ಮಹಾತ್ಮರ ಪ್ರತಿಮೆಗಳನ್ನು ಧ್ವಂಸಗೊಳಿಸಿ ಸಂಭ್ರಮಿಸುವ ಕಿಡಿಗೇಡಿಗಳ ಪಡೆಯೊಂದು ಈಚೆಗೆ ದೇಶದಲ್ಲಿ ಹುಟ್ಟುಕೊಂಡಿದೆ. ಕಿಡಿಗೇಡಿಗಳು ಮಹಾತ್ಮರ ಪ್ರತಿಮೆಗಳನ್ನು ಧ್ವಂಸ ಮಾಡಬಹುದು, ಆದರೆ ಅವರ ವಿಚಾರಗಳನ್ನು ನಾಶಗೊಳಿಸಲು ಸಾಧ್ಯವಿಲ್ಲ. ದೇಶದಲ್ಲಿ ಕಾನೂನಿನ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯವಿದೆ ಎಂದು ಪ್ರತಿಭಟನಾಕಾರರು ಹೇಳಿದರು.