ಹಿಂದೂ ಸಂಪ್ರದಾಯದಂತೆ ನದಿಯಲ್ಲಿ ಪಿಂಡಪ್ರದಾನ, ತರ್ಪಣ ಹಾಗೂ ಸ್ನಾನಕ್ಕೆ ಅವಕಾಶ ಮಾಡಬೇಕು ಎಂದು ಕರ್ನೂಲ್ ಜಿಲ್ಲಾಡಳಿತಕ್ಕೆ ಅಲ್ಲಿನ ವಿಶ್ವ ಹಿಂದೂ ಪರಿಷತ್ ಘಟಕವು ಒತ್ತಾಯಿಸಿದೆ. 'ಪುಷ್ಕರ ಮೇಳ ನಡೆಯುವ ದಿನಗಳಲ್ಲಿಮಠ ದಲ್ಲಿ ರಾಯರ ದರ್ಶನಕ್ಕಾಗಿ ಭಕ್ತರಿಗೆ ಅನು ಕೂಲ ಕಲ್ಪಿಸುವ ವ್ಯವಸ್ಥೆ ಯನ್ನು ಶ್ರೀಗಳು ಮಾಡಿದ್ದಾರೆ. ನದಿಸ್ನಾನಕ್ಕೆ ಸಂಬಂಧಿಸಿ ದಂತೆ ಭಕ್ತರು ಆಂಧ್ರ ಪೊಲೀಸರ ಸೂಚನೆ ಅನುಸರಿಸಬೇಕಾಗುತ್ತದೆ. ಸಂಪ್ರದಾಯ ಪಾಲನೆಗಾಗಿ ಸ್ನಾನದ ವೇಳೆ ಕೆಲ ಸಡಿಲಿಕೆಗಳನ್ನು ಮಾಡುವಂತೆ ಕರ್ನೂ ಲ್ ಜಿಲ್ಲಾಡಳಿತಕ್ಕೆ ಮಂತ್ರಾಲಯ ಶ್ರೀ ಕೇಳಿದ್ದಾರೆ. ಗುರುವಾರ ಸಂಜೆ ವೇಳೆಗೆ ಈ ಬಗ್ಗೆ ಜಿಲ್ಲಾಡಳಿತ ಸ್ಪಷ್ಟ ನಿರ್ದೇಶನ ಬರಬಹುದು' ಎಂದು ಮಂತ್ರಾಲಯ ಮಠದ ಮಾಧ್ಯಮ ಸಂಯೋಜಕ ಶ್ರೀನಿವಾಸ ರಾವ್ ಎಸ್.ಕೆ ‘ಪ್ರಜಾವಾಣಿ’ ತಿಳಿಸಿದರು.