ವಿವಿಧ ರಾಜ್ಯಗಳ ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಅಂತಿಮ ಪಂದ್ಯದಲ್ಲಿ ಕರ್ನಾಟಕ ರಾಜ್ಯ ತಂಡದ ಸದಸ್ಯರು ಉತ್ತಮ ಪ್ರದರ್ಶನ ತೋರಿದ್ದರು. ರಾಜ್ಯ ತಂಡದಲ್ಲಿ ಉತ್ತಮ ಸಾಧನೆ ಮಾಡಿದ್ದ ಮಾನ್ವಿ ಪಟ್ಟಣದ ಲೊಯೋಲಾ ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ಸುದರ್ಶನ್, ಚಂದ್ರಕಾಂತ, ಶ್ರೇಯಸ್ , ಎಸ್ಆರ್ಎಸ್ವಿ ಕಾಲೇಜಿನ ಮತಿಯಾಸ್ ಹಾಗೂ ರವಿಕಿರಣ್, ಸಿಂಧನೂರಿನ ಎಸ್.ಪ್ರದೀಪ್ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿತ್ತು .