ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲೆಬ್ಬಿಸದಂತೆ ನಾಗರಬಾವಿ ಗ್ರಾಮಸ್ಥರ ಆಗ್ರಹ

Last Updated 11 ಏಪ್ರಿಲ್ 2019, 16:28 IST
ಅಕ್ಷರ ಗಾತ್ರ

ಶಿವಮೊಗ್ಗ: ಹಲವು ದಶಕಗಳಿಂದ ನೆಲೆನಿಂತಿರುವ ಕುಟುಂಬಗಳನ್ನು ಒಕ್ಕಲೆಬ್ಬಿಸಬಾರದು ಎಂದು ಒತ್ತಾಯಿಸಿ ನಾಗರಬಾವಿ ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ನಾಗರಬಾವಿ ಗ್ರಾಮದ ಸರ್ವೆ ನಂಬರ್ 2/1ರಲ್ಲಿ 15 ಕುಟುಂಬಗಳು ನೆಲೆಸಿವೆ. ಈ ಜಮೀನು ಮೋಸದಿಂದ ಮಾರಾಟ ಮಾಡಲಾಗಿದೆ. ಹಲವು ದಶಕಗಳು ಹಳೆಯದಾದ ಮನೆಗಳಿಗೆ ಕಂದಾಯ, ನೀರಿನ ಕಂದಾಯ, ಜಮೀನಿನ ಕಂದಾಯ ಕಾಲಕಾಲಕ್ಕೆ ಪಾವತಿಸಲಾಗಿದೆ. ಆಶ್ರಯ ಮನೆಗಳೂ ಸೇರಿದಂತೆ ಎಲ್ಲ ಸವಲತ್ತು ಕಲ್ಪಿಸಲಾಗಿದೆ. ದಾಖಲೆಗಳು ಇದ್ದರೂ ಮೋಸ ಮಾಡಲಾಗಿದೆ ಎಂದು ಆರೋಪಿಸಿದರು.

ಎಲ್ಲ ಕುಟುಂಬಗಳ ಬಳಿಯೂ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್ ಇವೆ. ಇದೇ ವಿಳಾಸಕ್ಕೆ ಸರ್ಕಾರಿ ಸೌಲಭ್ಯ ನೀಡಲಾಗಿದೆ. ಜಮೀನು ಮಾರಾಟ ಮಾಡಿರುವ ಪರಿಣಾಮ ಜೀವನ ನಡೆಸುವುದು ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT