<p><strong>ಮಸ್ಕಿ</strong>: ಪಟ್ಟಣದಲ್ಲಿ ₹44.72 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಅಮೃತ 2.0 ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದೇ ಕುಂಟುತ್ತ ಸಾಗುತ್ತಿದೆ.</p>.<p>23 ವಾರ್ಡ್ಗಳಿಗೆ ನಿರಂತರ ಕುಡಿಯುವ ನೀರೊದಗಿಸುವ ಗುರಿಯೊಂದಿಗೆ ಆರಂಭವಾದ ಈ ಮಹತ್ವಾಕಾಂಕ್ಷಿ ಯೋಜನೆಯು ಜೂನ್ 2026ರೊಳಗೆ ಪೂರ್ಣಗೊಳ್ಳಬೇಕಾಗಿದೆ. ಇದುವರೆಗೆ ಕೇವಲ ಶೇ 60ರಷ್ಟು ಕಾಮಗಾರಿ ಆಗಿದೆ.</p>.<p>2025ರ ಜನವರಿಯಲ್ಲಿ ಬಿಹಾರ ಮೂಲದ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದ್ದು, ಒಂದೂವರೆ ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗಡುವು ನಿಗದಿಪಡಿಸಲಾಗಿತ್ತು. ಆದರೆ, ಆರಂಭಿಕ ಹಂತದಲ್ಲೇ ಸಹಕಾರದ ಕೊರತೆ ಹಾಗೂ ತಾಂತ್ರಿಕ ಅಡಚಣೆಗಳಿಂದ ಕೆಲಸ ವಿಳಂಬವಾಗಿದೆ. ಗುತ್ತಿಗೆದಾರರ ನಿಧಾನಗತಿಯೂ ಯೋಜನೆಯ ಪ್ರಗತಿಗೆ ಅಡ್ಡಿಯಾಗಿದೆ.</p>.<p>ಕೆಲವು ವಾರ್ಡ್ಗಳಲ್ಲಿ ಮುಖ್ಯ ಪೈಪ್ಲೈನ್ ಅಳವಡಿಕೆ ನಡೆದಿದ್ದರೂ, ಇನ್ನೂ ಅನೇಕ ಪ್ರದೇಶಗಳಲ್ಲಿ ಕಾಮಗಾರಿಯೇ ಆರಂಭವಾಗಿಲ್ಲ. ರಸ್ತೆ ತೋಡಿಕೆ ಬಳಿಕ ಮರು ಸಂರಚನೆ ಮಾಡದೇ ಬಿಟ್ಟಿರುವುದರಿಂದ ಸಾರ್ವಜನಿಕರಿಗೆ ಸಂಚಾರದ ಸಮಸ್ಯೆ ಉಂಟಾಗಿದೆ. ದೂಳು ಹಾಗೂ ಅಸಮರ್ಪಕ ಕೆಲಸದಿಂದ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.</p>.<p>ಬೇಸಿಗೆ ತೀವ್ರವಾಗುತ್ತಿರುವ ಸಂದರ್ಭದಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿರುವುದರಿಂದ, ಈ ಯೋಜನೆಯ ವಿಳಂಬ ಜನರಿಗೆ ಹೆಚ್ಚುವರಿ ಸಂಕಷ್ಟ ತಂದೊಡ್ಡಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಕ್ಷಣವೇ ಕಾಮಗಾರಿಗೆ ವೇಗ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಲ್ಲವಾದರೆ ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳುವುದು ಅನುಮಾನ.</p>.<p>ಮಸ್ಕಿ ಪಟ್ಟಣದಲ್ಲಿ 97 ಕಿ.ಮೀ ಪೈಪ್ ಅಳವಡಿಸಬೇಕು. ಈಗಾಗಲೇ 60 ಕಿ.ಮೀ ಪೈಪ್ ಅಳವಡಿಕೆಯಾಗಿದೆ ಎಂದು ನಗರ ನೀರು ಸರಬರಾಜು ಮಂಡಳಿ ಕಾರ್ಯನಿರ್ವಾಹಕ ಎಂಜಜಿನಿಯರ್ ಗುರುರಾಜ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>4,700 ಮನೆಗಳಿಗೆ ಸಂಪರ್ಕ ಕೊಡಬೇಕು. 670 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಬಾಕಿ ಇದೆ. ಜುಲೈಗೆ ಕಾಮಗಾರಿ ಮುಗಿಯಬೇಕು. ಆದರೆ ಸೆಪ್ಟೆಂಬರ್ ಒಳಗೆ ಪೈಪ್ಲೈನ್ ಕಾಮಗಾರಿ ಮುಗಿಯಲಿದೆ. ಇದುವರೆಗೂ ಶೇ 60ರಷ್ಟು ಪೂರ್ಣಗೊಳಿಸಲಾಗಿದೆ ಎಂದರು.</p>.<div><blockquote>ಅಮೃತ ಯೋಜನೆ ಗುತ್ತಿಗೆ ಪಡೆದಿರುವ ಕಂಪನಿ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಬೇಗ ಮುಗಿಸಲು ಸೂಚಿಸಲಾಗುವುದು</blockquote><span class="attribution"> ಸುರೇಶ ಹರಸೂರು, ಅಧ್ಯಕ್ಷರು ಪುರಸಭೆ ಮಸ್ಕಿ</span></div>.<div><blockquote>ಯೋಜನೆಗೆ ದೊಡ್ಡ ಮೊತ್ತ ಖರ್ಚಾದರೂ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಜನರ ನೀರಿನ ಸಮಸ್ಯೆ ಮುಂದುವರಿಯುತ್ತದೆ</blockquote><span class="attribution"> ಎಂ.ಅಮರೇಶ ಜಿಲ್ಲಾಧ್ಯಕ್ಷ ಜನ ಜಾಗೃತಿ ವೇದಿಕೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಸ್ಕಿ</strong>: ಪಟ್ಟಣದಲ್ಲಿ ₹44.72 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಅಮೃತ 2.0 ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದೇ ಕುಂಟುತ್ತ ಸಾಗುತ್ತಿದೆ.</p>.<p>23 ವಾರ್ಡ್ಗಳಿಗೆ ನಿರಂತರ ಕುಡಿಯುವ ನೀರೊದಗಿಸುವ ಗುರಿಯೊಂದಿಗೆ ಆರಂಭವಾದ ಈ ಮಹತ್ವಾಕಾಂಕ್ಷಿ ಯೋಜನೆಯು ಜೂನ್ 2026ರೊಳಗೆ ಪೂರ್ಣಗೊಳ್ಳಬೇಕಾಗಿದೆ. ಇದುವರೆಗೆ ಕೇವಲ ಶೇ 60ರಷ್ಟು ಕಾಮಗಾರಿ ಆಗಿದೆ.</p>.<p>2025ರ ಜನವರಿಯಲ್ಲಿ ಬಿಹಾರ ಮೂಲದ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದ್ದು, ಒಂದೂವರೆ ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗಡುವು ನಿಗದಿಪಡಿಸಲಾಗಿತ್ತು. ಆದರೆ, ಆರಂಭಿಕ ಹಂತದಲ್ಲೇ ಸಹಕಾರದ ಕೊರತೆ ಹಾಗೂ ತಾಂತ್ರಿಕ ಅಡಚಣೆಗಳಿಂದ ಕೆಲಸ ವಿಳಂಬವಾಗಿದೆ. ಗುತ್ತಿಗೆದಾರರ ನಿಧಾನಗತಿಯೂ ಯೋಜನೆಯ ಪ್ರಗತಿಗೆ ಅಡ್ಡಿಯಾಗಿದೆ.</p>.<p>ಕೆಲವು ವಾರ್ಡ್ಗಳಲ್ಲಿ ಮುಖ್ಯ ಪೈಪ್ಲೈನ್ ಅಳವಡಿಕೆ ನಡೆದಿದ್ದರೂ, ಇನ್ನೂ ಅನೇಕ ಪ್ರದೇಶಗಳಲ್ಲಿ ಕಾಮಗಾರಿಯೇ ಆರಂಭವಾಗಿಲ್ಲ. ರಸ್ತೆ ತೋಡಿಕೆ ಬಳಿಕ ಮರು ಸಂರಚನೆ ಮಾಡದೇ ಬಿಟ್ಟಿರುವುದರಿಂದ ಸಾರ್ವಜನಿಕರಿಗೆ ಸಂಚಾರದ ಸಮಸ್ಯೆ ಉಂಟಾಗಿದೆ. ದೂಳು ಹಾಗೂ ಅಸಮರ್ಪಕ ಕೆಲಸದಿಂದ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.</p>.<p>ಬೇಸಿಗೆ ತೀವ್ರವಾಗುತ್ತಿರುವ ಸಂದರ್ಭದಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿರುವುದರಿಂದ, ಈ ಯೋಜನೆಯ ವಿಳಂಬ ಜನರಿಗೆ ಹೆಚ್ಚುವರಿ ಸಂಕಷ್ಟ ತಂದೊಡ್ಡಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಕ್ಷಣವೇ ಕಾಮಗಾರಿಗೆ ವೇಗ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಲ್ಲವಾದರೆ ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳುವುದು ಅನುಮಾನ.</p>.<p>ಮಸ್ಕಿ ಪಟ್ಟಣದಲ್ಲಿ 97 ಕಿ.ಮೀ ಪೈಪ್ ಅಳವಡಿಸಬೇಕು. ಈಗಾಗಲೇ 60 ಕಿ.ಮೀ ಪೈಪ್ ಅಳವಡಿಕೆಯಾಗಿದೆ ಎಂದು ನಗರ ನೀರು ಸರಬರಾಜು ಮಂಡಳಿ ಕಾರ್ಯನಿರ್ವಾಹಕ ಎಂಜಜಿನಿಯರ್ ಗುರುರಾಜ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>4,700 ಮನೆಗಳಿಗೆ ಸಂಪರ್ಕ ಕೊಡಬೇಕು. 670 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಬಾಕಿ ಇದೆ. ಜುಲೈಗೆ ಕಾಮಗಾರಿ ಮುಗಿಯಬೇಕು. ಆದರೆ ಸೆಪ್ಟೆಂಬರ್ ಒಳಗೆ ಪೈಪ್ಲೈನ್ ಕಾಮಗಾರಿ ಮುಗಿಯಲಿದೆ. ಇದುವರೆಗೂ ಶೇ 60ರಷ್ಟು ಪೂರ್ಣಗೊಳಿಸಲಾಗಿದೆ ಎಂದರು.</p>.<div><blockquote>ಅಮೃತ ಯೋಜನೆ ಗುತ್ತಿಗೆ ಪಡೆದಿರುವ ಕಂಪನಿ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಬೇಗ ಮುಗಿಸಲು ಸೂಚಿಸಲಾಗುವುದು</blockquote><span class="attribution"> ಸುರೇಶ ಹರಸೂರು, ಅಧ್ಯಕ್ಷರು ಪುರಸಭೆ ಮಸ್ಕಿ</span></div>.<div><blockquote>ಯೋಜನೆಗೆ ದೊಡ್ಡ ಮೊತ್ತ ಖರ್ಚಾದರೂ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಜನರ ನೀರಿನ ಸಮಸ್ಯೆ ಮುಂದುವರಿಯುತ್ತದೆ</blockquote><span class="attribution"> ಎಂ.ಅಮರೇಶ ಜಿಲ್ಲಾಧ್ಯಕ್ಷ ಜನ ಜಾಗೃತಿ ವೇದಿಕೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>