ಕೃಷಿ ಚಟುವಟಿಕೆಗಳಿಗಾಗಿ ಮಕ್ಕಳನ್ನು ಕಾನೂನು ಬಾಹಿರವಾಗಿ ಗೂಡ್ಸ್ ವಾಹನಗಳಲ್ಲಿ ಸಾಗಾಣಿಕೆ ಮಾಡುತ್ತಿದ್ದ ಎರಡು ವಾಹನಗಳನ್ನು ಜಪ್ತಿ ಮಾಡಿ ಯರಗೇರಾ ಪೊಲೀಸ್ ಠಾಣೆಯಲ್ಲಿ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೆಲಸಕ್ಕಾಗಿ ಸಾಗಾಣಿಕೆ ಮಾಡುತ್ತಿದ್ದ 12 ಮಕ್ಕಳನ್ನು ರಕ್ಷಣೆ ಮತ್ತು ಪೋಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ. ಅಧಿಕಾರಿಗಳಾದ ವಿಶಾಲ್ ಪವಾರ್, ಮನ್ಸೂರ್ ಅಹ್ಮದ್, ಗೋಕುಲ್, ರಾಮಕೃಷ್ಣ, ಲಕ್ಷ್ಮೀಕುಮಾರ, ಅನ್ವರ್ಅಲಿ, ಹನುಮೇಶ, ತಾಯರಾಜ್, ಮುಕ್ಕಣ್ಣ, ಮಹೇಶ, ಈರಣ್ಣ, ರವಿಕುಮಾರ ಇದ್ದರು.