ಸಿಂಧನೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಅವರ ಪುತ್ರ ಅಭಿಷೇಕ ವಿರುದ್ಧ ಬಸವರಾಜ ಎನ್ನುವ ಯುವಕ ಪೊಲೀಸರಿಗೆ ದೂರು ನೀಡಿರುವ ಪ್ರಸಂಗ ಶುಕ್ರವಾರ ಸಂಜೆ ನಡೆಯಿತು. ವೃದ್ಧೆಯೊಬ್ಬರನ್ನು ಮತಗಟ್ಟೆಗೆ ಕರೆದುಕೊಂಡು ಬಂದಿದ್ದ ಬಸವರಾಜ, ಮತದಾನ ಮಾಡಿಸಿ ವಾಪಸ್ ಕರೆದುಕೊಂಡು ಹೋಗುವಾಗ ಅಭಿಷೇಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಾಂಗ್ರೆಸ್ ಮುಖಂಡರಾದ ಹಂಪನಗೌಡ ಬಾದರ್ಲಿ, ವಿರೂಪಕ್ಷಪ್ಪ ಸೇರಿದಂತೆ ಹಲವು ಕಾಂಗ್ರೆಸ್ ಕಾರ್ಯಕರ್ತರು ಬಸವರಾಜ ಜೊತೆಯಲ್ಲಿ ಪೊಲೀಸ್ ಠಾಣೆಗೆ ಬಂದು, ಯುವಕ ನೀಡುವ ದೂರು ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಕೋರಿದರು.