ಶಿವಮೊಗ್ಗ: ರಾಜ್ಯ ಪರಿಶಿಷ್ಟ ಜಾತಿ, ಪಂಗಡದಭೂ ಪರಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್)ಗೆ ಧಕ್ಕೆಯಾಗದಂತೆ ಬಜೆಟ್ ಅಧಿವೇಶನದಲ್ಲಿ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿಮಂಗಳವಾರ ದಲಿತ ಸಂಘರ್ಷ ಸಮಿತಿಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಿಟಿಸಿಎಲ್ ಕಾಯ್ದೆ 1978-79ರಲ್ಲಿ ಅಧಿನಿಯಮಗಳ ಪ್ರಕಾರ ಸೆಕ್ಷನ್-3(1)(ಬಿ)ಯಲ್ಲಿ ಹೇಳಿರುವಂತೆ ಯಾವುದೇ ಮಂಜೂರಾತಿ ಭೂಮಿಗಳು ಪಿಟಿಸಿಎಲ್ ವ್ಯಾಪ್ತಿಗೆ ಬರುತ್ತದೆ ಎಂದಿದೆ. ಪಿಟಿಸಿಎಲ್ ಕಾಯ್ದೆ ಸೆಕ್ಷನ್ 5ರ ವಿರುದ್ಧ ನ್ಯಾಯಾಲಯಗಳು ತೀರ್ಪು ನೀಡಿರುವಬಹುತೇಕ ಪ್ರಕರಣಗಳನ್ನು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿವಜಾಗೊಳಿಸುತ್ತಿದ್ದಾರೆ. ುದನ್ನುತಡೆಯಲು ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.
ನ್ಯಾಯಮೂರ್ತಿಎ.ಜೆ.ಸದಾಶಿವ ಆಯೋಗದ ವರದಿ ಅಧಿವೇಶನದಲ್ಲಿ ಅಂಗೀಕರಿಸಬೇಕು. ಕೇಂದ್ರಕ್ಕೆಶಿಫಾರಸುಮಾಡಬೇಕು. ರಾಜ್ಯದಲ್ಲಿ ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತರಿಗೆಕಲ್ಪಿಸಿದ ಮೀಸಲಾತಿಯನ್ನು ಬಲಾಢ್ಯರು ಉಪ ಜಾತಿಗಳಿಗೆ ಹಂಚದೆಸಿಂಹಪಾಲು ಪಡೆದು, ವಂಚನೆ ಮಾಡುತ್ತಿದ್ದಾರೆ. ಹಾಗಾಗಿ, ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಲು ಪ್ರತ್ಯೇಕ ಆಯೋಗ ರಚನೆ ಮಾಡಬೇಕು.ಬಗರ್ಹುಕುಂಸಕ್ರಮೀಕರಣದಲ್ಲಿ ಪರಿಶಿಷ್ಟರ ಅರ್ಜಿಗಳುವಜಾಗೊಂಡಿವೆ. ಅವುಗಳನ್ನು ಪುನರ್ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ಭದ್ರಾವತಿ ಸತ್ಯ, ಸಂಘಟನಾ ಸಂಚಾಲಕರಾದ ಕೆ.ಎ.ರಾಜ್ಕುಮಾರ್, ಬಂಗಾರಪ್ಪ ನಿಟ್ಟಕ್ಕಿ, ಪ್ರಕಾಶ್ ಲಿಗಾಡಿ, ಎಂ.ರಂಗಪ್ಪ, ನಾರಾಯಣ ಗೋಳಗೋಡುಪ್ರತಿಭಟನೆಯ ನೇತೃತ್ವ ವಹಿಸಿದ್ದರು.