ತಂದೆ ತತ್ವ ಪದಕಾರರಾಗಿದ್ದರು, ತಾಯಿ ಜನಪದ ಹಾಡುಗಳನ್ನು ಹಾಡುತ್ತಿದ್ದರು. ಹೀಗಾಗಿ ಬಾಲ್ಯದಿಂದಲೇ ಜಾನಪದವನ್ನು ಮೈಗೂಡಿಸಿಕೊಂಡಿರುವ ಪ್ರಕಾಶಯ್ಯ ಅವರು, ಪೌರಾಣಿಕ ಕಥೆಗಳನ್ನು ಗೀಗಿ ಪದಗಳಲ್ಲಿ ಹಾಡುವ ಮೂಲಕ ಜನರನ್ನು ಪುಳಕೀತಗೊಳಿಸುತ್ತಿದ್ದರು. ಆನಂತರ ಸರ್ಕಾರಿ ಯೋಜನೆಗಳು ಮತ್ತು ಜನಜಾಗೃತಿಯತ್ತ ಗೀಗೀ ಪದ ಕಲೆ, ವೀರಗಾಸೆ ಮತ್ತು ಲಾವಣಿಯನ್ನು ಬಳಕೆ ಮಾಡುವುದಕ್ಕೆ ಆರಂಭಿಸಿದರು.