ದೇವದುರ್ಗ ತಾಲ್ಲೂಕು ಮದರಕಲ್ ಗ್ರಾಮದ ಮಲ್ಲೇಶ (14) ಮೃತ ಬಾಲಕ. ಪಾಲಕರೊಂದಿಗೆ ಮುಂಬೈನಿಂದ ಮೇ 16 ರಂದು ಬಂದಿದ್ದ ಬಾಲಕನಿಗೆ ಹೊಟ್ಟೆನೋವು ಶುರುವಾಗಿದ್ದರಿಂದ ಗುರುವಾರ ಬೆಳಗಿನ ಜಾವ ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ತರಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಬಾಲಕನ ಗಂಟಲು ದ್ರುವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.