ಉತ್ತರ ಪ್ರದೇಶದಲ್ಲಿ ಆದಿವಾಸಿಗಳ ಪ್ರಾಬಲ್ಯದ ಸೋನೆಭದ್ರಾ ಜಿಲ್ಲೆಯ ಸಂಸದ ಚೋಟೆಲಾಲ್ ಕಾರ್ವಾರ್ ಅವರು ಕೆಲ ದಿನಗಳ ಹಿಂದೆ ಮೋದಿ ಅವರಿಗೆ ಪತ್ರ ಬರೆದು, ಆದಿತ್ಯನಾಥ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಮಾತ್ರವಲ್ಲದೆ ಅಧಿಕಾರಿಗಳಿಂದಲೂ ತಾರತಮ್ಯಕ್ಕೊಳಗಾಗುತ್ತಿರುವುದಾಗಿ ತಿಳಿಸಿದ್ದರು. ಇದನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.