ಕೃತಿ ಲೋಕಾರ್ಪಣೆ ಮಾಡಿದ ಪ್ರಾಧ್ಯಾಪಕಿ ಶೀಲಾದಾಸ ಅವರು ಮಾತನಾಡಿ, ಧರೆಗಿಳಿದು ಬಾ ಮಳೆಯೆ ಕೃತಿಯಲ್ಲಿ ಧರೆ ಮತ್ತು ಮಳೆ ಬದುಕಿನ ಹತ್ತಿರವಾದ ಪದಗಳು. ಮಳೆಯ ಬಗ್ಗೆ ಹಿರಿಯ ಸಾಹಿತಿಗಳಿಂದ ಹಿಡಿದು, ಕಿರಿಯ ಸಾಹಿತಿಗಳು ಕಾವ್ಯ ರಚಿಸಿದ್ದಾರೆ. ಮಳೆಯು ಕಾವ್ಯಕ್ಕೆ ಪ್ರೀತಿಯ ವಸ್ತು. ಕಾವ್ಯಗಳಲ್ಲಿ ಬದುಕಿನ ಚಿತ್ರಣಗಳು ಎದ್ದುಕಾಣುತ್ತವೆ. ಹಾಗೆಯೇ ವಿದ್ಯಾರ್ಥಿ ಪ್ರಿಯಾಂಕ ಅವರ ಕಾವ್ಯರಚನೆ, ಆಶಾಭಾವನೆ ಮೂಡಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.