ಹಟ್ಟಿ: ಪಟ್ಟಣ ಸಮೀಪ ಗೌಡೂರು ಕ್ರಾಸ್ ಹತ್ತಿರ ಜೇವರ್ಗಿ–ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿ ಬುಧವಾರ ಲಾರಿ-ಬುಲೆರೊ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ರಾಯದುರ್ಗ ಗ್ರಾಮದ ಚನ್ನಮ್ಮ ದುರುಗಪ್ಪ (15), ಹನುಮವ್ವ ಗುರಿಕಾರ ( 60) ಮೃತಪಟ್ಟಿದ್ದಾರೆ. 18 ಜನರು ಗಾಯಗೊಂಡಿದ್ದಾರೆ.
ಸುರಪುರದಿಂದ ಲಿಂಗಸುಗೂರು ಕಡೆಗೆ ಲಾರಿ ಬರುತ್ತಿತ್ತು. ಲಿಂಗಸುಗೂರಿನಿಂದ ರಾಮದುರ್ಗ, ಟಣಮನಕಲ್ ಮಾರ್ಗವಾಗಿ ಕೂಲಿಕಾರರನ್ನು ತುಂಬಿಕೊಂಡು ಬುಲೆರೊ ಹೊರಟಿತ್ತು. ಗಾಯಗೊಂಡವರನ್ನು ಲಿಂಗಸುಗೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ 12 ಜನರನ್ನು ರಾಯಚೂರಿನ ರಿಮ್ಸ್ಗೆ ಸಾಗಿಸಲಾಗಿದೆ.
ಇಬ್ಬರು ಚಾಲಕರ ವಿರುದ್ಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.