‘ಕಲಬುರಗಿ ಜಿಲ್ಲೆ ಕಾಳಜಿ ಘಟಕದ ಸಾರಿಗೆ ಬಸ್ ಡಿಕ್ಕಿ ಹೊಡೆದಿತ್ತು. ಕೆಂಗೇರಿಯಲ್ಲಿ ದುರಸ್ತಿ ಮಾಡಿಸಿ, ಕಲಬುರಗಿಗೆ ಆಗಮಿಸಿ ನಂಬರ್ ಪ್ಲೇಟ್ ಹಾಕಿಸಿರುವ ಮಾಹಿತಿ ಆಧರಿಸಿ ವಾಹನ ಜಪ್ತಿ ಮಾಡಲಾಗಿದೆ. ಅಂದು ಕರ್ತವ್ಯದಲ್ಲಿದ್ದ ಇಬ್ಬರು ಚಾಲಕರು, ನಿರ್ವಾಹಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ತಿಳಿಸಿದರು. ಪೊಲೀಸ್ ಇನ್ಸ್ಪೆಕ್ಟರ್ ಮಹಾಂತೇಶ ಸಜ್ಜನ, ಪಿಎಸ್ಐ ಪ್ರಕಾಶ ಡಂಬಳ ನೇತೃತ್ವದಲ್ಲಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದ ಪೊಲೀಸ್ ಸಿಬ್ಬಂದಿ ಇದ್ದರು.