ಸೆಪ್ಟೆಂಬರ್ 1 ರಿಂದ 19 ರವರೆಗೂ ಜಿಲ್ಲೆಯಲ್ಲಿ ಶೇ 36 ರಷ್ಟು ಅಧಿಕ ಮಳೆಯಾಗಿದೆ. ರಾಯಚೂರು ತಾಲ್ಲೂಕಿನಲ್ಲಿ ಶೇ 69 ರಷ್ಟು ಅತಿಹೆಚ್ಚು ಮಳೆಯಾಗಿದ್ದು, ಹತ್ತಿ, ಭತ್ತ, ಮೆಣಸಿನಕಾಯಿ ಹಾಗೂ ತೊಗರಿ ಬೆಳೆಗಳನ್ನು ಹಾನಿಗೊಳಿಸಿದೆ. ದೇವದುರ್ಗ ತಾಲ್ಲೂಕಿನಲ್ಲಿ ಶೇ 5, ಲಿಂಗಸುಗೂರು ತಾಲ್ಲೂಕಿನಲ್ಲಿ ಶೇ25, ಮಾನ್ವಿ ತಾಲ್ಲೂಕಿನಲ್ಲಿ ಶೇ27, ಸಿಂಧನೂರು ತಾಲ್ಲೂಕಿನಲ್ಲಿ ಶೇ23, ಮಸ್ಕಿ ತಾಲ್ಲೂಕಿನಲ್ಲಿ ಶೇ 46 ಹಾಗೂ ಸಿರವಾರ ತಾಲ್ಲೂಕಿನಲ್ಲಿ ಶೇ 26 ಮಿಲಿಮೀಟರ್ ಮಳೆಯಾಗಿದೆ. ವಾಡಿಕೆ ಮಳೆ 85 ಮಿಲಿಮೀಟರ್ ಇದ್ದು, ವಾಸ್ತವ ಮಳೆ 115 ಮಿಲಿಮೀಟರ್ ಆಗಿದೆ.