ಲೋಕಸಭೆ ಚುನಾವಣೆ ಸಮೀಸುತ್ತಿರಿವುದರಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪ್ರತಿ ವಾರದಲ್ಲಿ ಎರಡು ಬಾರಿ ಆಯಾ ಇಲಾಖೆಗಳಲ್ಲಿ ಮತದಾರರ ಜಾಗೃತಿ ಜಾಥಾ, ಘೋಷಣೆ, ಪ್ರತಿಜ್ಞಾ ವಿಧಿ ಕಾರ್ಯಕ್ರಮ ಮಾಡಿ ನಂತರ ವರದಿಯನ್ನು ಜಿಲ್ಲಾಡಳಿತಕ್ಕೆ ಹಾಗೂ ವಾರ್ತಾ ಇಲಾಖೆಯ ವಿಳಾಸಕ್ಕೆ ಮಾಹಿತಿ ಜೊತಗೆ ಪೋಟೋಗಳನ್ನು ಕಳುಹಿಸಿ ಪತ್ರಿಕೆಗಳ ಮುಖಾಂತರ ಮತದಾನದ ಅರಿವು ಮೂಡಿಸಬೇಕು. ಒಂದು ವೇಳೆ ನಿರ್ಲಕ್ಷ್ಯವಹಿಸಿದರೇ ಅಂತಹ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ ಕ್ರಮ ಜರುಗಿಸಲಾಗುವುದೆಂದು ಯೋಜನಾಧಿಕಾರಿ ಡಾ.ರೋಣಿ ತಿಳಿಸಿದರು.