಗ್ಗ: ಸಿದ್ಲಿಪುರ ಗ್ರಾಮದ ಸರ್ವೆ ನಂಬರ್ 26ರಲ್ಲಿ ಆದಿವಾಸಿ ಬುಡಕಟ್ಟು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಹಕ್ಕುಪತ್ರ, ನಿವೇಶನ ನೀಡಲು ಆಗ್ರಹಿಸಿ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
2013–14ನೇ ಸಾಲಿನಲ್ಲೇ ಸರ್ವೆ ನಕಾಶೆ ತಯಾರಿಸಿ ತಾಲ್ಲೂಕು ಕಚೇರಿ ಸಲ್ಲಿಸಲಾಗಿದೆ. ಕೂಡಲೇ ಅಲ್ಲಿ ನಿವೇಶನ ನಿರ್ಮಿಸಬೇಕು. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಮುದ್ದಿನ ಕೊಪ್ಪ ಗ್ರಾಮದ ಸರ್ವೆ ನಂಬರ್ 143/74 ರಲ್ಲಿ ಬಗರ್ ಉಕುಂ ಸಾಗುವಳಿ ಮಾಡಿರುವ ವಿಧವಾ ಮಹಿಳೆಯರಿಗೆ ತಲಾ ಎರಡು ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕ ಎಂ.ಎಸ್. ಸಿದ್ದಪ್ಪ ಮತ್ತಿತರರು ಮನವಿ ಸಲ್ಲಿಸಿದರು.