ಲಿಂಗಸುಗೂರು: ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ‘ಬಾಲ್ಯ ವಿವಾಹ ತಡೆಯೋಣ’ ಜಾಗೃತಿ ಅಭಿಯಾನದ ರಥವನ್ನು ಶನಿವಾರ ಹೊನ್ನಹಳ್ಳಿ ಗ್ರಾಮದಲ್ಲಿ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಶ್ರೀದೇವಿ ಹಿರೇಮಠ ಸ್ವಾಗತಿಸಿದರು.
ಮೇಲ್ವಿಚಾರಕಿ ಶ್ರೀದೇವಿ ಹಿರೇಮಠ ಮಾತನಾಡಿ, ‘ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಅಪೌಷ್ಟಿಕತೆ ನಿವಾರಣೆ, ಮಕ್ಕಳ ಪಾಲನೆ–ಪೋಷಣೆ, ಕಾನೂನಾತ್ಮಕ ರಕ್ಷಣೆ ಜತೆಗೆ ಬಾಲ್ಯ ವಿವಾಹಕ್ಕೆ ಒಳಗಾಗದಂತೆ ಪೋಷಕರು ಎಚ್ಚರಿಕೆ ವಹಿಸಬೇಕು’ ಎಂದು ಅವರು ಹೇಳಿದರು.
ಇಲ್ಲದೆ ಹೋದಲ್ಲಿ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಜಾಗೃತಿ ಅಭಿಯಾನ: ಬಾಲ್ಯ ವಿವಾಹ ತಡೆಯೋಣ ರಥವನ್ನು ಸ್ವಾಗತಿಸಿಕೊಂಡು ಅಂಗನವಾಡಿ ನೌಕರರು ಹೊನ್ನಹಳ್ಳಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಅಭಿಯಾನ ನಡೆಸಿದರು.
ಮನೆ ಮನೆಗೆ ತೆರಳಿ ಕರಪತ್ರ ವಿತರಿಸುವುದರ ಜತೆಗೆ ಮಕ್ಕಳ ಕಾನೂನು, ತಪ್ಪು ಕಂಡು ಬಂದಲ್ಲಿ ಎದುರಾಗುವ ಕಾನೂನು ಕ್ರಮಗಳ ಕುರಿತು ಮನವರಿಕೆ ಮಾಡಿಕೊಟ್ಟರು.