ಸುಮಾರು 150 ವರ್ಷಗಳಿಂದನಾಗರಬಾವಿ ಸರ್ವೇ ನಂಬರ್ 2/5ರಲ್ಲಿ 15 ಕುಟುಂಬಗಳು ಅಲ್ಲಿ ನೆಲೆಸಿವೆ. ಅಲ್ಲಿನ ಜಮೀನುಮೋಸದಿಂದ ಮಾರಾಟ ಮಾಡಲಾಗಿದೆ.ಶತಮಾನದಿಂದಲೂ ಸರ್ಕಾರ, ಗ್ರಾಮ ಪಂಚಾಯಿತಿ ನೀರು, ವಿದ್ಯುತ್, ರಸ್ತೆ, ಒಳಚರಂಡಿ ವ್ಯವಸ್ಥೆ ಮಾಡಿಕೊಟ್ಟಿದೆ. ಪ್ರತಿ ವರ್ಷವೂಕಂದಾಯ ಪಾವತಿದಾಖಲೆಗಳಿವೆ. ನೀರು, ಜಮೀನು, ಕಂದಾಯ, ವಿದ್ಯುತ್ ಬಿಲ್ ಪಾವತಿ ಮಾಡುತ್ತಿದ್ದೇವೆ. ಪ್ರಧಾನಮಂತ್ರಿ ಇಂದಿರಾ ಆವಾಸ್ ಯೋಜನೆಯಲ್ಲಿ ಮನೆ ನೀಡಲಾಗಿದೆ. ಈಗ ಎಲ್ಲವನ್ನೂ ತೊರೆಯುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಆರೋಪಿಸಿದರು.