ಹಿರಿಯ ಸಾಹಿತಿ ವೀರಹನುಮಾನ ಮಾತನಾಡಿ, ರಾಯಚೂರು ಕನ್ನಡದ ಗಜಲ್ ಸಾಹಿತ್ಯದ ರಾಜಧಾನಿಯಾಗಿದ್ದು ಈಗ ಹಲವಾರು ಸಾಹಿತಿಗಳು ಹೈಕು ಸಂಕಲನ ರಚನೆ ಮಾಡುವ ಮೂಲಕ ಹೈಕು ರಾಜಧಾನಿಯಾಗಿ ಮಾರ್ಪಾಡು ಮಾಡಲು ಹೊರಟಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಯುವ ಕವಿಗಳು ಹೆಚ್ಚಾಗಿ ಪ್ರೇಮ, ಪ್ರಾಕೃತಿಕ ಸೌಂದರ್ಯದ ಕುರಿತು ಬರೆಯುವುದು ಸಾಮಾನ್ಯ. ಆದರೆ, ಹೈಕುದಂತಹ ಸಾಹಿತ್ಯಕ್ಕೆ ಹೆಚ್ಚಿನ ಒಲವು ನೀಡಿ ಸಾಮಾಜಿಕ ಜವಾಬ್ದಾರಿ, ಅನಿಷ್ಟ, ಮೂಢನಂಬಿಕೆಗಳ ವಿರುದ್ಧ ಬರೆದ ಶಿವಶಂಕರ್ ಅವರ ಕಾರ್ಯ ಅಭಿನಂದನೀಯ. ಇನ್ನೂ ಹೆಚ್ಚಿನ ಪುಸ್ತಕಗಳನ್ನು ಹೊರತಂದು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂದು ಹಾರೈಸಿದರು.