ಹಟ್ಟಿ–ರಾಯಚೂರು ಮುಖ್ಯರಸ್ತೆಯ ಮಹಾಂತನಗರದ ಅಮರಯ್ಯ ಸ್ವಾಮಿ ಎನ್ನುವವರು ಅಕ್ಕಿಯನ್ನು ಜನರಿಂದ ಖರೀದಿಸಿ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು. ಅದರ ಮೌಲ್ಯ ₹49 ಸಾವಿರ. ಅದನ್ನು ಗುರುಮಠಕಲ್ನ ನರೇಂದ್ರಪ್ಪ ಅವರಿಗೆ ಮಾರಾಟ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಅಮರಯ್ಯಸ್ವಾಮಿ ಅವರನ್ನು ಬಂಧಿಸಲಾಗಿದೆ.